ಹಾವೇರಿ/ದಾವಣಗೆರೆ : ಪತ್ನಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಪತ್ನಿ ಬದುಕುಳಿದ ಘಟನೆ ದಾವಣಗೆರೆ ಜಿಲ್ಲೆಯ ಹಾವೇರಿ ತಾಲೂಕಿನ ನಂದಿಗುಡಿ ಸೇತುವೆ ಬಳಿ ನಡೆದಿದೆ.


COMMERCIAL BREAK
SCROLL TO CONTINUE READING

ಪತಿ ರೂಪೇಶ್ ಗೌಡ ತನ್ನ ಪತ್ನಿ ಅರುಣಾ ಕುಮಾರಿಯನ್ನು ಉಕ್ಕದಗಾತ್ರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಗುರುವಾರ ತಡರಾತ್ರಿ ಆಕೆಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ. ಆದರೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ಬಳಿ ಇರುವ ತುಂಗಭದ್ರಾ ನದಿ ಸೇತುವೆ ಮೇಲಿಂದ ಪತ್ನಿಯನ್ನು ತಳ್ಳಿ ಅಲ್ಲಿಂದ ಪರಾರಿಯಾಗಿದ್ದ. ಈ ಮೂಲಕ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.


ಆದರೆ, ನೀರಿಗೆ ಬಿದ್ದ ಮಹಿಳೆ ಅದೃಷ್ಟವಶಾತ್ ಬದುಕುಳಿದು ರಾತ್ರಿಯಿಡೀ ಬಂಡೆಯೊಂದನ್ನು ಹಿಡಿದು ನಿನಿನಲ್ಲಿ ಕಾದಿದ್ದಾಳೆ. ನಂತರ ಬೆಳಿಗ್ಗೆ ಗ್ರಾಮಸ್ಥರ ಸಹಾಯದಿಂದ ನದಿಯಿಂದ ಹೊರ ಬಂದಿದ್ದಾಳೆ. ನಂತರ ಆಕೆಯನ್ನು ಗ್ರಾಮಸ್ಥರೇ ಆಸ್ಪತ್ರೆಗೆ ಸೇರಿಸಿದ್ದಾರೆ. 


ಸದ್ಯ ಚೇತರಿಸಿಕೊಂಡಿರುವ ಮಹಿಳೆ ಪತಿಯ ವಿರುದ್ಧ ರಟ್ಟಿಹಳ್ಳಿ ಪೋಲಿಸ್  ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪತ್ನಿಯನ್ನು ನದಿಗೆ ತಳ್ಳಿ ನೆಮ್ಮದಿಯಿಂದ ಹಿಂದುರಿಗಿದ್ದ ಪತಿಗೆ, ಆಕೆ ಮರಳಿ ಬಂದದ್ದು ಕಂಡು ಆಘಾತವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.