ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಧಾನಿ ಮೋದಿಯವರ ಗುರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗವಾಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ತಮ್ಮ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ "ನರೇಂದ್ರ ಮೋದಿಯವರೇ  ನೀವು  ಕರ್ನಾಟಕದಲ್ಲಿ 'ಮಿಶನ್' ಸರ್ಕಾರದ  ಕುರಿತಾಗಿ ತಾವು ಹೇಳಿಕೆ ನೀಡಿದ್ದಿರಿ ಹಾಗಾದರೆ 2 ಅಂಶಗಳು ತಮಗೆ ನೆನಪಿರಲಿ.



ಮೊದಲನೆಯದಾಗಿ ದೆಹಲಿಯಲ್ಲಿ ನಿಮ್ಮ ಮಿಶನ್ ವಿಫಲವಾಗಿದೆ, ಛೋಟಾ ಮೋದಿ ನಿಮ್ಮ ಕಣ್ಣೆದುರಿಗೆ 12 ಸಾವಿರ ಕೋಟಿ ರೂಪಾಯಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ, ಅದನ್ನು ಸರಿಪಡಿಸಿ ಎನ್ನುವ ರೀತಿಯಲ್ಲಿ ಸಿದ್ದು ಟಾಂಗ್ ನೀಡಿದ್ದಾರೆ. ಅಲ್ಲದೆ  ಪ್ರಧಾನಿಗಳು ರೈತರಿಗೆ ಆಫರ್ ನೀಡುವಂತದ್ದು ಏನು ಉಳಿದಿಲ್ಲ ಎಂದು ಟ್ವೀಟ್ ಮೂಲಕ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.