ಬೆಂಗಳೂರು : ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾಗಲು ಮತ್ತು ಸಮಾಜದಲ್ಲಿ ಪ್ರತಿಷ್ಠೆ ಪಡೆಯಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಆಚಾರ್ಯ ಚಾಣಕ್ಯ ಅವರ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ (Chanakya Niti). ಚಾಣಕ್ಯ ನೀತಿಯಲ್ಲಿ ಮಾನವ ಮತ್ತು ಸಮಾಜದ ಕಲ್ಯಾಣದ ಬಗ್ಗೆಯೂ ಹೇಳಲಾಗಿದೆ. ಇನ್ನು ಯಾವ ಗುಣಗಳಿದ್ದರೆ ವ್ಯಕ್ತಿ  ಅಂತಹ ಜನರು ಯಾವಾಗಲೂ ತಮ್ಮಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು. 


COMMERCIAL BREAK
SCROLL TO CONTINUE READING

ಆಚಾರ್ಯ ಚಾಣಕ್ಯರ ನೀತಿ ಶಾಸ್ತ್ರದಲ್ಲಿಯೂ ಒಂದು ಶ್ಲೋಕವನ್ನು ಉಲ್ಲೇಖಿಸಲಾಗಿದೆ (Chanakya Niti). ಅದೇನೆಂದರೆ 'ಅಯಂ ನಿಜಃ ಪರೋ ವೇತಿ ಗಣನ್ ಲಘು ಚೇತಸಂ, ಉದರ್ಚರಿತನಾ ತು ವಸುಧೈವ ಕುಟುಂಬಕಂ'. ಈ ಶ್ಲೋಕದ ಅರ್ಥವೇನೆಂದರೆ, ಯಾರು ಹೃದಯ ವೈಶಾಲ್ಯತೆ ಹೊಂದಿರುತ್ತಾರೆಯೋ, ಅವರಿಗೆ ಇಡೀ ಭೂಮಿ ಒಂದು ಕುಟುಂಬದಂತೆ. ಯಾರು ಸಂಕುಚಿತ ಮನೋಭಾವವನ್ನು ಹೊಂದಿರುತ್ತಾರೆಯೋ ಅವರು ತಮ್ಮ ಮತ್ತು ಪರರ ಮಧ್ಯೆ  ಸಿಕ್ಕಿಹಾಕಿಕೊಳ್ಳುತ್ತಾರೆ (Chanakya Niti about relkation). 


ಇದನ್ನೂ ಓದಿ : ಶನಿ ಧೈಯಾದಿಂದ ಈ ರಾಶಿಯವರಿಗೆ ಶೀಘ್ರ ಸಿಗಲಿದೆ ಮುಕ್ತಿ, ಬೆಳಗಲಿದೆ ಅದೃಷ್ಟ


ಸರ್ವರ ಹಿತವನ್ನು ಕಾಯಬೇಕು : 
ಆಚಾರ್ಯ ಚಾಣಕ್ಯರ ಪ್ರಕಾರ ಸದಾ ಎಲ್ಲರ ಒಳಿತಿಗಾಗಿ ಯೋಚಿಸಬೇಕು. ಸದಾ ಹೃದಯ ವೈಶಾಲ್ಯತೆ ಹೊಂದಿರಬೇಕು.  ಹೃದಯ ವೈಶಾಲ್ಯತೆ ಇದ್ದರೆ, ಎಲ್ಲರೂ ಪ್ರೀತಿಯಿಂದ ಮಾತನಾಡುತ್ತಾರೆ. ಸಮಾಜದಲ್ಲಿ ಗೌರವ ಮತ್ತು ಗೌರವದ ಜೊತೆಗೆ  ಪ್ರೀತಿ ಸಿಗುತ್ತದೆ. ಉದಾರ ಮನಸ್ಸಿನ ವ್ಯಕ್ತಿ ದಾನ ಮಾಡಲು ಎಂದಿಗೂ ಹಿಂದೆ ಮುಂದೆ ಯೋಚಿಸುವುದಿಲ್ಲ (Chanakya niti for success). ಮಾತ್ರವಲ್ಲ, ಯಾವಾಗಲೂ ಎಲ್ಲರಿಗೂ ಸಹಾಯ ಮಾಡಲು ಮುಂದೆ ಬರುತ್ತಾರೆ.  


ಹೀಗಿದ್ದರೆ ಯಾರ ಪ್ರೀತಿಯೂ ಸಿಗುವುದಿಲ್ಲ : 
ಆಚಾರ್ಯ ಚಾಣಕ್ಯರ ಪ್ರಕಾರ ಯಾರು ಸಂಕುಚಿತ ಮನೋಭಾವವನ್ನು ಹೊಂದಿರುತ್ತಾರೆಯೋ ಅವರ ಆಲೋಚನೆಯೂ ಚಿಕ್ಕದಾಗಿರುತ್ತದೆ (Chanakya Niti). ಅಂತಹ ಜನರು ಏನೇ ಕೆಲಸ ಮಾಡುವ ಮೊದಲು ಅದರ ಲಾಭ ನಷ್ಟಗಳ ಬಗ್ಗೆ ಯೋಚಿಸುತ್ತಾರೆ. ಅಂತಹವರನ್ನು ಎಲ್ಲರೂ ದ್ವೇಷದಿಂದ ನೋಡುತ್ತಾರೆ. ಅಷ್ಟೇ ಅಲ್ಲ ಅಂತಹವರು ಜೀವನ ಪರ್ಯಂತ ಒಂಟಿಯಾಗಿ ಬದುಕಬೇಕಾಗುತ್ತದೆ. 


ಇದನ್ನೂ ಓದಿ : Budh Ast : ಈ 6 ರಾಶಿಯವರಿಗೆ ಅದೃಷ್ಟ ತರಲಿದ್ದಾನೆ 'ಅಸ್ತ' ಬುಧ : ನಿಮಗೆ ಹಣದ ಸುರಿ ಮಳೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.