ನವದೆಹಲಿ: ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ-ಆಚರಣೆಯಲ್ಲಿ ಅಕ್ಕಿಯ ಬಳಕೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅನ್ನವಿಲ್ಲದೆ ಯಾವುದೇ ದೇವತೆಯ ಆರಾಧನೆ ಅಪೂರ್ಣವೆಂದು ಹೇಳಲಾಗುತ್ತದೆ. ವಿಷ್ಣುವಿಗೆ ಅಪ್ಪಿತಪ್ಪಿಯೂ ಅನ್ನವನ್ನು ಅರ್ಪಿಸಬಾರದು. ಅಕ್ಕಿಯ ಧಾನ್ಯಗಳನ್ನು ಅಕ್ಷತೆ ಎಂದು ಕರೆಯಲಾಗುತ್ತದೆ. ಅಕ್ಷತೆಯನ್ನು ಪ್ರತಿಯೊಂದು ಪೂಜೆಯಲ್ಲಿ ಬಳಸಲಾಗುತ್ತದೆ.  


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಷತೆಯ ಬಳಕೆ ಕೇವಲ ಪೂಜೆ-ಪುನಸ್ಕಾರದಲ್ಲಿ ಮಾತ್ರವಲ್ಲ, ಕೆಲವೊಮ್ಮೆ ವ್ಯಕ್ತಿ ಹಲವು ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾನೆ. ಅಕ್ಷತೆಯ ದಾನದಿಂದ ವಾಸ್ತು ದೋಷದಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲ ಒಂದು ಅಕ್ಕಿಯ ಕಾಳು ಮನುಷ್ಯನ ಅದೃಷ್ಟವನ್ನು ಬೆಳಗಿಸುತ್ತದೆ.


ಇದನ್ನೂ ಓದಿ: Guru Rahu Yuti 2023: ಈ 3 ಗ್ರಹಗಳ ಮೈತ್ರಿಯಿಂದ ಈ ರಾಶಿಯವರ ಮೇಲೆ ಪರಿಣಾಮ!


ಅಕ್ಕಿ ಕಾಳುಗಳೊಂದಿಗೆ ಈ ಪರಿಹಾರ ಮಾಡಿ 


ಶಿವಲಿಂಗದ ಮೇಲೆ ಅಕ್ಕಿ ಧಾನ್ಯ ಅರ್ಪಿಸಿ: ಶಿವನು ಅತ್ಯಂತ ಕರುಣಾಮಯಿ ವ್ಯಕ್ತಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಭಕ್ತಿಯಿಂದ ಪೂಜೆ ಮಾಡಿದ್ರೆ ಶಿವನು ತುಂಬಾ ಸಂತೋಷಪಡುತ್ತಾನೆ. ಅಕ್ಕಿಯ ಪರಿಹಾರ ಮಾಡಿದ್ರೂ ಸಹ ಶಿವ ಪ್ರಸನ್ನನಾಗುತ್ತಾನೆ. ಅಕ್ಕಿ ತೆಗೆದುಕೊಂಡು ಅದನ್ನು ಶಿವಲಿಂಗದ ಮೇಲೆ ಇರಿಸಿ ಮತ್ತು ಬಿಲ್ವ ಪತ್ರೆಯಿಂದ ಭಕ್ತಿಯಿಂದ ಪೂಜಿಸಬೇಕು. ನಂತರ ದೇವರನ್ನು ಸ್ಮರಿಸುತ್ತಾ ನಿಮ್ಮ ಇಚ್ಛೆಯನ್ನು ಶಿವನಿಗೆ ತಿಳಿಸಿ. ಇದರ ನಂತರ ಕಲಶದಿಂದ ನೀರನ್ನು ಅರ್ಪಿಸಿ. ಕೊನೆಯಲ್ಲಿ ಶಿವಲಿಂಗದಿಂದ ಬೀಳುವ ನೀರನ್ನು ಹಣೆಯ ಮತ್ತು ಕಣ್ಣುಗಳ ಮೇಲೆ ಹಚ್ಚಿ. ಇದರಿಂದ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತವೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. 


ವಾಸ್ತು ದೋಷ ಹೋಗಲಾಡಿಸಲು: ಮನೆಯಲ್ಲಿರುವ ವಾಸ್ತು ದೋಷಗಳು ಕುಟುಂಬದ ಸದಸ್ಯರ ಪ್ರಗತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಕೆಲವು ರೀತಿಯ ಸಮಸ್ಯೆ ಉಂಟುಮಾಡುತ್ತದೆ. ವಾಸ್ತು ದೋಷ ಹೋಗಲಾಡಿಸಲು ಮನೆಯ ಮುಖ್ಯ ಬಾಗಿಲಿನ ಮೇಲೆ ಸ್ವಸ್ತಿಕ ಚಿಹ್ನೆ ರೂಪಿಸಿ. ನಂತರ ನಿಯಮಿತವಾಗಿ ಅದರ ಮೇಲೆ ಅಕ್ಷತೆ ಮತ್ತು ನೀರನ್ನು ಅರ್ಪಿಸಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ ಮತ್ತು ಲಕ್ಷ್ಮಿದೇವಿಯ ಆಶೀರ್ವಾದವನ್ನು ನೀವು ಪಡೆಯಬಹುದು.


ಇದನ್ನೂ ಓದಿ: Hanuman Jayanti 2023: ಈ 4 ರಾಶಿಗಳ ಮೇಲಿರುತ್ತದೆ ಹನುಮನ ವಿಶೇಷ ಕೃಪೆ, ಧನಲಾಭ ನೀಡುವುದರ ಜೊತೆಗೆ ಎಲ್ಲಾ ಸಂಕಷ್ಟಗಳಿಂದ ಮುಕ್ತಿ ನೀಡುತ್ತಾನೆ ಆಂಜನೇಯ!


ಹಣ ಪಡೆಯಲು: ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಮತ್ತು ಹಣ ಗಳಿಸಲು ಶುಕ್ರವಾರದಂದು 21 ಹಳದಿ ಅಕ್ಕಿ ತೆಗೆದುಕೊಂಡು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಇಡಿ. ನಂತರ ಇದನ್ನು ತಾಯಿ ಲಕ್ಷ್ಮಿದೇವಿಗೆ ಅರ್ಪಿಸಿ ಮತ್ತು ಅದನ್ನು ಸರಿಯಾಗಿ ಪೂಜಿಸಿ. ಇದರ ನಂತರ ಅದನ್ನು ಕಮಾನು ಅಥವಾ ಹಣ ಇರಿಸುವ ಸ್ಥಳದಲ್ಲಿ ಇಡಬೇಕು. ಈ ಪರಿಹಾರ ಮಾಡುವುದರಿಂದ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ದೊರೆಯುತ್ತದೆ.  


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.