Remedies For Sade Sati And Dhaiya: ಕರ್ಮಗಳಿಗೆ ತಕ್ಕ ಫಲ ನೀಡುವ ನ್ಯಾಯದ ದೇವರು ಎಂದೇ ಪರಿಗಣಿಸಲ್ಪಡುವ ಶನಿ ಹೆಸರು ಕೇಳಿದರೆ ಸಾಕು ಕೆಲವರ ಮನದಲ್ಲಿ ನಡುಕ ಆರಂಭವಾಗುತ್ತದೆ. ಅಂತಹದರಲ್ಲಿ ಜಾತಕದಲ್ಲಿ ಶನಿ ಸಾಡೇಸಾತಿ-ಧೈಯಾ ಪ್ರಭಾವವನ್ನು ಹೊಂದಿರುವ ವ್ಯಕ್ತಿ ಕನಸಿನಲ್ಲಿಯೂ ಬೆಚ್ಚಿ ಬೀಳುವುದರಲ್ಲಿ ಅಚ್ಚರಿಯೇ ಇಲ್ಲ. ಆದರೆ, ಶ್ರೀಗಂಧವು ಶನಿಯ ಕಾಟದಿಂದ ಸುಲಭವಾಗಿ ಪರಿಹಾರ ನೀಡಬಲ್ಲದು ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ವೈದಿಕ ಜ್ಯೋತಿಷ್ಯದಲ್ಲಿ, ಶನಿ ಕಾಟದಿಂದ ಮುಕ್ತಿ ಪಡೆಯಲು ಹಾಗೂ ಶನಿ ಸಾಡೇಸಾತಿ- ಧೈಯಾ ಪ್ರಭಾವಗಳನ್ನು ತಪ್ಪಿಸಲು ಶ್ರೀಗಂಧದ ಪರಿಹಾರಗಳ ಬಗ್ಗೆ ಸಲಹೆ ನೀಡಲಾಗಿದೆ. ಕೆಂಪು, ಹಳದಿ ಮತ್ತು ಬಿಳಿ ಶ್ರೀಗಂಧಗಳ ಸಹಾಯದಿಂದ ಸುಲಭ ಪರಿಹಾರವನ್ನು ಪಡೆಯಬಹುದು. ಶನಿ ದೇವಾನು ಶ್ರೀಗಂಧದ ಪರಿಹಾರಗಳಿಂದ ಬಹಳ ಬೇಗ ಸಂತುಷ್ಟನಾಗುತ್ತಾನೆ ಎಂದು ಹೇಳಲಾಗುತ್ತದೆ.  


ಇದನ್ನೂ ಓದಿ- Shani Gochar 2023:  ಈ ರಾಶಿಗಳಿಗೆ ಸಾಡೇಸಾತಿಯಿಂದ ಮುಕ್ತಿ, ಒಳ್ಳೆಯ ದಿನಗಳು ಆರಂಭ!


ಶನಿಯ ಸಾಡೇ ಸತಿ ಮತ್ತು ಧೈಯಾ ಪ್ರಭಾವವನ್ನು ತಪ್ಪಿಸಲು ಕೆಂಪು, ಹಳದಿ ಮತ್ತು ಬಿಳಿ ಶ್ರೀಗಂಧದ ಪರಿಹಾರಗಳು:
ಜ್ಯೋತಿಷ್ಯದ ಪ್ರಕಾರ, ಶನಿಯ ಸಾಡೇಸಾತಿ ಮತ್ತು ಧೈಯಾ ಪ್ರಭಾವವನ್ನು ತಪ್ಪಿಸಲು 40 ದಿನಗಳ ಕಾಲ ನಿರಂತರವಾಗಿ ಸ್ನಾನದ ನೀರಿನಲ್ಲಿ ಶ್ರೀಗಂಧದ ಬೇರನ್ನು ಹಾಕಿ ಸ್ನಾನ ಮಾಡಬೇಕು. 
* ಪ್ರತಿ ಶನಿವಾರದಂದು ಕೆಂಪು ಬಣ್ಣದ ಶ್ರೀಗಂಧದ ತಿಲಕವನ್ನು ಅನ್ವಯಿಸಿ. ಇದಲ್ಲದೆ ಶನಿ ದೇವರಿಗೆ ಕೆಂಪು ಚಂದನವನ್ನು ಅರ್ಪಿಸಬಹುದು. ಇದು ಶನಿಯ ಕೋಪವನ್ನು ಶಮನಗೊಳಿಸುತ್ತದೆ.
* ಶನಿದೇವನನ್ನು ಮೆಚ್ಚಿಸಲು ಪ್ರತಿ ಶನಿವಾರ ಸೂರ್ಯಾಸ್ತದ ನಂತರ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದು ಶುಭ. ಇದರೊಂದಿಗೆ ಶ್ರೀಗಂಧದ ಮಾಲೆಯೊಂದಿಗೆ ಶನಿದೇವನ "ಓಂ ಶಂ ಶನೈಶ್ಚರಾಯ ನಮಃ" ಎಂಬ ಮಂತ್ರವನ್ನು ಜಪಿಸಿ.


ಇದನ್ನೂ ಓದಿ- Shani Gochar : ಈ ರಾಶಿಯವರಿಗೆ ಸಾಡೇ ಸತಿ ಶುರು, ಶನಿದೇವನ ಕೃಪೆಗೆ ಈ ರತ್ನ ಧರಿಸಿ


ವಾಸ್ತವವಾಗಿ, ಕರ್ಮಫಲದಾತ ಶನಿಯು ನಾವು ಮಾಡುವ ಕರ್ಮಗಳಿಗೆ ತಕ್ಕ ಫಲ ನೀಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಮಾಡುವ ಒಳ್ಳೆಯ ಕಾರ್ಯಗಳಿಂದ ಶನಿ ದೇವನನ್ನು ಮೆಚ್ಚಿಸಬಹುದು. ದಾನ-ಧರ್ಮಗಳಿಂದ ಶನಿದೇವ ಬೇಗನೇ ಒಲಿಯುತ್ತಾನೆ. ಇದಲ್ಲದೆ, ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡುವುದು ಶನಿದೇವನನ್ನು ಮೆಚ್ಚಿಸಲು ಇರುವ ಸುಲಭ ಮಾರ್ಗಗಳಾಗಿವೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.