Chanakya Niti Quotes: ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ರಾಜತಾಂತ್ರಿಕ ಮತ್ತು ರಾಜಕಾರಣಿಯಾಗಿದ್ದರು. ಜನಸಾಮಾನ್ಯರ ಜೀವನ ಸುಖಮಯವಾಗಿಸುವ ಉದ್ದೇಶದಿಂದ ಅವರು ತಮ್ಮ ನೀತಿಶಾಸ್ತ್ರದಲ್ಲಿ ಹಲವು ನೀತಿಗಳನ್ನು ಹೇಳಿದ್ದಾರೆ. ಅವುಗಳನ್ನು ಅನುಸರಿಸುವ ಮೂಲಕ, ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಸುಗಮವಾಗಿ ಮತ್ತು ಸಂತೋಷದಿಂದ ಕಳೆಯಬಹುದು. ಆಚಾರ್ಯ ಚಾಣಕ್ಯನ ನೀತಿಗಳನ್ನು ಅನುಸರಿಸಿ, ಅನೇಕ ಜನರು ಖ್ಯಾತಿ ಮತ್ತು ಕೀರ್ತಿಯನ್ನು ಗಳಿಸಿದ್ದಾರೆ. ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಚಾಣಕ್ಯರ ನೀತಿಶಾಸ್ತ್ರದಲ್ಲಿ ಅನೇಕ ಸಂಗತಿಗಳನ್ನು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಒಬ್ಬ ವ್ಯಕ್ತಿಯು ಜೀವನದಲ್ಲಿ ಈ ನೀತಿಗಳನ್ನು ಅನುಸರಿಸಿದರೆ, ಅವನು ಎಂದಿಗೂ ನಿರಾಶೆ ಮತ್ತು ಅಪಯಶಸ್ಸನ್ನು ಎದುರಿಸಬೇಕಾಗಿಲ್ಲ. ನೀವೂ ಸಹ ನಿಮಗಾಗಿ ಜೀವನ ಸಂಗಾತಿಯನ್ನು ಹುಡುಕುತ್ತಿದ್ದರೆ, ಚಾಣಕ್ಯ ನೀತಿಯಲ್ಲಿ ನೀಡಲಾದ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ನೀವು ಮಾಡುವ ಸಣ್ಣದೊಂದು ತಪ್ಪು ನಿಮ್ಮ ಜೀವನವನ್ನೇ ನರಕಾಗಿಸಬಹುದು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ.


ಒತ್ತಡದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ
ನೀವು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ, ಯಾವುದೇ ರೀತಿಯ ಒತ್ತಡದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಇದು ಇಡೀ ಜೀವನದ ಪ್ರಶ್ನೆಯಾಗಿದೆ, ಮತ್ತು ಈ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಬುದ್ಧಿವಂತಿಕೆಯಿಂದ ವರ್ತಿಸಿ. ಒತ್ತಡದಲ್ಲಿ ತೆಗೆದುಕೊಂಡ ನಿರ್ಧಾರವು ನಂತರ ನಿಮ್ಮ ಜೀವನವನ್ನೇ ನರಕಾಗಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಪದೇ ಪದೇ ರಾಜಿ ಮಾಡಿಕೊಳ್ಳುವ ಅಗತ್ಯ ಬೀಳಬಹುದು.


ಗುಣಲಕ್ಷಣಗಳನ್ನು ನೋಡಿಕೊಳ್ಳಿ
ಸಾಮಾನ್ಯವಾಗಿ ಜನರು ಜೀವನ ಸಂಗಾತಿಯನ್ನು ಹುಡುಕುವಾಗ ಬಾಹ್ಯ ಸೌಂದರ್ಯಕ್ಕೆ ವಿಶೇಷ ಗಮನ ನೀಡುತ್ತಾರೆ. ಆದರೆ ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕವಾಗಿ ಸುಗುಣಿಯಾಗಿರಬೇಕು. ವ್ಯಕ್ತಿಯ ಸೌಂದರ್ಯವನ್ನು ಮದುವೆಯ ಮಾನದಂಡ ಎಂದು ಪರಿಗಣಿಸಲಾಗುವುದಿಲ್ಲ. ಬದಲಿಗೆ, ಮದುವೆಗೆ ಮಹಿಳೆ ಅಥವಾ ಪುರುಷನಲ್ಲಿ ಒಳ್ಳೆಯ ಗುಣಗಳು ಮತ್ತು ಮೌಲ್ಯಗಳು ಇರುವುದು ತುಂಬಾ ಮುಖ್ಯವಾದ ಸಂಗತಿ. ಆದ್ದರಿಂದ, ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ, ಗುಣಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.


ಇದನ್ನೂ ಓದಿ-Guru Margi 2022 : ನ. 24 ರಿಂದ ಗುರುದೇವನ ಚಲನೆ, ಈ ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ!


ನಡವಳಿಕೆ ಕೂಡ ಮುಖ್ಯವಾಗಿದೆ
ವ್ಯಕ್ತಿಯೊಂದಿಗೆ ಜೀವನ ಕಳೆಯಲು ಹಣ, ಸೌಂದರ್ಯ ಬೇಕಿಲ್ಲ, ಆದರೆ ವ್ಯಕ್ತಿಯ ನಡವಳಿಕೆ ತುಂಬಾ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ, ನೀವು ಜೀವನ ಸಂಗಾತಿಯನ್ನು ಆರಿಸುತ್ತಿದ್ದರೆ, ಆ ವ್ಯಕ್ತಿಯು ತಾಳ್ಮೆಯಿಂದಿರಬೇಕು ಎಂಬುದನ್ನು ನೆನಪಿನಲ್ಲಿಡಿ. ತಾಳ್ಮೆಯುಳ್ಳ ವ್ಯಕ್ತಿ ಜೀವನದಲ್ಲಿ ಏರಿಳಿತಗಳನ್ನು ಸುಲಭವಾಗಿ ಜಯಿಸುತ್ತಾನೆ ಎಂದು ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಹೇಳಿದ್ದಾರೆ. ಇದರೊಂದಿಗೆ ವ್ಯಕ್ತಿಯ ಮಾತು ಮಧುರವಾಗಿರುವುದು ಕೂಡ ಅಗತ್ಯ. ಇಂತಹ ಜನರು ಕುಟುಂಬವನ್ನು ನಿರ್ವಹಿಸುತ್ತಾರೆ ಮತ್ತು ಕುಟುಂಬಕ್ಕೆ ಗೌರವವನ್ನು ಕೂಡ ತಂದುಕೊಡುತ್ತಾರೆ.


ಇದನ್ನೂ ಓದಿ-Swapna Shastra : ಕನಸಿನಲ್ಲಿ ಮೀನುಗಳನ್ನು ಕಂಡರೆ ಶುಭ ಅಥವಾ ಅಶುಭನ : ಇಲ್ಲಿದೆ ನೋಡಿ

(ಹಕ್ಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.