ನವದೆಹಲಿ : ಸಂತೋಷ ಮತ್ತು ಸುಸ್ಥಿರ ಜೀವನ ನಡೆಸಬೇಕಾದರೆ, ಸ್ಥಿರ ಉದ್ಯೋಗ ಮತ್ತು ವೃತ್ತಿಜೀವನವನ್ನು ಹೊಂದಿರಬೇಕು. ಆದರೆ, ಕೆಲವೊಮ್ಮೆ ನೂರಕ್ಕೆ ನೂರರಷ್ಟು ಪ್ರಯತ್ನ, ಕಠಿಣ ಪರಿಶ್ರಮಗಳನ್ನೂ ಹಾಕಿದರೂ,  ಉತ್ತಮ ಉದ್ಯೋಗ ಪಡೆಯುವುದು ಅಥವಾ ಉತ್ತಮ  ವೃತ್ತಿ ಅವಕಾಶ ಆಯ್ಕೆ ಮಾಡುವುದು ಸಾಧ್ಯವಾಗದೇ ಹೋಗಬಹುದು. ಜಾತಕದಲ್ಲಿ ಗ್ರಹಗಳು ದುರ್ಬಲ ಸ್ಥಾನದಲ್ಲಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ, ಇದಕ್ಕಾಗಿ ಚಿಂತಿಸಬೇಕಾಗಿಲ್ಲ.  ಉದ್ಯೋಗವನ್ನು ಪಡೆಯಲು ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು (Success in career) ಪಡೆಯಲು ಕೆಲವು ಪರಿಣಾಮಕಾರಿ ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ (Astrology) ಸೂಚಿಸಲಾಗಿದೆ. 


COMMERCIAL BREAK
SCROLL TO CONTINUE READING

ವೃತ್ತಿಜೀವನದ ಯಶಸ್ಸಿಗಾಗಿ ಅನುಸರಿಸಿ ಈ ಮಾರ್ಗಗಳನ್ನು : 
1.  ಕಾಗೆಗಳಿಗೆ (Crow) ಅನ್ನವನ್ನು ನೀಡುವುದು ಜ್ಯೋತಿಷ್ಯದಲ್ಲಿ (Astrology) ಹೇಳಲಾದ ಸುಲಭವಾದ  ಪರಿಹಾರವಾಗಿದೆ. ಈ ಪರಿಹಾರವು ಶನಿ ಗ್ರಹದ ದುಷ್ಪರಿಣಾಮಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ವೈದಿಕ ಜ್ಯೋತಿಷ್ಯ ಸಿದ್ಧಾಂತಗಳ ಪ್ರಕಾರ, ಶನಿಯು ವೃತ್ತಿಯ ಮೇಲೆ ತನ್ನ ಹಿಡಿತವನ್ನು ಇಟ್ಟುಕೊಂಡಿರುತ್ತಾನೆ. ಕಾಗೆ ಶನಿ ಗ್ರಹವನ್ನು (Shani dev) ಪ್ರತಿನಿಧಿಸುತ್ತದೆ. ಹಾಗಾಗಿ, ಕಾಗೆಗಳಿಗೆ ಅನ್ನ ನೀಡಿದರೆ ಶನಿ ಗ್ರಹದಿಂದ ಉಂಟಾಗುವ ಸಮಸ್ಯೆಗಳು ಪರಿಹಾರವಾಗುತ್ತವೆ. 


ಇದನ್ನೂ ಓದಿ : ಆಕರ್ಷಕ ಮತ್ತು ದೃಢ ವ್ಯಕ್ತಿತ್ವವುಳ್ಳವರು ಈ ಎರಡು ರಾಶಿಯವರು, ನೀವು ಕೂಡಾ ಇದೇ ರಾಶಿಯವರಾ?
 
2.  ನಿಮ್ಮ ಕೆಲಸದಲ್ಲಿ ಸ್ಥಿರವಾಗಿರಲು ಮತ್ತು ನೀವು ಸೂಕ್ತವಾದ ವೃತ್ತಿ ಅವಕಾಶವನ್ನು ಪಡೆಯಬೇಕಾದರೆ ಪ್ರತಿದಿನ ಕನಿಷ್ಠ 31 ಬಾರಿ ಗಾಯತ್ರಿ ಮಂತ್ರ (gayatri mantra) ಮತ್ತು ಮಹಾಮೃತಂಜಯ ಮಂತ್ರವನ್ನು ಪಠಿಸಬೇಕು.


3. ತಾಮ್ರದ ಪಾತ್ರೆಯಲ್ಲಿ ನೀರನ್ನು (Water) ಹಾಕಿ ಆ ನೀರಿಗೆ ಬೆಲ್ಲವನ್ನು ಸೇರಿಸಿ, ಅದನ್ನು ಪ್ರತಿ ದಿನ ಬೆಳಿಗ್ಗೆ ಸೂರ್ಯ ದೇವನಿಗೆ ಸಮರ್ಪಿಸಬೇಕು. ಹೀಗೆ ಮಾಡಿದರೆ, ಉದ್ಯೋಗದಲ್ಲಿ ಯಶಸ್ಸು ಶತ ಸಿದ್ದ. 


