Garuda Purana Teachings - ಮನುಷ್ಯರ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಅನುಗುಣವಾಗಿ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತದೆ. ಒಳ್ಳೆಯ ಕೆಲಸ ಮಾಡುವವರಿಗೆ ಮೃತಪಟ್ಟ ಬಳಿಕ ಸ್ವರ್ಗದಲ್ಲಿ ಸುಖ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಕೆಟ್ಟ ಕೆಲಸದಲ್ಲಿ ನಿರತರಾದವರಿಗೆ ನರಕದಲ್ಲಿ ನರಕಯಾತನೆ ಸಿಗುತ್ತದೆ. ಇದರ ಉಲ್ಲೇಖ ನೀವು ಗರುಡ ಪುರಾಣದಲ್ಲಿಯೂ ಕೂಡ ಗಮನಿಸಬಹುದು. ಗರುಡ ಪುರಾಣದಲ್ಲಿ 19 ಸಾವಿರಕ್ಕೂ ಅಧಿಕ ಶ್ಲೋಕಗಳಿದ್ದು, ಅವು ಪುಣ್ಯ ಹಾಗೂ ಪಾಪ ಕರ್ಮಗಳ ಕುರಿತು ಹೇಳುತ್ತವೆ. ಗರುಡನ ಜಿಜ್ಞಾಸೆಯನ್ನು ಪರಿಹರಿಸಲು ಶ್ರೀವಿಷ್ಣು ಹೇಳಿರುವ ಎಲ್ಲಾ ಸಂಗತಿಗಳನ್ನು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಮಹಿಳೆಯರು ಎರಡು ಅತ್ಯಾವಶ್ಯಕ ಕೆಲಸಗಳನ್ನೂ ಮಾಡುವಾಗ ಪುರುಷರು ಅವರನ್ನು ನೋಡಬಾರದು ಎಂದು ಹೇಳಲಾಗಿದೆ. ಆ ಎರಡು ಕೆಲಸಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಇದನ್ನೂ ಓದಿ-Lucky Zodiac Signs: ಜೂನ್ 7 ರಂದು ಈ 4 ರಾಶಿಗಳ ಜನರಿಗೆ ಆಂಜನೇಯನ ವಿಶೇಷ ಕೃಪೆ ಪ್ರಾಪ್ತಿಯಾಗಲಿದೆ

1. ಮಹಿಳೆ ಮಗುವಿಗೆ ಹಾಲುಣಿಸುವಾಗ
ಸಾಮಾನ್ಯವಾಗಿ ಮಹಿಳೆಯರು ತಮ್ಮ ಮಗುವಿಗೆ ಹಾಲುಣಿಸುವ ಮೂಲಕ ಅದಕ್ಕೆ ಆಹಾರ ನೀಡುತ್ತಾರೆ. ಆಹಾರ ಸೇವಿಸುವ ಮಗುವಿಗೆ ತಿಳುವಳಿಕೆ ಇರುವುದಿಲ್ಲ ಮತ್ತು ಅದು ತುಂಬಾ ಮುಗ್ಧವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಾಲುಣಿಸುವಾಗ ಮಹಿಳೆಯರ ಎದೆಯನ್ನು ಪುರುಷರು ನೋಡಬಾರದು. ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿರುವ ಈ ನಿಯಮವನ್ನು ಯಾವುದೇ ಓರ್ವ ಪುರುಷ ಉಲ್ಲಂಘಿಸಿ, ಕೆಟ್ಟ ದೃಷ್ಟಿಯನ್ನು ಬೀರಿದರೆ. ಆ ವ್ಯಕ್ತಿ ಮಹಾಪಾಪಕ್ಕೆ ಗುರಿಯಾಗುತ್ತಾನೆ ಮತ್ತು ಇಂಥ ಪಾಪಿ ಪುರುಷನಿಗೆ ಮರಣದ ಬಳಿಕ ನರಕಯಾತನೆ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.


ಇದನ್ನೂ ಓದಿ-Rules of Mantra Jaap: ಹಲವು ವರ್ಷಗಳಿಂದ ಮಂತ್ರ ಜಪಿಸಿದರೂ ಜೀವನ ಬದಲಾಗಿಲ್ಲವೇ? ಈ ತಪ್ಪುಗಳು ಕಾರಣ

2. ಮಹಿಳೆಯರು ಸ್ನಾನ ಮಾಡುವಾಗ
ಗರುಡ ಪುರಾಣದ ಪ್ರಕಾರ, ಯಾವುದೇ ಮಹಿಳೆ ವಸ್ತ್ರವನ್ನು ಧರಿಸದೆಯೇ ಸ್ನಾನ ಮಾಡುತ್ತಿದ್ದರೆ, ಪುರುಷರು ಅದನ್ನು ನೋಡಬಾರದು ಎನ್ನಲಾಗಿದೆ. ಈ ಸ್ಥಿತಿಯಲ್ಲಿರುವ ಮಹಿಳೆಯನ್ನು ಒಂದು ವೇಳೆ ಪುರುಷ ನೋಡಿದರೆ, ಆತ ಮಹಾಪಾಪಕ್ಕೆ ಗುರಿಯಾಗುತ್ತಾನೆ ಮತ್ತು ಆತನ ಎಲ್ಲಾ ಪುಣ್ಯ ಕರ್ಮಗಳು ನಷ್ಟವಾಗುತ್ತವೆ. ಅಷ್ಟೇ ಅಲ್ಲ ಇಂತಹ ಪುರುಷನಿಗೆ ನರಕದಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತದೆ. 


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