ನವದೆಹಲಿ: ಮಾನವನ ದೇಹದಲ್ಲಿ ಎಲ್ಲಾ ಅಂಗಗಳು ಅವಶ್ಯಕ, ಆದರೆ ಅತ್ಯಂತ ಮುಖ್ಯವಾದದ್ದು ಆತನ ಮನಸ್ಸು. ಏಕೆಂದರೆ ಇದರ ಮೂಲಕ ಇಡೀ ದೇಹವು ಆಜ್ಞೆಯನ್ನು ತೆಗೆದುಕೊಳ್ಳುತ್ತದೆ ಮತ್ತು ಕೆಲಸ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಮೆದುಳು ಎಲ್ಲಾ ನರಗಳಿಗೆ(Brain Nerves)ಸಂಪರ್ಕ ಹೊಂದಿರುತ್ತದೆ. ಇದರಲ್ಲಿ ಸಣ್ಣದೊಂದು ಅಡಚಣೆಯುಂಟಾದರೂ ಇಡೀ ದೇಹದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.


COMMERCIAL BREAK
SCROLL TO CONTINUE READING

ಕೆಲವೊಮ್ಮೆ ದೇಹದ ಕೆಲವು ನರಗಳಲ್ಲಿ ದೌರ್ಬಲ್ಯ ಉಂಟಾಗುತ್ತದೆ ಮತ್ತು ಅದು ತೊಂದರೆ ನೀಡಲು ಪ್ರಾರಂಭಿಸುತ್ತದೆ. ನರಗಳ ದೌರ್ಬಲ್ಯಕ್ಕೆ ಹಲವು ಕಾರಣಗಳಿವೆ. ಹಾಗಾದರೆ ಮೆದುಳಿನ ನರಗಳಲ್ಲಿ ಏಕೆ ದೌರ್ಬಲ್ಯ ಬರುತ್ತದೆ(Why Brain Nerves Come In Mind)ಮತ್ತು ಅದನ್ನು ಆರೋಗ್ಯವಾಗಿಡಲು ಏನು ಮಾಡಬೇಕು ಅದನ್ನೋದರ ಬಗ್ಗೆ ತಿಳಿದುಕೊಳ್ಳಿರಿ.


ಇದನ್ನೂ ಓದಿ: ಈರುಳ್ಳಿ ಸಿಪ್ಪೆ ಕಸದ ಬುಟ್ಟಿಗೆ ಹಾಕುವ ಮುನ್ನ ಈ ಸುದ್ದಿ ಓದಿ.. ಹಲವಾರು ರೋಗಗಳಿಗೆ ಇದು ರಾಮಬಾಣ


ಈ ಕಾರಣಗಳಿಂದ ಮೆದುಳಿನಲ್ಲಿ ದೌರ್ಬಲ್ಯ ಬರುತ್ತದೆ


ಮೆದುಳಿಗೆ ಗಾಯಗಳು, ದೇಹದಲ್ಲಿನ ಕೆಲವು ಪೋಷಕಾಂಶಗಳ ಕೊರತೆ ಮತ್ತು ನರಗಳ ಮೇಲಿನ ಒತ್ತಡ ಮೆದುಳಿನಲ್ಲಿ ನೋವನ್ನುಂಟುಮಾಡುತ್ತದೆ. ಇದರೊಂದಿಗೆ ಕೆಲವೊಮ್ಮೆ ಸೋಂಕಿನಿಂದಾಗಿ ಮತ್ತು ಕೆಲವು ಔಷಧಿಗಳಿಂದಾಗಿ ಮೆದುಳಿನ ನರಗಳಲ್ಲಿ ದೌರ್ಬಲ್ಯ(Brain Nerves) ಉಂಟಾಗುತ್ತದೆ. ಇದಲ್ಲದೇ ಕೆಲವೊಮ್ಮೆ ಇತರ ಕಾರಣಗಳಿಂದ ಮೆದುಳಿನ ನರಗಳಲ್ಲಿ ದೌರ್ಬಲ್ಯ(Brain Weakness) ಉಂಟಾಗುತ್ತದೆ.


ಮೆದುಳಿನ ನರಗಳ ದೌರ್ಬಲ್ಯದಿಂದ ಏನಾಗುತ್ತದೆ?


ವಾಸ್ತವವಾಗಿ ಮೆದುಳಿನ ದೌರ್ಬಲ್ಯ(Brain Nerves Weakness)ದಿಂದ ಆಮ್ಲಜನಕವು ಎಲ್ಲಾ ಜೀವಕೋಶಗಳನ್ನು ಸರಿಯಾಗಿ ತಲುಪಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಕೆಲವೊಮ್ಮೆ ಮೆದುಳಿನ ನಿರ್ದಿಷ್ಟ ಭಾಗಕ್ಕೆ ಹೋಗುವ ರಕ್ತನಾಳಗಳಲ್ಲಿ ರಕ್ತದ ಶೇಖರಣೆಯಿಂದ ಹಠಾತ್ ತೀವ್ರ ತಲೆನೋವು ಕೂಡ ಉಂಟಾಗಬಹುದು. ಅದೇ ರೀತಿ ನಿಮ್ಮ ದೇಹದಲ್ಲಿ ಜುಮ್ಮೆನಿಸುವ ಅನುಭವವಾದರೆ ಇದು ಕೂಡ ಮೆದುಳಿನ ನರಗಳ ದೌರ್ಬಲ್ಯದ ಲಕ್ಷಣಗಳಾಗಿದೆ. ನಿಮ್ಮ ಮೆದುಳಿನ ರಕ್ತನಾಳಗಳಲ್ಲಿನ ರಕ್ತವು ಸರಿಯಾಗಿ ತಲುಪುತ್ತಿರುವುದಿಲ್ಲ. ಇದರಿಂದ ದೇಹದ ವಿವಿಧ ಭಾಗಗಳಲ್ಲಿ ಜುಮ್ಮೆನಿಸುವಿಕೆ ಪ್ರಾರಂಭವಾಗುತ್ತದೆ.


ಇದನ್ನೂ ಓದಿ: Benefits of Garlic:ಮೊಡವೆ ಮುಕ್ತ ಚರ್ಮ, ಆರೋಗ್ಯಕರ ಕೂದಲಿಗಾಗಿ ಬೆಳ್ಳುಳ್ಳಿಯನ್ನು ಹೀಗೆ ಬಳಸಿ


ನರಗಳ ದೌರ್ಬಲ್ಯದಿಂದ ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ


ಮೆದುಳಿನ ನರಗಳ ದುರ್ಬಲಗೊಳ್ಳುವಿಕೆಯು(Brain Weakness) ನಿಮ್ಮ ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಇದು ನಿಮ್ಮ ಆಲೋಚನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಕೆಲವೊಮ್ಮೆ ಇದು ನೆನಪಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಗೆ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಮಾತನಾಡಲು ಕಷ್ಟವಾಗಬಹುದು. ಇದಲ್ಲದೆ ಮಾತನಾಡುವ ವಿಷಯಗಳಲ್ಲಿನ ಗೊಂದಲವು ಮೆದುಳಿನ ನರಗಳ ದೌರ್ಬಲ್ಯಕ್ಕೆ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.