Chanakya Niti About Money: ಮಹಾನ್ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯರು ತಮ್ಮ ನೀತಿಶ್ತಾಸ್ತ್ರವಾಗಿರುವ ಚಾಣಕ್ಯ ನೀತಿಯಲ್ಲಿ ಹಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಷಯಗಳ ಕುರಿತು ಉಲ್ಲೇಖಿಸಿದ್ದಾರೆ. ಸಂಪತ್ತಿನ ಅಧಿದೆವತೆಯಾಗಿರುವ  ಲಕ್ಷ್ಮಿ ಯಾರ ಮೇಲೆ ಪ್ರಸನ್ನಳಾಗುತ್ತಾಳೆ ಎಂಬುದನ್ನು ಕೂಡ ಚಾಣಕ್ಯರು ತನ್ನ ನೀತಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಏನು ಮಾಡಬೇಕು ಎಂಬುದನ್ನು ಕೂಡ ಹೇಳಿದ್ದಾರೆ. ಹಣವಿಲ್ಲದೆ ಜೀವನ ಸಾಧ್ಯವಿಲ್ಲ ಎಂಬ ಸಂಗತಿ ಯಾರಿಗೂ ಹೇಳಬೇಕಾಗಿಲ್ಲ, ಆದರೆ ತಪ್ಪು ದಾರಿಯಲ್ಲಿ ಗಳಿಸಿದ ಹಣವು ಜೀವನದಲ್ಲಿ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಇದೇ ವೇಳೆ ಹಣದ ತಪ್ಪು ಬಳಕೆ ಉತ್ತಮ ಜೀವನವನ್ನು ಹಾಳುಮಾಡುತ್ತದೆ. ಆದ್ದರಿಂದ ಸದಾ ಶ್ರೀಮಂತರಾಗಿ ಉಳಿಯಲು ಮತ್ತು ಸುಖಮಯ ಜೀವನ ನಡೆಸಲು ಸರಿಯಾದ ಮಾರ್ಗದಲ್ಲಿ ಹಣ ಸಂಪಾದಿಸಿ ಅದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಚಾಣಕ್ಯರು ಹೇಳಿದ್ದಾರೆ .


COMMERCIAL BREAK
SCROLL TO CONTINUE READING

ತಾಯಿ ಲಕ್ಷ್ಮಿ ಈ ಜನರ ಮೇಲೆ ಅಪಾರ ಕೃಪೆ ತೋರುತ್ತಾಳೆ
ಚಾಣಕ್ಯ ನೀತಿಯ ಪ್ರಕಾರ, ತಾಯಿ ಲಕ್ಷ್ಮಿ ಇಷ್ಟಪಡುವಂತಹ ಗುಣಗಳನ್ನು ಹೊಂದಿದವರ ಮೇಲೆ ಖಂಡಿತವಾಗಿಯೂ ಕೂಡ ತನ್ನ ಅಪಾರ ದಯೆ ತೋರುತ್ತಾಳೆ ಎನ್ನಲಾಗಿದೆ.
>> ಶ್ರದ್ಧೆಯುಳ್ಳವರು- ಕಷ್ಟಪಟ್ಟು ದುಡಿಯುವವರ ಮೇಲೆ ತಾಯಿ ಲಕ್ಷ್ಮಿ ಖಂಡಿತವಾಗಿಯೂ ಕೃಪೆ ತೋರುತ್ತಾಳೆ. ಇಂತಹ ಜನರು ತಮ್ಮ ಜೀವನದಲ್ಲಿ ತಡವಾಗಿ ಯಶಸ್ಸನ್ನು ಪಡೆಯಬಹುದು. ಆದರೆ ಅವರು ಅದನ್ನು ಖಂಡಿತವಾಗಿ ಪಡೆದೇ ತೀರುತ್ತಾರೆ. ಈ ಜನರು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಶ್ರೀಮಂತರಾಗುತ್ತಾರೆ. ಇಂತಹ ಜನರಿಗೆ ಅವರ ಶ್ರಮದ ಫಲವನ್ನು ತಾಯಿ ಲಕ್ಷ್ಮಿ ಖಂಡಿತವಾಗಿಯೂ ನೀಡುತ್ತಾಳೆ.


>> ಪ್ರಾಮಾಣಿಕ: ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಜನರು. ಹಾಗೆಯೇ ಯಾರಿಗೂ ಮೋಸ ಮಾಡದ ಜನರ ಮೇಲೆ ತಾಯಿ ಲಕ್ಷ್ಮಿ ಯಾವಾಗಲೂ ಕೃಪೆ ತೋರುತ್ತಾಳೆ, ಹಣ ಸಂಪಾದಿಸಲು ತಪ್ಪು ಮಾರ್ಗಗಳನ್ನು ಅಳವಡಿಸಿಕೊಳ್ಳದ ಇಂತಹ ಜನರ ಮೇಲೆ ತಾಯಿ ಲಕ್ಷ್ಮಿ ಖಂಡಿತವಾಗಿಯೂ ಒಂದು ಹಂತದಲ್ಲಿ ಅಥವಾ ಇನ್ನೊಂದರಲ್ಲಿ ಶ್ರೀಮಂತರನ್ನಾಗಿ ಮಾಡುತ್ತಾಳೆ. ಇದಲ್ಲದೆ ಇಂತಹ ಜನರಿಗೆ ಅವರ ಒಳ್ಳೆಯ ಕಾರ್ಯಗಳಿಂದ ಗೌರವವೂ ಸಿಗುತ್ತದೆ.


>> ದಾನ ಮಾಡುವ ಜನರು: ತಮ್ಮ ಆದಾಯದ ಒಂದು ಭಾಗವನ್ನು ದಾನಕ್ಕೆ ಮೀಸಲಿಡುವ ಜನರು ಬಡವರಿಗೆ ಸಹಾಯ ಮಾಡುತ್ತಾರೆ. ಅವರಿಗೆ ಎಂದೂ ಹಣದ ಕೊರತೆ ಎದುರಾಗುವುದಿಲ್ಲ, ಹೀಗಾಗಿ ತಾಯಿ ಲಕ್ಷ್ಮಿ ಅಂತಹವರಿಗೆ ಸಾಕಷ್ಟು ಸಂಪತ್ತನ್ನು ನೀಡುತ್ತಾಳೆ.


ಇದನ್ನೂ ಓದಿ-Rahu Dosh: ರಾಹು ದೋಷದಿಂದ ಪಾರಾಗಲು ಇಲ್ಲಿದೆ ಸರಳ ಉಪಾಯ


>> ನಿರಂತರವಾಗಿ ಜ್ಞಾನವನ್ನು ಪಡೆಯುವ ಜನರು: ಯಾವಾಗಲೂ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಳು ಪ್ರಯತ್ನಿಸುವ ಜನರು ತಮ್ಮ ಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ. ತಮ್ಮ ಜ್ಞಾನದಿಂದಾಗಿ, ಅವರು ಘನತೆ ಗೌರವವನ್ನು ಪಡೆಯುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ.


ಇದನ್ನೂ ಓದಿ-Money Remedies: ಮನೆಯ ಈ ಜಾಗದಲ್ಲಿ ಸಣ್ಣ ಬೆಳ್ಳಿಯ ತುಂಡು ಇಟ್ಟರೆ ನೀವು ಶ್ರೀಂಮತರಾಗುತ್ತೀರಿ..!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.