ವಿವಾಹವು ಒಂದು ಪವಿತ್ರ ಬಂಧವಾಗಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಘನತೆಯ ಬಂಧದಲ್ಲಿ ಬಂಧಿಸಲ್ಪಡುತ್ತಾರೆ. ಆದರೆ ಅವರು ಸಂಬಂಧದಲ್ಲಿ ಪರಸ್ಪರ ಸಂತೋಷವಾಗಿಲ್ಲದಿದ್ದರೆ ಅವರು ತಮ್ಮ ಸಂಬಂಧದ ಮಿತಿಗಳನ್ನು ದಾಟುತ್ತಾರೆ. ಈ ಕಾರಣದಿಂದಾಗಿ, ದಂಪತಿಗಳು ತಮ್ಮ ಬಾಳಸಂಗಾತಿಗೆ ದ್ರೋಹ ಬಗೆಯುದ್ತ್ತಾರೆ. ಅಂದಹಾಗೆ, ಪ್ರಾಚೀನ ಕಾಲದಿಂದಲೂ ಪುರುಷರು ಇದನ್ನು ಗುಟ್ಟಾಗಿ ಅಥವಾ ಬಹಿರಂಗವಾಗಿ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರಷ್ಟೇ ಅಲ್ಲ  ಮಹಿಳೆಯರೂ ಕೂಡ ಸಂಗಾತಿಗೆ ಮೋಸ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ ಎಂಬಂತಾಗಿದೆ. ಕೆಲ ವಿವಾಹಿತ ಮಹಿಳೆಯರು ತಮ್ಮ ಗಂಡನಿಂದ ಮರೆಮಾಚಿ ಇತರ ಪುರುಷರೊಂದಿಗೆ ಸಂಬಂಧವನ್ನು ಹೊಂದುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವಿವಾಹಿತ ಮಹಿಳೆಯರ ವಿವಾಹೇತರ ಸಂಬಂಧಗಳಿಗೆ ಕಾರಣವಾಗುವ ಹಲವು ಅಂಶಗಳಿವೆ, ಹಾಗಾದರೆ ಇದರ ಹಿಂದಿನ ಕಾರಣವನ್ನು ತಿಳಿದುಕೊಳ್ಳೋಣ ಬನ್ನಿ,  


COMMERCIAL BREAK
SCROLL TO CONTINUE READING

ಪತಿಯ ಮೇಲಿನ ಪ್ರೀತಿಯ ಕೊರತೆ
ಕೆಲ ಮಹಿಳೆಯರು ವಿವಾಹದ ಬಳಿಕ ತಮ್ಮ ಪತಿಗೆ ದ್ರೋಹ ಬಗೆಯುತ್ತಾರೆ. ಏಕೆಂದರೆ ಪತಿಯ ಬಗ್ಗೆ ಅವರ ಮನದಲ್ಲಿನ ಪ್ರೀತಿ ಕಡಿಮೆಯಾಗಿರುತ್ತದೆ. ಪತಿಯಿಂದ ಪ್ರೀತಿ ಮತ್ತು ಕಾಳಜಿಯನ್ನು ಪಡೆಯದ ಕಾರಣ ಇದು ಹೆಚ್ಚಾಗಿ ಸಂಭವಿಸುತ್ತದೆ. ಈ ಕಾರಣದಿಂದಾಗಿ, ಅವರ ಮನಸ್ಸಿನಲ್ಲಿ ತನ್ನ ಗಂಡನ ಬಗ್ಗೆ ತಿರಸ್ಕಾರ ಹುಟ್ಟಿಕೊಳ್ಳುತ್ತದೆ, ಇದರಿಂದಾಗಿ ಅವಳು ಪತಿಯಿಂದ ದೂರವಿರಲು ಪ್ರಾರಂಭಿಸುತ್ತಾಳೆ. ನಂತರ, ಮದುವೆಯ ಬಂಧನದಲ್ಲಿದ್ದುಕೊಂಡೆ ಆಕೆ ತನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಬೇರೆ ಪುರುಷನ ಜೊತೆಗೆ ಸಂಬಂಧ ಬೆಳೆಸಲು ಹಾತೊರೆಯುತ್ತಾಳೆ.

ವೈವಾಹಿಕ ಜೀವನದಲ್ಲಿ ಸಂತೋಷ ಸಿಗದೇ ಇದ್ದಾಗ
ಒಂದು ಹುಡುಗಿ ಮದುವೆಯಾದಾಗ, ಆಕೆ ತನ್ನ ಬಾಳಸಂಗಾತಿಯಿಂದ ಹಲವು ನಿರೀಕ್ಷೆಗಳನ್ನು ಹೊಂದಿರುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ, ಪತಿ ತನ್ನ ನಿರೀಕ್ಷೆಗಳನ್ನು ಪೂರೈಸದಿದ್ದಾಗ, ಈ ಸಂಬಂಧದಲ್ಲಿ ಅವಳು ಅತೃಪ್ತಿ ಹೊಂದುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ಮದುವೆಯ ಬಂಧದಲ್ಲಿ ಮುಂದುವರೆದೆ, ಆಕೆ ಇತರ ಪುರುಷರಲ್ಲಿ ತನ್ನ ಸಂತೋಷವನ್ನು ಹುಡುಕಲು ಪ್ರಾರಂಭಿಸುತ್ತಾಳೆ, ಇದರಿಂದಾಗಿ ಅವಳು ವಿವಾಹೇತರ ಸಂಬಂಧವನ್ನು ಹೊಂದುತ್ತಾಳೆ.


ಇದನ್ನೂ ಓದಿ-ಇಲ್ಲಿ ಹೆಣ ಬಲವಂತವಾಗಿ ಹಣ ಕೇಳುತ್ತೇ, ಕೊಡದೆ ಹೋದ್ರೆ...!


ದೈಹಿಕ ಅತೃಪ್ತಿ ಇದ್ದಾಗ
ದಾಂಪತ್ಯ ಜೀವನದಲ್ಲಿ ಲೈಂಗಿಕ ತೃಪ್ತಿ ತುಂಬಾ ಮುಖ್ಯ ಏಕೆಂದರೆ ದಂಪತಿಗಳು ಸಂಬಂಧದಲ್ಲಿ ಲೈಂಗಿಕವಾಗಿ ತೃಪ್ತರಾಗದಿದ್ದರೆ ಸಂತೋಷವಾಗಿರುವುದು ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ತಮ್ಮ ಪತಿಯಿಂದ ದೈಹಿಕವಾಗಿ ತೃಪ್ತಿ ಹೊಂದಲು ಸಾಧ್ಯವಾಗದಿದ್ದಾಗ, ಅವರು ಇತರ ಪುರುಷರ ಕಡೆಗೆ ಆಕರ್ಷಿತರಾಗಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಇದರಿಂದ ಪುರುಷರೂ ಕೂಡ ಪತ್ನಿಯರಿಗೆ ದ್ರೋಹ ಬಗೆಯುವುದರಿಂದಹಿಂದೆ ಸರಿಯುವುದಿಲ್ಲ.


ಇದನ್ನೂ ಓದಿ-ವಿಜ್ಞಾನಿಗಳಿಗೂ ಭೇಧಿಸಲು ಸಾಧ್ಯವಾಗಿಲ್ಲ ಈ ಶಿವಾಲಯದ ರಹಸ್ಯ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.