ನವದೆಹಲಿ: ಹಿಂದೂ ಧರ್ಮ ಶಾಸ್ತ್ರಗಳ ಪ್ರಕಾರ ಆಧ್ಯಾತ್ಮದಲ್ಲಿ ಹಲವು ಸಂಗತಿಗಳ ಉಲ್ಲೇಖವಿದೆ. ಆಧ್ಯಾತ್ಮದ ಪ್ರಕಾರ ಇಂತಹ ಹಲವು ಗಿಡ-ಸಸ್ಯಗಳಿದ್ದು, ಇವು ನಮ್ಮ ಶರೀರವನ್ನು ಕಾಯಿಲೆಯಿಂದ ಮುಕ್ತವಾಗಿರಿಸುತ್ತವೆ ಎನ್ನಲಾಗಿದೆ. ಆಧ್ಯಾತ್ಮದ ಪ್ರಕಾರ ಪರಿಸರ ನಮ್ಮ ಜೀವನದ ಒಂದು ಮಹತ್ವದ ಭಾಗವಾಗಿದೆ. ಇಡೀ ಭೂಮಿ ಜಲಮಯವಾದ ಸಂದರ್ಭದಲ್ಲಿ ದೇವಾದಿ ದೇವ ಪರಬ್ರಹ್ಮನ ಕಣ್ಣಿನಿಂದ ನೀರಿನಿಂದ ಬೆಟ್ಟದ ನೇರಳೆ ಮರದ ಜನ್ಮವಾಯಿತು ಎಂದು ಹೇಳಲಾಗುತ್ತದೆ. ಬೆಟ್ಟದ ನೆಲ್ಲಿಕಾಯಿ ಹಲವು ಗುಣಗಳನ್ನು ಹೊಂದಿದ್ದು, ಇದರಲ್ಲಿ ಹಲವಾರು ಔಷಧಿಯ ಗುಣಗಳಿವೆ. ಈ ನೆಲ್ಲಿಕಾಯಿಯನ್ನು ಆಧ್ಯಾತ್ಮದಲ್ಲಿ ಪವಾಡದ ಹಣ್ಣು ಎಂದು ಕರೆಯಲಾಗುತ್ತಿದೆ. ಹಲವು ರೀತಿಯ ಕಾಯಿಲೆಗಳಿಗೆ ಇದು ರಾಮಬಾಣ ಎಂದು ಹೇಳಲಾಗುತ್ತದೆ. ವಿಟಮಿನ್ ಸಿಯ ಆಗರವಾಗಿರುವ ಬೆಟ್ಟದ ನೆಲ್ಲಿಕಾಯಿ ಪ್ರತಿಯೊಂದು ಋತುವಿನಲ್ಲಿ ಲಾಭದಾಯಕವಾಗಿದೆ. ಇದು ಕಣ್ಣು, ಕೂದಲು ಹಾಗೂ ತ್ವಚೆಗಾಗಿ ಒಂದು ಉತ್ತಮ ಔಷಧಿಯಾಗಿದೆ. ಇದು ನಿಮ್ಮ ಶರೀರವನ್ನು ಆರೋಗ್ಯಪೂರ್ಣವಾಗಿಡಲು ತುಂಬಾ ಲಾಭಕಾರಿಯಾಗಿದೆ.


COMMERCIAL BREAK
SCROLL TO CONTINUE READING

ಬೆಟ್ಟದ ನೆಲ್ಲಿಕಾಯಿಯ ಲಾಭಗಳು
ಸಾಮಾನ್ಯವಾಗಿ ಬೆಟ್ಟದ ನೆಲ್ಲಿಕಾಯಿಯನ್ನು ಉಪ್ಪಿನಕಾಯಿ, ಚಟ್ನಿ ಹಾಗೂ ಮುರಬ್ಬಾ ತಯಾರಿಕೆಯಲ್ಲಿ ಮಾಡಲಾಗುತ್ತದೆ. ಆದರೆ, ವಿವಿಧ ರೂಪದಲ್ಲಿ ಇದರ ಸೇವನೆ ಆರೋಗ್ಯಕ್ಕೆ ತುಂಬಾ ಲಾಭ ನೀಡುತ್ತದೆ.


- ನೆಲ್ಲಿಕಾಯಿಯ ಲೇಪ ಕೂದಲು ಕಪ್ಪಾಗಿಸಲು ತುಂಬಾ ಲಾಭಕಾರಿ
- ಹಲ್ಲು ನೋವು ನಿವಾರಣೆಗೆ ಇದೊಂದು ಉತ್ತಮ ಮದ್ದು,.
- ಹಳದಿ ಕಣ್ಣು ಹಾಗೂ ಮೊತಿಯಾಬಿಂದ್ ಗುಣಪಡಿಸಲು ಇದು ಲಾಭಕಾರಿಯಾಗಿದೆ.
- ಬೆಟ್ಟದ ನೆಲ್ಲಿಕಾಯಿಯ ರಸವನ್ನು ಕಣ್ಣಿಗೆ ಹಾಕಿದರೆ, ಕಣ್ಣು ನೋವು ನಿವಾರಣೆಯಾಗುತ್ತದೆ.
- ಮೌತ್ ಅಲ್ಸರ್ ನಿವಾರಣೆಗೆ ಇದೊಂದು ರಾಮಬಾಣ.