Mangalawar rituals:  ಭಾರತೀಯ ಸಂಸ್ಕೃತಿಯಲ್ಲಿ, ವಾರದ ಎಲ್ಲಾ ಏಳು ದಿನಗಳನ್ನು ಒಂದು ಅಥವಾ ಇನ್ನೊಂದು ದೇವತೆಯ ಆರಾಧನೆಗೆ ಮೀಸಲಿಡಲಾಗಿದೆ. ಮಂಗಳವಾರ ಹನುಮಾನ್‌ ದೇವರಿಗೆ ಸಮರ್ಪಿಸಲಾಗಿದೆ. ಜೋತಿಷ ಶಾಸ್ತ್ರದ ಪ್ರಕಾರ, ಕಠಿಣ ಪರಿಶ್ರಮದ ಹೊರತಾಗಿಯೂ ನಿಮ್ಮ ಕೆಲಸದಲ್ಲಿ ನೀವು ಸರಿಯಾದ ಫಲಿತಾಂಶವನ್ನು ಪಡೆಯದಿದ್ದರೆ, ಮಂಗಳವಾರ 5 ಕೆಲಸಗಳನ್ನು ಮಾಡಬೇಕು. ಹೀಗೆ ಮಾಡುವುದರಿಂದ, ಬಜರಂಗ ಬಲಿಯ ಕೃಪೆಯು ನಿಮಗೆ ಒಲಿಯುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ಜೀವನದಲ್ಲಿ ಒಂದರ ನಂತರ ಒಂದರಂತೆ ಸಮಸ್ಯೆಗಳನ್ನು ಎದುರಾಗುತ್ತಿದ್ದರೆ, ಅವುಗಳನ್ನು ತೊಡೆದುಹಾಕಲು ಮಂಗಳವಾರದಂದು ಈ ವಿಶೇಷ ಪರಿಹಾರವನ್ನು ಮಾಡಿ. ಇದಕ್ಕಾಗಿ ನೀವು ಮಂಗಳವಾರದಂದು ಹನುಮಾನ್ ದೇವಸ್ಥಾನಕ್ಕೆ ತೆರಳಿ ವಿಧಿ-ವಿಧಾನಗಳ ಪ್ರಕಾರ ಪೂಜೆ ಸಲ್ಲಿಸಬೇಕು. ನಂತರ ಹನುಮಾನ್ ಚಾಲೀಸಾ ಪಠಿಸಿ, ಆಗ ಅರ್ಥಕ್ಕೆ ನಿಂತ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತವೆ. 


ಇದನ್ನೂ ಓದಿ:  ಕುಂಡಲಿ ನೋಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ..! ಸಂಸಾರ ಹಾಳಾಗುತ್ತೆ


ಧಾರ್ಮಿಕ ವಿದ್ವಾಂಸರ ಪ್ರಕಾರ, ಭಜರಂಗ ಬಲಿಯ ಆಶೀರ್ವಾದ ಪಡೆಯಲು ಮಂಗಳವಾರ ಸಂಜೆ ಹನುಮಾನ್ ದೇವಸ್ಥಾನಕ್ಕೆ ಹೋಗಿ ಜಪಮಾಲೆಯನ್ನು ಅರ್ಪಿಸಬೇಕು. ಈ ಪರಿಹಾರವು ಬಜರಂಗ ಬಲಿಯನ್ನು ಸಂತೋಷಪಡಿಸುತ್ತದೆ ಮತ್ತು ಕುಟುಂಬಕ್ಕೆ ಅವನ ಆಶೀರ್ವಾದ ಲಭಿಸುವಂತೆ ಮಾಡುತ್ತದೆ. 


ನಿಂಬೆ-ಮೆಣಸಿನಕಾಯಿಯ ಪ್ರಯೋಜನಕಾರಿ ಪರಿಹಾರ : ನಿಮ್ಮ ಕೆಲಸದಲ್ಲಿ ಯಾವುದಾದರೂ ಅಡೆತಡೆಗಳಿದ್ದರೆ ಮಂಗಳವಾರದಂದು ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಪರಿಹಾರವನ್ನು ಮಾಡುವುದು ಒಳ್ಳೆಯದು. ಮೇಲ್ಭಾಗದಲ್ಲಿ 4 ಮೆಣಸಿನಕಾಯಿ ಮತ್ತು ಕೆಳಭಾಗದಲ್ಲಿ 4 ನಾಲ್ಕು ಮೆಣಸಿನಕಾಯಿಗಳನ್ನು ಕಟ್ಟಿ ಅದರ ನಡುವೆ ನಿಂಬೆಹಣ್ಣನ್ನು ನೇತುಹಾಕಿ. ಇದರ ನಂತರ ನಿಮ್ಮ ಮನೆ ಅಥವಾ ಕೆಲಸದ ಸ್ಥಳದಲ್ಲಿ ಈ ಹಾರವನ್ನು ಕಟ್ಟಿ. ಹೀಗೆ ಮಾಡುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ.


ಇದನ್ನೂ ಓದಿ:ಮಧುಮೇಹ ನಿಯಂತ್ರಣದಲ್ಲಿಸಿರುವುದು ಹೇಗೆ? ಸುಲಭ ಮಾರ್ಗಗಳು ಇಲ್ಲಿದೆ!


ಹನುಮಂತನ ಆಶೀರ್ವಾದ ಪಡೆಯಲು ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಆ ದೀಪಗಳ ನಡುವೆ ದೇಸಿ ತುಪ್ಪದ ದೀಪವನ್ನು ಹಚ್ಚಿ. ಇದಾದ ನಂತರ ಹನುಮಂತ ದೇವರ ಮುಂದೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸಿ.


ಜೀವನದಲ್ಲಿ ಯಶಸ್ಸು : ಜೀವನದಲ್ಲಿ ಪದೇ ಪದೇ ವೈಫಲ್ಯಗಳನ್ನು ಎದುರಿಸುತ್ತಿರುವ ಜನರು ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ರಾಮರಕ್ಷಾ ಮೂಲವನ್ನು ಪಠಿಸಬೇಕು. ಇದನ್ನು ಮಾಡುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
 
(ಹಕ್ಕುತ್ಯಾಗ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.