Hanuman favorite zodiac sign: ಕಲಿಯುಗದಲ್ಲಿ ರಾಮನ ಭಕ್ತ ಹನುಮಂತನ ಆರಾಧನೆಯು ಅತ್ಯಂತ ಫಲಪ್ರದವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನಿಮ್ಮ ಬಿಕ್ಕಟ್ಟನ್ನು ನಿವಾರಿಸಲು, ನೀವು ಪ್ರತಿ ಮಂಗಳವಾರ ಮತ್ತು ಶನಿವಾರದಂದು ವಿಧಿವಿಧಾನಗಳೊಂದಿಗೆ ಹನುಮಾನ್ ದೇವರನ್ನು ಪೂಜಿಸಬೇಕು.


COMMERCIAL BREAK
SCROLL TO CONTINUE READING

ಮಂಗಳವಾರದಂದು ಹನುಮಂತನ ಆರಾಧನೆ ಮಾಡಿದರೆ ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಶನಿವಾರದಂದು ಪೂಜೆ ಮಾಡಿದರೆ ಅವನ ಮಹಿಮೆಯಿಂದಾಗಿ ಶನಿಯ ಬಾಧೆಯಿಂದ ಮುಕ್ತಿ ಸಿಗುತ್ತದೆ. ಅದಕ್ಕಾಗಿಯೇ ಆಂಜನೇಯ ದೇವರನ್ನು ಸಂಕಷ್ಟ ನಿವಾರಕ ಎಂದೂ ಕರೆಯಲಾಗುತ್ತದೆ. ಇನ್ನು ಇವೆಲ್ಲದರ ಹೊರತಾಗಿ, ಆಂಜನೇಯ ದೇವರಿಗೆ ಕೆಲವು ನೆಚ್ಚಿನ ರಾಶಿಗಳಿದ್ದು, ಅದರ ಪ್ರಕಾರ ದೇವರ ದಯೆ ಆ ಜನರ ಮೇಲಿರುತ್ತದೆ ಎನ್ನಲಾಗುತ್ತದೆ.


ಇದನ್ನೂ ಓದಿ: 30 ವರ್ಷಗಳ ನಂತರ ಅಖಂಡ ಸಾಮ್ರಾಜ್ಯ ರಾಜ ಯೋಗ, ಈ ರಾಶಿಯವರಿಗೆ ಅದೃಷ್ಟ!


ಮೇಷ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ರಾಶಿಯ ಜನರ ಮೇಲೆ ಹನುಮಾನ್ ದೇವರ ಆಶೀರ್ವಾದ ಕೊಂಚ ಹೆಚ್ಚಾಗಿಯೇ ಇರುತ್ತದೆ. ಈ ರಾಶಿಯವರು ಕೈಗೆತ್ತಿಕೊಳ್ಳುವ ಕೆಲಸ ಯಾವತ್ತೂ ಸಹ ಬಜರಂಗಬಲಿಯ ಕೃಪೆಯಿಂದ ಪೂರ್ಣಗೊಳ್ಳುತ್ತವೆ. ಈ ರಾಶಿಚಕ್ರದ ಜನರಿಗೆ ಯಾವುದೇ ಸಮಸ್ಯೆಯಿದ್ದರೆ, ಆಂಜನೇಯ ತಕ್ಷಣವೇ ಪರಿಹರಿಸುತ್ತಾರೆ. ಅಲ್ಲದೆ, ಹನುಮಾನ್ ಯಾವಾಗಲೂ ಮೇಷ ರಾಶಿಯ ಜನರಿಗೆ ಬೇಗ ಒಲಿಯುತ್ತಾನೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿ ಈ ರಾಶಿಯ ಜನರು ಬಲವಾದ ಇಚ್ಛಾಶಕ್ತಿ ಮತ್ತು ಏಕಾಗ್ರತೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ.


ಇದಲ್ಲದೆ, ಮೇಷ ರಾಶಿಯ ಜನರು ತಮ್ಮ ಕೌಶಲ್ಯ, ಬುದ್ಧಿವಂತಿಕೆಯಿಂದ ಹಣವನ್ನು ಸಂಗ್ರಹಿಸುವ ಕಲೆಯನ್ನು ಹೊಂದಿದ್ದಾರೆ. ಹನುಮಾನ್ ಆಶೀರ್ವಾದದಿಂದ ಅವರು ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲ. ಮೇಷ ರಾಶಿಯವರು ಪ್ರತಿ ಮಂಗಳವಾರದಂದು ಹನುಮಂತನಿಗೆ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಹೋದರೆ ಶೀಘ್ರದಲ್ಲೇ ಶುಭ ಚಿಹ್ನೆಗಳು ಗೋಚರಿಸುತ್ತವೆ.


