Mercury-Venus Conjunction - ಜೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ಗ್ರಹ ಬೇರೊಂದು ಗ್ರಹದ ಜೊತೆಗೆ ಸಂಯೋಜನೆ ಹೊಂದಿದರೆ, ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಉಂಟಾಗುತ್ತದೆ. ಜೂನ್ 18 ರಂದು ಬುಧ ಹಾಗೂ ಶುಕ್ರ ಗ್ರಹಗಳ ಸಂಯೋಜನೆ ನಡೆಯಲಿದೆ. ಅಂದರೆ, ಜೂನ್ 18 ರಂದು ಶುಕ್ರ ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದು. ಈಗಾಗಲೇ ವೃಷಭ ರಾಶಿಯಲ್ಲಿ ಬುಧ ವಿರಾಜಮಾನನಾಗಿದ್ದಾನೆ. ಹೀಗಾಗಿ ಎರಡೂ ಗ್ರಹಗಳ ಸಂಯೋಜನೆ ನಡೆಯಲಿದೆ ಮತ್ತು ಇದರಿಂದ ಮಹಾಲಕ್ಷ್ಮಿ ಯೋಗ ನಿರ್ಮಾಣಗೊಳ್ಳಲಿದೆ. ಶುಕ್ರನನ್ನು ಐಷಾರಾಮಿ, ಸಂಪತ್ತು, ವೈಭವ, ಪ್ರಣಯ, ಐಶ್ವರ್ಯ ಇತ್ಯಾದಿಗಳ ಕಾರಕ ಗ್ರಹ ಎಂದು ಹೇಳಲಾಗುತ್ತದೆ. ಇದೇ ವೇಳೆ ಬುಧ ಗ್ರಹನನ್ನು ಬುದ್ಧಿವಂತಿಕೆ, ತರ್ಕ, ಸಂಭಾಷಣೆ, ಸಂವಹನ ಮತ್ತು ಬುದ್ಧಿವಂತಿಕೆಯ ಕಾರಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಈ ಎರಡು ಗ್ರಹಗಳ ಉಪಸ್ಥಿತಿಯಿಂದಾಗಿ ಮಹಾಲಕ್ಷ್ಮಿ ಯೋಗವು ರೂಪಗೊಳ್ಳಲಿದೆ, ಇದು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಯೋಗವು ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅತ್ಯಂತ ಶುಭಕರ ಸಾಬೀತಾಗಲಿದೆ. 

COMMERCIAL BREAK
SCROLL TO CONTINUE READING

ಮಹಾಲಕ್ಷ್ಮಿ ಯೋಗದಿಂದ ಈ ರಾಶಿಗಳ ಜನರ ಭಾಗ್ಯ ಬದಲಾಗಲಿದೆ
ಮೇಷ ರಾಶಿ-
ಜೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಜಾತಕದಲ್ಲಿ ಈ ಯೋಗ ಎರಡನೆ ಮನೆ ಅಥವಾ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸಾಮಾನ್ಯವಾಗಿ ಇದನ್ನು ಧನ ಹಾಗೂ ವಾಣಿಯ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವ್ಯಾಪಾರದಲ್ಲಿ ಧನಲಾಭ ಇರಲಿದೆ. ದೀರ್ಘಕಾಲದಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಬಳಿ ಬರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ವಾಣಿಗೆ ಸಂಬಂಧಿಸಿದ ಕೆಲಸಗಳಲ್ಲಿರುವವರಿಗೆ ಧನಲಾಭವಾಗಲಿದೆ. ಮತ್ತಷ್ಟು ಉತ್ತಮ ಧನಲಾಭಕ್ಕಾಗಿ ಮೇಷ ರಾಶಿಯ ಜಾತಕದವರು ಈ ಅವಧಿಯಲ್ಲಿ ಪಚ್ಚೆ ರತ್ನ ಧರಿಸಿದರೆ ಉತ್ತಮ.

ಕರ್ಕ ರಾಶಿ- ಈ ರಾಶಿಯವರಿಗೆ ಬುಧ ಮತ್ತು ಶುಕ್ರರ ಸಂಯೋಜನೆಯಿಂದ ಲಾಭವಾಗಲಿದೆ. ಈ ರಾಶಿಯ 11 ನೇ ಭಾವದಲ್ಲಿ ಮಹಾಲಕ್ಷ್ಮಿ ಯೋಗ ನಿರ್ಮಾಣಗೊಳ್ಳುತ್ತಿದೆ. ಇದನ್ನು ಲಾಭ ಮತ್ತು ಆದಾಯದ ಭಾವ ಎಂದು ಕರೆಯಲಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ಈ ಜನರ ಆದಾಯವು ಹೆಚ್ಚಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವ್ಯಾಪಾರದಲ್ಲಿ ಲಾಭ ಇರಲಿದೆ. ಈ ಅವಧಿಯಲ್ಲಿ ದೊಡ್ಡ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ. ಮಹಾಲಕ್ಷ್ಮಿ ಯೋಗದ ಸಮಯದಲ್ಲಿ ನಿಮ್ಮ ಮೇಲೆ ತಾಯಿ ಲಕ್ಷ್ಮಿಯ ಅನುಗ್ರಹ ಇರಲಿದೆ. ಕರ್ಕ ರಾಶಿಯವರಿಗೆ ಮೂನ್ ಸ್ಟೋನ್ ಧರಿಸುವುದರಿಂದ ವಿಶೇಷವಾಗಿ ಲಾಭವಾಗಲಿದೆ.


ಇದನ್ನೂ ಓದಿ-Shri Ganeshaನ ಕೃಪೆಯಿಂದ ಎಲ್ಲಾ ಕೆಲಸಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿ, ಕೇವಲ ಈ ಸಣ್ಣ ವಸ್ತುವನ್ನು ಮನೆಗೆ ತನ್ನಿ

ಸಿಂಹ ರಾಶಿ- ಸಿಂಹ ರಾಶಿಯ ದಶಮ ಭಾವದಲ್ಲಿ ಲಕ್ಷ್ಮಿ ನಾರಾಯಣ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಭಾವ ನೌಕರಿ ಮತ್ತು ಕಾರ್ಯಕ್ಷೇತ್ರದ ಭಾವ ಎನ್ನಲಾಗುತ್ತದೆ. ಹೊಸ ನೌಕರಿಯ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಧನಲಾಭದ ಸಾಧ್ಯತೆ ಇದೆ.ಒಂದು ವೇಳೆ ಈಗಾಗಲೇ ನೀವು ನೌಕರಿಯಲ್ಲಿದ್ದರೆ, ಬಡ್ತಿ ಸಿಗಲಿದೆ. ಈ ಅವಧಿಯಲ್ಲಿ ತಾಯಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿದೆ. ಸಿಂಹ ರಾಶಿಯವರು ಕೂಡ ಈ ಅವಧಿಯಲ್ಲಿ ಪಚ್ಚೆ ರತ್ನ ಧರಿಸಿದರೆ ಉತ್ತಮ. 


ಇದನ್ನೂ ಓದಿ-Emerald Panna stone: ಪಚ್ಚೆ ರತ್ನ ಧರಿಸುವುದರಿಂದ ಈ ರಾಶಿಯವರಿಗೆ ಬರುತ್ತೆ ಅದಷ್ಟ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.