ಬೆಳಗಾವಿ: ಇಲ್ಲಿನ ಹೊರವಲಯದಲ್ಲಿರುವ ಸುವರ್ಣ ವಿಧಾನಸೌಧ ಮೆಟ್ಟಿಲುಗಳ ಮೇಲೆ ಕಾರ್ಮಿಕ ಮಹಿಳೆಯರು ಶ್ಯಾವಿಗೆಯನ್ನು ಒಣಹಾಕಿದ್ದಾರೆ. ಈ ಘಟನೆ ಕಳೆದ ದಿನ ಮಧ್ಯಾಹ್ನ ನಡೆದಿದ್ದು, ಇದರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಸಾಂಬ್ರಾ ಮೂಲದ ಕಾರ್ಮಿಕ ಮಹಿಳೆಯೊಬ್ಬರು ಸುವರ್ಣ ವಿಧಾನಸೌಧದಲ್ಲಿ ಕೆಲಸ ಮಾಡುವ ಮಹಿಳೆಗೆ ಶ್ಯಾವಿಗೆ ತಂದುಕೊಟ್ಟಿದ್ದಾರೆ. ಶ್ಯಾವಿಗೆಯು ಹಸಿಯಾಗಿತ್ತು ಎಂದು ಅದನ್ನು ಸೀರೆ ಹಾಯಿಸಿ ಸುವರ್ಣ ವಿಧಾನಸೌಧ ಮೆಟ್ಟಿಲುಗಳ ಮೇಲೆ ಒಣಹಾಕಿದ್ದಾರೆ. 


ಇದನ್ನು ಓದಿ: Ganesh Puja Tips: ಬುಧವಾರ ಗಣಪನ ಪೂಜೆಯಲ್ಲೂ ಮರೆತೂ ಈ ವಸ್ತುಗಳನ್ನು ಅರ್ಪಿಸಬೇಡಿ


ಮಧ್ಯಾಹ್ನದ ವೇಳೆ ಪ್ಯಾಟ್ರೋಲಿಂಗ್‌ಗೆ ಆಗಮಿಸಿದ ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಅವರು ಒಣ ಹಾಕಿರುವ ಶ್ಯಾವಿಗೆಯನ್ನು  ತೆರವುಗೊಳಿಸಿದ್ದಾರೆ. ಬಳಿಕ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಘಟನೆಯ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿದೆ.  


ಕರ್ನಾಟಕದ ಎರಡನೇ ಶಕ್ತಿ ಕೇಂದ್ರ ಎಂದು ಖ್ಯಾತಿ ಗಳಿಸಿರುವ 450 ಕೋಟಿ ವೆಚ್ಚದ ಸುವರ್ಣ ಸೌಧದ ಮುಂದೆ ಮಹಿಳೆ ಶ್ಯಾವಿಗೆಯನ್ನು ಒಣ ಹಾಕಿರುವುದು ನಗೆಪಾಟಲಿಗೀಡಾಗುವಂತ ವಿಚಾರ. 


​ಇದನ್ನು ಓದಿ: Vegetable Price: ಗ್ರಾಹಕರೇ ಸಿಹಿ ಸುದ್ದಿ: ಕರ್ನಾಟಕದಲ್ಲಿ ತರಕಾರಿ ಬೆಲೆ ಹೀಗಿದೆ


ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಸ್ಥಾಪನೆಯಾಗಿ 12 ವರ್ಷ ಕಳೆದಿದೆ. ಆದರೆ ಸುವರ್ಣ ವಿಧಾನಸೌಧದ ಸದ್ಬಳಕೆ ಮಾತ್ರ ಆಗುತ್ತಿಲ್ಲ ಎಂಬುದೇ ಉತ್ತರ ಕರ್ನಾಟಕ ಜನರ ಆರೋಪ. ಇದೀಗ ಇಂತಹ ಘಟನೆಗಳು ನಡೆಯುತ್ತಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.