ನವದೆಹಲಿ: ಹಣ ಯಾರಿಗೆ ಬೇಡ ಹೇಳಿ… ಸುಖಮಯ ಜೀವನ ನಡೆಸಲು ಪ್ರತಿಯೊಬ್ಬರಿಗೂ ಹಣ(Money Tips)ದ ಅವಶ್ಯಕತೆ ಇದೆ. ಹೀಗಾಗಿ ಪರ್ಸ್ ನಲ್ಲಿ ಪ್ರತಿಯೊಬ್ಬರೂ ಹಣವನ್ನು ಇಟ್ಟುಕೊಳ್ಳುತ್ತಾರೆ. ತಮ್ಮ ಜೇಬಲ್ಲಿರುವ ಪರ್ಸ್ ನಲ್ಲಿ ಹಣ ಹೀಗೆ ತುಂಬಿ ತುಳುಕುತ್ತಿರಲಿ, ಅದು ಎಂದಿಗೂ ಖಾಲಿಯಾಗದಿರಲಿ ಎಂದು ದೇವರಲ್ಲಿ ಪಾರ್ಥಿಸುತ್ತಿರುತ್ತಾರೆ. ಹಣದ ವಾಸ್ತು ಬಗ್ಗೆ ನೀವು ತಿಳಿದುಕೊಂಡರೆ ಖಂಡಿತ ಖುಷಿಪಡುತ್ತೀರಿ.


COMMERCIAL BREAK
SCROLL TO CONTINUE READING

ನೀವು ಜೇಬಿನಲ್ಲಿಟ್ಟುಕೊಳ್ಳುವ ಪರ್ಸ್ ನಲ್ಲಿ ಏನು ಇದ್ದರೆ ಅದೃಷ್ಟ ಅನ್ನೋದರ ಬಗ್ಗೆ ತಿಳಿದುಕೊಳ್ಳಬೇಕು. ಕೆಲವೊಬ್ಬರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಏನೇನೋ ವಸ್ತುಗಳನ್ನು ಪರ್ಸ್ ನಲ್ಲಿಟ್ಟುಕೊಂಡಿರುತ್ತಾರೆ. ಇದು ಹಣದ ಸಮಸ್ಯೆಗೆ ಮೂಲವಾಗುತ್ತದೆ. ಹಣದ ಸಮಸ್ಯೆ ಒಂದು ಸಾರಿ ಎದುರಾದರೆ ಬಡತನ ಬೆನ್ನಿಗೆ ಬೀಳುತ್ತದೆ. ಇದರಿಂದ ಪಾರಾಗಬೇಕೆಂದರೆ ಪ್ರತಿಯೊಬ್ಬರೂ ಹಣದ ವಾಸ್ತು(Money Vastu)ವಿನ ಬಗ್ಗೆ ತಿಳಿದುಕೊಳ್ಳಬೇಕು.


ಇದನ್ನೂ ಓದಿ: ನಿಮ್ಮ ರಾಶಿ ಯಾವುದು? ನಿಮ್ಮ ಲವ್ ಮತ್ತು ರಿಲೇಶನ್ಶಿಪ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ..!


ಪರ್ಸ್ ನಲ್ಲಿ ಯಾವ ವಸ್ತುಗಳಿದ್ದರೆ ಅದೃಷ್ಟ..?


ನಿಮ್ಮ ಪರ್ಸ್ ನಲ್ಲಿ ಶ್ರೀಯಂತ್ರವನ್ನು ಇಟ್ಟುಕೊಳ್ಳಿ. ಇದು ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಇದು ಜೀವನದಲ್ಲಿ ಮಂಗಳಕರ ಮತ್ತು ಸಕರಾತ್ಮಕತೆಯನ್ನು ತರುತ್ತದೆ. ಇದನ್ನು ಪರ್ಸ್ ನಲ್ಲಿಟ್ಟುಕೊಳ್ಳುವುದು ಅದೃಷ್ಟದ ಸಂಕೇತ. ನಿಮಗೆ ಹಣದ ಸಮಸ್ಯೆ(Purse Filled With Money)ಎಂದೂ ಕಾಡುವುದಿಲ್ಲ.


ನಿಮ್ಮ ಪರ್ಸ್ ನಲ್ಲಿ ಕಮಲದ ಹೂವಿನ ಬೀಜಗಳನ್ನು ಇಟ್ಟುಕೊಳ್ಳಿ. ಇದು ನಿಮಗೆ ಅದೃಷ್ಟವನ್ನು ತರುತ್ತದೆ. ತಾಯಿ ಲಕ್ಷ್ಮಿದೇವಿ(Goddess Lakshmi)ಗೂ ಇದು ತುಂಬಾ ಪ್ರಿಯವಾಗಿದೆ. ಹೀಗಾಗಿ ಇದನ್ನು ಇಟ್ಟುಕೊಂಡರೆ ಆರ್ಥಿಕ ಸಮೃದ್ಧಿಯಾಗುತ್ತದೆ. ಯಾವಾಗಲೂ ನೆಮ್ಮದಿಯ ಜೀವನ ಬೇಕೆಂದರೆ ಮೊದಲು ಪರ್ಸ್ ನಲ್ಲಿ ಕಮಲದ ಹೂವಿನ ಬೀಜಗಳನ್ನು ಇಟ್ಟುಕೊಳ್ಳುವುದುನ್ನು ಮರೆಯಬೇಡಿ.


ನೀವು ಮಾನಸಿಕ ಮತ್ತು ಆರ್ಥಿಕವಾಗಿ ವೃದ್ಧಿಯಾಗಲು 7 ಗೋಮತಿ ಚಕ್ರ(Gomati Chakra)ವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಇದು ಆರ್ಥಿಕ ಸಮೃದ್ಧಿಯನ್ನು ತರುತ್ತದೆ. ಇದರಿಂದ ನಿಮಗೆ ಜೀವನದಲ್ಲಿ ಎಂದಿಗೂ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಗೋಮತಿ ಚಕ್ರವು ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.


ಇದನ್ನೂ ಓದಿ: Alum Vastu Tips: ಪಟಕಕ್ಕೆ ಸಂಬಂಧಿಸಿದ ಈ ಉಪಾಯಗಳನ್ನು ಅನುಸರಿಸಿ, ಜೀವನದಲ್ಲಿನ ಕಷ್ಟಗಳಿಗೆ ಮುಕ್ತಿ ಹೇಳಿ


ನಿಮ್ಮ ಪರ್ಸ್(Money Vastu)ನಲ್ಲಿ ಅರಳೀಮರದ ಎಲೆಗಳನ್ನು ಇಟ್ಟುಕೊಳ್ಳಬಹುದು. ಅರಳೀಮರದಲ್ಲಿ ವಿಷ್ಣು ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ. ಹೀಗಾಗಿ ಅರಳೀಮರದ ಎಲೆಗಳನ್ನು ಗಂಗಾಜಲದಲ್ಲಿ ತೊಳೆದು ಅದಕ್ಕೆ ಅರಶಿನ, ಕುಂಕುಮ ಹಚ್ಚಿ ಪೂಜೆ ಮಾಡಿ ಪರ್ಸ್ ನಲ್ಲಿಟ್ಟುಕೊಳ್ಳಿ. ಇದರಿಂದ ನಿಮಗೆ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ. ಲಕ್ಷ್ಮಿದೇವಿ ನಿಮ್ಮ ಮನೆ ಬಿಟ್ಟು ಹೋಗುವುದಿಲ್ಲ.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.