ಬೆಂಗಳೂರು : ಸಿರಿವಂತಿಕೆಯ ಜೀವನ ನಡೆಸುವುದು, ದುಬಾರಿ ವಸ್ತುಗಳನ್ನು ಖರೀದಿಸುವುದು, ಸಾಮಾನ್ಯವಾಗಿ ಪ್ರತಿಯೊಬ್ಬರ ಬಯಕೆಯಾಗಿರುತ್ತದೆ.  ವ್ಯಕ್ತಿಯ ಗುಣ ನಡತೆ, ಅಭ್ಯಾಸಗಳ ಕಾರಣ ಕೆಲವರು ಶ್ರೀಮಂತರಾದರೆ ಇನ್ನು ಕೆಲವರು ಬಡವರಾಗಬಹುದು. ಜ್ಯೋತಿಷ್ಯದ ಪ್ರಕಾರ,  ಲಕ್ಷ್ಮೀ ದೇವಿಯು ಕೆಲವು ರಾಶಿಯವರ ಮೇಲೆ ತಮ್ಮ ಕೃಪೆಯನ್ನು ಹರಿಸುತ್ತಾಳೆ. ಅವರು ತಮ್ಮ ಜೀವನದಲ್ಲಿ ಅಪಾರ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಮತ್ತೊಂದೆಡೆ, ಕೆಲವರು ತಮ್ಮ ಕೆಟ್ಟ ಅಭ್ಯಾಸಗಳು ಮತ್ತು ತಪ್ಪುಗಳಿಂದಾಗಿ ಇದ್ದ ಸಮಪತ್ತನ್ನು ಕೂಡಾ ಕಳೆದುಕೊಳ್ಳುತ್ತಾರೆ. ಅದೇ ರೀತಿ, 4 ರಾಶಿಯ ಜನರು ಮಿತವ್ಯಯದ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಯಾವಾಗಲೂ ಹಣವನ್ನು ವಿವೇಚನೆಯಿಂದ ಖರ್ಚು ಮಾಡುತ್ತಾರೆ. ಈ ಗುಣದಿಂದಾಗಿ ಅವರು ದೊಡ್ಡ ಬ್ಯಾಂಕ್ ಬ್ಯಾಲೆನ್ಸ್  ಅನ್ನು ಹೊಂದುವುದು ಸಾಧ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ವೃಷಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯವರು ಬಹಳ ಚಿಂತನಶೀಲವಾಗಿ ಖರ್ಚು ಮಾಡುತ್ತಾರೆ. ಅಂತಹವರು ಹಣವನ್ನು ಖರ್ಚು ಮಾಡುವ ಮೊದಲು ಒಮ್ಮೆ ಯೋಚಿಸುತ್ತಾರೆ. ಯಾವ ಸ್ಥಳದಲ್ಲಿ ಹಣ ಖರ್ಚು ಮಾಡುವುದು ಸೂಕ್ತವೂ ಅಲ್ಲಿ ಮಾತ್ರ ಹಣ  ಖರ್ಚು ಮಾಡುತ್ತಾರೆ. ಅವರ ಈ ಅಭ್ಯಾಸದಿಂದಾಗಿ, ಅವರು ಅಲ್ಪಾವಧಿಯಲ್ಲಿಯೇ ದೊಡ್ಡ ಬ್ಯಾಂಕ್ ಬ್ಯಾಲೆನ್ಸ್ ಅನ್ನು  ಹೊಂದುತ್ತಾರೆ.  ತಮ್ಮ ಮಿತವ್ಯಯದ ಅಭ್ಯಾಸದಿಂದಾಗಿ, ಅವರು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. 


ಇದನ್ನೂ ಓದಿ : ಯಾವ ಹಣ್ಣು ಇಷ್ಟ ಎನ್ನುವ ಆಧಾರದ ಮೇಲೆ ಹೇಳಬಹುದು ವ್ಯಕ್ತಿಯ ಗುಣ ಸ್ವಭಾವ .!


ಕನ್ಯಾ ರಾಶಿ : ಕನ್ಯಾ ರಾಶಿಯವರು ಒಂದೊಂದು ಪೈಸೆ ಖರ್ಚು ಮಾಡಬೇಕಾದರೂ ಲೆಕ್ಕ ಹಾಕುತ್ತಾರೆ. ಪ್ರತಿ ಪೈಸೆಗೂ ಲೆಕ್ಕ ಇಡುವ ಇವರು  ದುಂದು ವೆಚ್ಚದಿಂದ ಬಹು ದೂರ ಉಳಿಯುತ್ತಾರೆ. ಈ ರಾಶಿಯವರು ತಮ್ಮ ಜೀವನದಲ್ಲಿ ಸಾಕಷ್ಟು ಹಣವನ್ನು ಕೂಡಿಡುತ್ತಾರೆ. 


ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ತಮಗೆ ಬೇಕಾದಾಗ ಮಾತ್ರ ಹಣ ಖರ್ಚು ಮಾಡುತ್ತಾರೆ. ಇತರರಿಗೆ ಹಣವನ್ನು ಖರ್ಚು ಮಾಡುವ ಮೊದಲು ಸಾವಿರ ಬಾರಿ ಯೋಚಿಸುತ್ತಾರೆ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. 


ಇದನ್ನೂ ಓದಿ : ಬಣ್ಣಗಳು ಕೂಡಾ ಅದೃಷ್ಟದ ಬಾಗಿಲು ತೆರೆಯುತ್ತವೆ.! ತಿಳಿದಿರಲಿ ಯಾವ ದಿನ ಯಾವ ಬಣ್ಣ ನೀಡುವುದು ಶುಭ ಫಲ


ಮಕರ ರಾಶಿ : ಮಕರ ರಾಶಿಯವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಆದರೆ ಹಣ ಖರ್ಚು ಮಾಡುವುದರಲ್ಲಿ ಮಾತ್ರ ಜಿಪುಣತನ ತೋರುತ್ತಾರೆ.  ಅನೇಕ ಬಾರಿ ಅವರು ಅಗತ್ಯ ವಸ್ತುಗಳ ಮೇಲೆ ಕೂಡಾ ಹಣವನ್ನು ಖರ್ಚು ಮಾಡುವುದಿಲ್ಲ. ಹೀಗಾಗಿ ಈ ರಾಶಿಯವರು ಸಾಕಷ್ಟು ಹಣವನ್ನು ಸಂಗ್ರಹಿಸುತ್ತಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.