ಬೆಂಗಳೂರು: ಸನಾತನ ಧರ್ಮದಲ್ಲಿ ವಾರದ ಪ್ರತಿಯೊಂದು ದಿನಕ್ಕೆ ಕೆಲ ನಿಯಮಗಳನ್ನು ಹೇಳಲಾಗಿದೆ. ಇದರೊಂದಿಗೆ ವಾರದ ಯಾವ ದಿನ ಯಾವ ಕೆಲಸ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನೂ ಕೂಡ ತಿಳಿಸಲಾಗಿದೆ. ಈ ನಿಯಮಗಳನ್ನು ಅನುಸರಿಸಿದರೆ, ಜೀವನದಲ್ಲಿ ಎಂದಿಗೂ ಸಂಪತ್ತಿಗೆ ಕೊರತೆ ಎದುರಾಗುವುದಿಲ್ಲ. ಮತ್ತೊಂದೆಡೆ, ತಪ್ಪು ಸಮಯದಲ್ಲಿ (Lifestyle News In Kannada) ಮಾಡಿದ ಕೆಲಸವು ವ್ಯಕ್ತಿಯನ್ನು ಬಡತನಕ್ಕೆ ತಳ್ಳುತ್ತದೆ. ತಲೆ ಕೂದಲು ಕತ್ತರಿಸುವುದು ಕೂಡ ಅಂತಹ ಕೆಲಸಗಳಲ್ಲಿ ಒಂದು. ಹಿಂದೂ ಧರ್ಮದಲ್ಲಿ ಕೂದಲು ಕತ್ತರಿಸಲು ಶುಭ ಮತ್ತು ಅಶುಭ ದಿನಗಳಿವೆ. ಆದಾಗ್ಯೂ, ಈ ನಿಯಮಗಳನ್ನು ಬೈಪಾಸ್ ಮಾಡಿ, ಜನರು ಭಾನುವಾರದಂದು ಕ್ಷೌರ ಮಾಡಿಸಿಕೊಳ್ಳುತ್ತಾರೆ, ಆದರೆ ಮಹಾಭಾರತದಲ್ಲಿ ಭಾನುವಾರ ಸೂರ್ಯನ ದಿನ ಮತ್ತು ಭಾನುವಾರ ಮಾಡಿಸಿಕೊಳ್ಳುವ ಕ್ಷೌರವು ಸಂಪತ್ತು, ಬುದ್ಧಿವಂತಿಕೆ ಮತ್ತು ಧರ್ಮವನ್ನು ನಾಶಪಡಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ವಾರದ ಯಾವ ದಿನ ಕೂದಲು ಮತ್ತು ಗಡ್ಡವನ್ನು ಕತ್ತರಿಸುವುದು (Hari Cut Tips) ಶುಭ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ಕ್ಷೌರ ಮಾಡಿಕೊಳ್ಳಲು ಅತ್ಯುತ್ತಮ ದಿನ


ಸೋಮವಾರ- ಸೋಮವಾರ ಕೂದಲು ಕತ್ತರಿಸುವುದು ಒಳ್ಳೆಯದಲ್ಲ. ಹೀಗೆ  ಮಾಡುವುದರಿಂದ, ಮಗು ಬಳಲುತ್ತದೆ, ಜೊತೆಗೆ ವ್ಯಕ್ತಿಯಲ್ಲಿ ಮಾನಸಿಕ ದೌರ್ಬಲ್ಯವು ಹೆಚ್ಚಾಗುತ್ತದೆ.


ಮಂಗಳವಾರ- ಮಂಗಳವಾರದಂದು ಕೂದಲು ಕತ್ತರಿಸುವುದರಿಂದ ಜೀವಿತಾವಧಿ ಕಡಿಮೆಯಾಗುತ್ತದೆ. ಮತ್ತೊಂದೆಡೆ, ಮಂಗಳವಾರ ಕ್ಷೌರ ಮಾಡುವುದರಿಂದ ಸಾಲದಿಂದ ಮುಕ್ತಿ ಸಿಗುತ್ತದೆ ಎಂಬುದು ಕೆಲವರ ಅಭಿಪ್ರಾಯ.


ಬುಧವಾರ- ಬುಧವಾರ ಉಗುರುಗಳು ಮತ್ತು ಕೂದಲು ಕತ್ತರಿಸಲು ಬಹಳ ಮಂಗಳಕರವಾಗಿದೆ. ಬುಧವಾರ ಕ್ಷೌರ ಮಾಡುವುದರಿಂದ ಸಂಪತ್ತು ಹೆಚ್ಚುತ್ತದೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.


ಗುರುವಾರ - ಗುರುವಾರ ಕೂದಲು ಕತ್ತರಿಸುವುದು ಅಥವಾ ಕ್ಷೌರ ಮಾಡುವುದು ತುಂಬಾ ಅಶುಭ ಫಲಿತಾಂಶಗಳನ್ನು ನೀಡುತ್ತದೆ, ಶ್ರೀ ವಿಷ್ಣು ಮತ್ತು ತಾಯಿ ಲಕ್ಷ್ಮಿ ಇದರಿಂದ ಮುನಿಸಿಕೊಳ್ಳುತ್ತಾರೆ. ಇದರಿಂದ ಧನಹಾನಿ, ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ.


ಶುಕ್ರವಾರ- ಶುಕ್ರವಾರ ಕ್ಷೌರಕ್ಕೆ ಅತ್ಯಂತ ಮಂಗಳಕರ ದಿನ. ಶುಕ್ರವಾರದಂದು ಉಗುರು ಮತ್ತು ಕೂದಲನ್ನು ಕತ್ತರಿಸುವುದರಿಂದ ಸೌಂದರ್ಯ ಹೆಚ್ಚುತ್ತದೆ. ಸಂಪತ್ತು-ವೈಭವ ಹೆಚ್ಚುತ್ತದೆ. ಕೀರ್ತಿ ಪ್ರಾಪ್ತಿಯಾಗುತ್ತದೆ.


ಶನಿವಾರ- ಶನಿವಾರ ಕ್ಷೌರ ಮಾಡುವ ತಪ್ಪನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಶನಿದೇವ ಮುನಿಸಿಕೊಳ್ಳುತ್ತಾನೆ ಮತ್ತು ಜೀವನವು ಕಷ್ಟಗಳಿಂದ ತುಂಬುತ್ತದೆ.


ಇದನ್ನೂ ಓದಿ -ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಯಾರು ಯಾವ ರತ್ನ ಧರಿಸಿದರೆ ಶುಭ?


ಭಾನುವಾರ- ಭಾನುವಾರದಂದು ಕೂದಲು ಕತ್ತರಿಸುವುದರಿಂದ ಸಂಪತ್ತು, ಬುದ್ಧಿವಂತಿಕೆ ಮತ್ತು ಧರ್ಮ ನಾಶವಾಗುತ್ತದೆ. ಇನ್ನೊಂದೆಡೆ ಇದರಿಂದ ಆತ್ಮಸ್ಥೈರ್ಯವೂ ಕಡಿಮೆಯಾಗುತ್ತಿದೆ.


ಇದನ್ನೂ ಓದಿ-ವಿವಾಹದ ಬಗ್ಗೆ ಭಾರತೀಯ ಮಹಿಳೆಯರು ಆಲೋಚನೆ ಏನು ಗೊತ್ತಾ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.