Friday lakshmi Pooja tips : ಸನಾತನ ಧರ್ಮದಲ್ಲಿ ವಾರದ ಪ್ರತಿ ದಿನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ವಾರದ ಪ್ರತಿ ದಿನವೂ ಕೆಲವು ದೇವತೆಗಳಿಗೆ ಸಮರ್ಪಿತವಾಗಿದೆ. ಅಂತೆಯೇ, ಶುಕ್ರವಾರವನ್ನು ತಾಯಿ ಲಕ್ಷ್ಮಿ ಮತ್ತು ಭಗವಾನ್ ಶುಕ್ರನಿಗೆ ಅರ್ಪಿಸಲಾಗಿದೆ. ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.


COMMERCIAL BREAK
SCROLL TO CONTINUE READING

ಧರ್ಮಗ್ರಂಥಗಳ ಪ್ರಕಾರ, ಮನೆಯಿಂದ ಆರ್ಥಿಕ ಬಿಕ್ಕಟ್ಟನ್ನು ಹೋಗಲಾಡಿಸಲು ಶುಕ್ರವಾರದಂದು ಕೆಲವು ಪರಿಹಾರಗಳನ್ನು ಮಾಡಬಹುದು. ಈ ಸರಳ ಕೆಲಸವನ್ನು ಮಾಡುವುದರಿಂದ ತಾಯಿ ಲಕ್ಷ್ಮಿಯ ಅನುಗ್ರಹವನ್ನು ಪಡೆಯಬಹುದು. 


ಇದನ್ನೂ ಓದಿ: Kaal Sarp Dosha ತುಂಬಾ ಅಪಾಯಕಾರಿ, ಸಂಕಷ್ಟದಲ್ಲಿಯೇ ಕಳೆದುಹೋಗುತ್ತೆ ಇಡೀ ಜೀವನ!


12 ಕೋಡಿಗಳನ್ನು ಸುಟ್ಟು, ಅವುಗಳ ಭಸ್ಮವನ್ನು ಮಾಡಿ ಕುಟುಂಬದ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಈ ಬೂದಿಯನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ನೆನೆಸಿಡಿ. ಹೀಗೆ ಮಾಡುವುದರಿಂದ ಬಡತನ ದೂರವಾಗುತ್ತದೆ ಮತ್ತು ಕುಟುಂಬದ ಸ್ಥಿತಿ ಸುಧಾರಿಸುತ್ತದೆ.


ಋಣಬಾಧೆ ಹೆಚ್ಚಿದ್ದರೆ ಪ್ರತಿ ಶುಕ್ರವಾರ ಕಮಲಗಟ್ಟದ ಮಾಲೆಯೊಂದಿಗೆ ಮಾತಾ ಲಕ್ಷ್ಮಿಯ ಮಂತ್ರಗಳನ್ನು ಪಠಿಸಿ ಸಾಲವನ್ನು ತೊಲಗಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಸಾಲದಿಂದ ಮುಕ್ತಿ ಸಿಗುತ್ತದೆ.


ಇದನ್ನೂ ಓದಿ: ಬಿಳಿಗಿರಿ ರಂಗನಿಗೆ ಬಗೆಬಗೆ ಪತ್ರ ಬರೆದ ಭಕ್ತರು‌...!


ಮನೆಯಲ್ಲಿ ಹಣದ ಆದಾಯವನ್ನು ಹೆಚ್ಚಿಸಲು, ಶುಕ್ರವಾರದಂದು ಲಕ್ಷ್ಮಿ ತಾಯಿಯ ಪ್ರತಿಮೆಯ ಮುಂದೆ ಅಖಂಡ ದೀಪವನ್ನು ಬೆಳಗಿಸಿ. ಅಲ್ಲದೆ, ಶಂಖದಲ್ಲಿ ನೀರು ತುಂಬಿ ವಿಷ್ಣುವಿಗೆ ಅಭಿಷೇಕ ಮಾಡಿ. ಹಾಗೆಯೇ ಮನೆಯಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ. ಕುಟುಂಬದಲ್ಲಿ ಯಾರಾದರೂ ಅಸ್ವಸ್ಥರಾಗಿದ್ದರೆ ಮಹಾಲಕ್ಷ್ಮಿಯನ್ನು ಧ್ಯಾನಿಸಿ ಮತ್ತು ಶುಕ್ರವಾರದಂದು ಶ್ರೀಸೂಕ್ತವನ್ನು ಪಠಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.