Astrology Predictions: ಪ್ರಸ್ತುತ ಶುಕ್ರ, ಬುಧ ಹಾಗೂ ಸೂರ್ಯರು ವೃಶ್ಚಿಕ ರಾಶಿಯಲ್ಲಿ ವಿರಾಜಮಾನರಾಗಿದ್ದಾರೆ. ಶುಕ್ರ, ಬುಧ ಹಾಗೂ ಸೂರ್ಯರನ್ನು ಜೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನ ಪ್ರಾಪ್ತಿಯಿದೆ. ಈ ಮೂರು ಗ್ರಹಗಳು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಭಾಗ್ಯೋದಯ ನಿಶ್ಚಿತ ಎಂದು ಹೇಳಲಾಗುತ್ತದೆ. ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಶುಕ್ರ, ಬುಧ ಹಾಗೂ ಸೂರ್ಯರು ಪ್ರಸ್ತುತ ಕೆಲ ರಾಶಿಗಳ ಜನರ ಮೇಲೆ ವಿಶೇಷ ಕೃಪೆ ಹರಿಸುತ್ತಿದ್ದಾರೆ ಎನ್ನಲಾಗಿದೆ. ಈ ರಾಶಿಗಳ ಜನರ ಮುಂಬರುವ ದಿನಗಳು ವರದಾನಕ್ಕೆ ಸಮಾನ ಎನ್ನಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ. 


COMMERCIAL BREAK
SCROLL TO CONTINUE READING

ಮೇಷ ರಾಶಿ
ಆತ್ಮವಿಶ್ವಾಸದಲ್ಲಿ ಹೆಚ್ಚಳ, ತಾಯಿಯಿಂದ ಧನಾಗಮನದ ಸಾಧ್ಯತೆ ಇದೆ. ದಾಂಪತ್ಯ ಸುಖದಲ್ಲಿ ಹೆಚ್ಚಳವಾಗಲಿದೆ. ಗೆಳೆಯರ ಸಹಾಯದಿಂದ ಹೊಸ ಉದೋಗದ ಅವಕಾಶ ಕುದುರಲಿದೆ. ಆದಾಯ ಹೆಚ್ಚಾಗಲಿದೆ. ಕುಟುಂಬದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ನೌಕರಿಯಲ್ಲಿ ಬಡ್ತಿಯ ಯೋಗಗಳು ನಿರ್ಮಾಣಗೊಳ್ಳುತ್ತಿವೆ.


ಮಿಥುನ ರಾಶಿ
ಸಂತಾನದ ಕಡೆಯಿಂದ ನೆಮ್ಮದಿಯ ಸುದ್ದಿ ಸಿಗುವ ಸಾಧ್ಯತೆ ಇದೆ. ಶೈಕ್ಷಣಿಕ ಹಾಗೂ ಬೌದ್ಧಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ ಹಾಗೂ ಘನತೆ-ಗೌರವ ಹೆಚ್ಚಾಗಲಿದೆ. ಕುಟುಂಬದಲ್ಲಿ ಶಾಂತಿ ಇರಲಿದೆ. ಕುಟುಂಬ ಸದಸ್ಯರ ಜೊತೆಗೆ ಯಾತ್ರೆ ಕೈಗೊಳ್ಳುವಿರಿ. ತಾಯಿಯ ಬೆಂಬಲ ಸಿಗಲಿದೆ. ನಿಮ್ಮ ರಾಜಕೀಯ ಮಹತ್ವಾಕಾಂಕ್ಷೆ ಈಡೇರಲಿದೆ.


ವೃಶ್ಚಿಕ ರಾಶಿ
ಆಸ್ತಿಪಾಸ್ತಿಗಳಿಂದ ಆದಾಯ ಹೆಚ್ಚಾಗಲಿದೆ. ತಾಯಿಯ ಕಡೆಯಿಂದ ಧನಪ್ರಾಪ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಲೆ ಹಾಗೂ ಸಂಗೀತದ ಪ್ರತಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ನೌಕರಿಯಲ್ಲಿ ಕಾರ್ಯಕ್ಷೇತ್ರದ ಬದಲಾವಣೆಯಾಗುವ ಸಾಧ್ಯತೆ ಇದೆ . ಸ್ಥಾನಪಲ್ಲಟದ ಬದಲಾವಣೆ ಕೂಡ ಇದೆ. ಆದಾಯ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ನೆಮ್ಮದಿಯಿಂದ ಕೂಡಿರಲಿದೆ. ಸಂತಾನದ ವತಿಯಿಂದ ಒಳ್ಳೆಯ ಸಮಾಚಾರ ಸಿಗಲಿದೆ. ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ವಾಹನ ಸುಖದಲ್ಲಿ ವಿಸ್ತರಣೆಯ ಸಾಧ್ಯತೆ ಇದೆ.


ಇದನ್ನೂ ಓದಿ-Vastu Tips: ಈ ಶಕ್ತಿಶಾಲಿ ಸಸ್ಯದಿಂದ ಮನೆಯ ಎಲ್ಲಾ ವಾಸ್ತು ದೋಷಗಳಿಗೆ ಪರಿಹಾರ..!

ಮೀನ ರಾಶಿ
ಆತ್ಮವಿಶ್ವಾಸ ಹೆಚ್ಚಾಗಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಲಿವೆ. ಸಂತಾನ ಸುಖ ಹೆಚ್ಚಾಗಲಿದೆ. ಅತಿಯಾದ ಕೋಪವನ್ನು ತಪ್ಪಿಸಿ. ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಾಗಿ ನೀವು ವಿದೇಶಕ್ಕೆ ತೆರಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನೌಕರಿಯಲ್ಲಿ ಕಾರ್ಯಕ್ಷೇತ್ರದ ಬದಲಾವಣೆ ಹಾಗೂ ಸ್ಥಾನಪಲ್ಲತದ ಸಾಧ್ಯತೆಗಳು ಕೂಡ ಗೋಚರಿಸುತ್ತಿವೆ. ಮನಸ್ಸಿನಲ್ಲಿ ಶಾಂತಿ ಹಾಗೂ ಪ್ರಸನ್ನತೆಯ ಭಾವ ಇರಲಿದೆ. ನೀವು ಈ ಅವಧಿಯಲ್ಲಿ ಸಂಪೂರ್ಣ ಆತ್ಮವಿಶ್ವಾಸದಿಂದ ತುಂಬಿರುವಿರಿ. ತಾಯಿ ಅಥವಾ ಕುಟುಂಬದ ಯಾವುದೇ ಓರ್ವ ಹಿರಿಯ ಮಹಿಳಾ ಸದಸ್ಯರಿಂದ ನಿಮಗೆ ಧನಪ್ರಾಪ್ತಿಯಾಗಲಿದೆ. ನೌಕರಿಯಲ್ಲಿ ಮೇಲಾಧಿಕಾರಿಗಳ ಬೆಂಬಲ ನಿಮಗೆ ಸಿಗಲಿದೆ ಜೊತೆಗೆ ಸ್ಥಾನ ಪಲ್ಲಟದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.


ಇದನ್ನೂ ಓದಿ-Chanakya Niti : ಕೆಳಗೆ ಬಿದ್ದಈ ವಸ್ತುಗಳು ತೆಗೆದುಕೊಳ್ಳಲು ಹಿಂಜರಿಯಬೇಡಿ, ಇದರಿಂದ ನಿಮಗಿದೆ ಆರ್ಥಿಕ ಲಾಭ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.