4. ಬೆಳಿಗ್ಗೆ ಎದ್ದ ತಕ್ಷಣ, ಎರಡು ಅಂಗೈಗಳನ್ನು ಜೋಡಿಸಿ ನಮಸ್ಕರಿಸಬೇಕು. ಈ ಜ್ಯೋತಿಷ್ಯ ಪರಿಹಾರವನ್ನು ದಿನನಿತ್ಯ ಮಾಡುವುದರಿಂದ ಅಪಾರ ಸಂಪತ್ತನ್ನು ಪಡೆಯಲು ಸಹಾಯವಾಗುತ್ತದೆ. ಲಕ್ಷ್ಮಿ ದೇವಿಯು (Godess lakshmi) ಅಂಗೈಯಲ್ಲಿ ನೆಲೆಸಿರುವುದರಿಂದ ಬೆಳೆಗ್ಗೆ ಎದ್ದ ಕೂಡಲೇ ಅಂಗೈ ದರ್ಶನ ಪಡೆಯಬೇಕು .


ಇದನ್ನೂ ಓದಿ : October 2021 Rashi Parivartan: ಎರಡು ದೊಡ್ಡ ಗ್ರಹಗಳ ರಾಶಿ ಪರಿವರ್ತನೆ, ನಿಮ್ಮ ಮೇಲೆ ಅದರ ಪರಿಣಾಮ ಏನೆಂದು ತಿಳಿಯಿರಿ


5.  ಉದ್ಯೋಗ ಪಡೆಯಲು ವಿಳಂಬವಾಗುತ್ತಿದ್ದರೆ ಅಥವಾ ಅಡೆತಡೆಗಳನ್ನು ಎದುರಿಸುತ್ತಿದ್ದರೆ, ವಿಘ್ನ ವಿನಾಶಕ ಎಂದು ಕರೆಯಲ್ಪಡುವ ಗಣೇಶನ (Lord Ganesha) ಬೀಜ ಮಂತ್ರವನ್ನು ಪಠಿಸಬೇಕು. ವೃತ್ತಿಜೀವನವನ್ನು ಸ್ಥಿರಗೊಳಿಸಲು ಇದು ಸಹಾಯ ಮಾಡುತ್ತದೆ. ಅಥವಾ "ಓಂ ಗನ್ ಗಣಪತ್ಯೇ ನಮಃ" ಎಂಬ ಮಂತ್ರವನ್ನು ಪಠಿಸಬೇಕು.


6. ವೃತ್ತಿಜೀವನದ ಯಶಸ್ಸಿಗೆ ಇನ್ನೊಂದು ಪರಿಣಾಮಕಾರಿ ಜ್ಯೋತಿಷ್ಯ ಪರಿಹಾರವೆಂದರೆ ನಿಂಬೆಹಣ್ಣು (Lemon). ಇದನ್ನು ತೆಗೆದುಕೊಂಡು ಅದರಲ್ಲಿ ನಾಲ್ಕು ಲವಂಗವನ್ನು ಚುಚ್ಚಬೇಕು. ಅದನ್ನು ಬಲಗೈಯಲ್ಲಿ ತೆಗೆದುಕೊಂಡು ಅತ್ಯಂತ ಭಕ್ತಿಯಿಂದ  "ಓಂ ಶ್ರೀ ಹನುಮತೇ ನಮಃ" ಈ ಮಂತ್ರವನ್ನು 21 ಬಾರಿ ಪಠಿಸಬೇಕು. ಇಷ್ಟಾದ ಮೇಲೆ, ಈ ನಿಂಬೆಹಣ್ಣನ್ನು ಜೇಬಿನಲ್ಲಿ ಅಥವಾ ಪರ್ಸ್‌ನಲ್ಲಿ ಇರಿಸಿಕೊಳ್ಳಬೇಕು.


ಇದನ್ನೂ ಓದಿ : Ashwin Month 2021: ಬಹಳ ವಿಶೇಷ ಅಕ್ಟೋಬರ್ 22 ರವರೆಗಿನ ಸಮಯ, ಆದರೆ ಈ ವಿಷಯಗಳನ್ನು ನೆನಪಿನಲ್ಲಿಡಿ


ಈ ಪರಿಹಾರವು ಖಂಡಿತವಾಗಿಯೂ ಪ್ರತಿಯೊಂದು ಪ್ರಮುಖ ಕೆಲಸದಲ್ಲಿ ಯಶಸ್ವಿಯಾಗಲು  ಸಹಾಯ ಮಾಡುತ್ತದೆ. ನೀವು ಸಂದರ್ಶನಕ್ಕೆ ಹೋಗುತ್ತಿರುವಾಗ ಅಥವಾ ವ್ಯಾಪಾರ ಸಂಬಂಧಿತ ಕೆಲಸಕ್ಕಾಗಿ ಪ್ರಮುಖ ವ್ಯಕ್ತಿಯನ್ನು ಭೇಟಿಯಾಗುವಾಗ, ಈ ಪರಿಹಾರವನ್ನು ಮಾಡುವುದರಿಂದ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.