ಸಿಂಹ: ಬಜರಂಗಬಲಿಯು ಸಿಂಹ ರಾಶಿಯ ಜನರನ್ನು ಬರಬಹುದಾದ ತೊಂದರೆಗಳಿಂದ ರಕ್ಷಿಸುತ್ತಾರೆ. ಅಂತಹ ಜನರಿಗೆ ಯಾವುದೇ ಬಿಕ್ಕಟ್ಟು ಅಥವಾ ಅಪಘಾತ ಬಂದಾಗ, ಆಂಜನೇಯನ ಕೃಪಾಕಟಾಕ್ಷದಿಂದ ಅವೆಲ್ಲವೂ ದೂರವಾಗುತ್ತದೆ. ಸಿಂಹ ರಾಶಿಯವರ ಕುಟುಂಬದಲ್ಲಿ ಸದಾ ಸೌಹಾರ್ದತೆ ಇರುತ್ತದೆ. ಹನುಮಂತನ ಕೃಪೆಯಿಂದ ಇವರಿಗೆ ಸದಾ ಧನಲಾಭ ಸಿಗುತ್ತದೆ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಹೊಂದುತ್ತಾರೆ. ಹನುಮಂತನ ಆಶೀರ್ವಾದದಿಂದ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಹನುಮಾನ್ ದೇವರನ್ನು ಪೂಜಿಸಿದರೆ ಅವರ ಎಲ್ಲಾ ಸಮಸ್ಯೆಗಳು ಕ್ಷಣಾರ್ಧದಲ್ಲಿ ದೂರವಾಗುತ್ತವೆ.


ಕುಂಭ: ಹನುಮಾನ್ ದೇವರು ಕುಂಭ ರಾಶಿಯವರಿಗೆ ತನ್ನ ವಿಶೇಷ ಆಶೀರ್ವಾದವನ್ನು ನೀಡುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರವು ನಂಬುತ್ತದೆ. ಕುಂಭ ರಾಶಿಯವರ ಪ್ರತಿಯೊಂದು ಕೆಲಸವೂ ಸಫಲವಾಗಲು ಮತ್ತು ಅವರ ಯಾವುದೇ ಕೆಲಸಗಳಿಗೆ ಅಡ್ಡಿಯಾಗದೆ ಮುಂದುವರೆಯಲಿ ಆಂಜನೇಯಕ ದಯೆ ಪ್ರಮುಖ ಕಾರಣ. ಕುಂಭ ರಾಶಿಯ ಜನರ ಜೀವನವು ಸಂತೋಷ, ಸಮೃದ್ಧಿಯಿಂದ ಕೂಡಿರುತ್ತದೆ. ಈ ರಾಶಿಚಕ್ರದ ವ್ಯಕ್ತಿಯು ಹನುಮಾನ್ ದೇವರನ್ನು ನಿಯಮಿತವಾಗಿ ಪೂಜಿಸಿದರೆ, ಶೀಘ್ರದಲ್ಲೇ ದೇವರು ಸಂತೋಷಪಡುತ್ತಾನೆ. ಇನ್ನು ಈ ರಾಶಿಯ ಜನರು ಮಂಗಳವಾರ ದೇವಾಲಯಕ್ಕೆ ಭೇಟಿ ನೀಡಬೇಕು.


ಇದನ್ನೂ ಓದಿ: Urvashi Rautela : ಊರ್ವಶಿ ರೌಟೇಲಾ ಜೊತೆ ಡೇಟಿಂಗ್ ಲಿಸ್ಟ್'ನಲ್ಲಿ ಅಂಬಾನಿ ಮಗ ಸೇರಿ ಖ್ಯಾತ ಕ್ರಿಕೆಟಿಗರು!


ವೃಶ್ಚಿಕ: ವೃಶ್ಚಿಕ ರಾಶಿಯ ಜನರು ಹನುಮಂತ ದೇವರ ಆಶೀರ್ವಾದ ಹೊಂದಿರುತ್ತಾರೆ. ಈ ರಾಶಿಯ ಜನರಿಗೆ ಒಳಿತನ್ನುಂಟು ಮಾಡುವ ಆಶೀರ್ವಾದವನ್ನು ಆಂಜನೇಯ ನೀಡುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.