ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಮತ್ತು ಅವಳ ಕೃಪೆಯನ್ನು ಉಳಿಸಿಕೊಳ್ಳಲು ನಾವು ಹಗಲು ರಾತ್ರಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತೇವೆ. ಲಕ್ಷ್ಮಿ ದೇವಿಯ ಆಶೀರ್ವಾದವು ಸದಾ ನಮ್ಮ ಮೇಲೆ ಉಳಿಯಲು ಜ್ಯೋತಿಷ್ಯ ಪರಿಹಾರಗಳು, ಅನೇಕ ವಾಸ್ತು ಪರಿಹಾರಗಳನ್ನು ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪುಗಳು ಸಹ ಅವನನ್ನು ಬಡವಾಗಿಸಬಹುದು.


COMMERCIAL BREAK
SCROLL TO CONTINUE READING

ಕಾರ್ತಿಕ ಮಾಸ ಶುರುವಾಗಿದೆ. ಈ ಮಾಸದಲ್ಲಿ ಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಮಾಸದಲ್ಲಿ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಒಟ್ಟಿಗೆ ಪೂಜಿಸುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ. ಆದರೆ ಈ ತಿಂಗಳು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಿದರೂ ಲಕ್ಷ್ಮಿಯು ಕೋಪದಿಂದ ಹೊರಟು ಹೋಗುತ್ತಾಳೆ ಮತ್ತು ನೀವು ರಸ್ತೆಯಲ್ಲಿ ನಿಲ್ಲುತ್ತೀರಿ.


ಇದನ್ನೂ ಓದಿ : Fenugreek Side Effects: ಈ 4 ಕಾಯಿಲೆ ಇರುವವರಿಗೆ ಮೆಂತೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ


ಸ್ತ್ರೀಯರಿಗೆ ಗೌರವ:


ಸ್ತ್ರೀಯರನ್ನು ಅವಮಾನಿಸುವ ಮನೆಯಲ್ಲಿ ಲಕ್ಷ್ಮಿ ದೇವಿಯು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ನಂಬಿಕೆ ಇದೆ. ಅದಕ್ಕೇ ಯಾವಾಗಲೂ ಮನೆಯ ಹೆಣ್ಣನ್ನು ಗೌರವಿಸಿ. ಆ ಮೂಲಕ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಬಹುದು.


ಸ್ವಚ್ಚತೆ ಕಾಪಾಡುವುದು


ತಾಯಿ ಲಕ್ಷ್ಮಿಗೆ ಸ್ವಚ್ಛತೆ ಎಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು, ಮನೆಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಬೇಕು ಎಂದು ಹೇಳಲಾಗುತ್ತದೆ, ಅದೇ ರೀತಿ ಅಡುಗೆಮನೆಯನ್ನು ಕೊಳಕು ಅಥವಾ ಅಶುಚಿತ್ವ ಇಡುವವರಿಂದ ಲಕ್ಷ್ಮೀದೇವಿ ದೂರವಿರುತ್ತಾಳೆ. ಹಾಗಾಗಿ ಮನೆಯಲ್ಲಿ ಸ್ವಚ್ಚತೆಯನ್ನು ಕಾಪಾಡಿ.


ಇದನ್ನೂ ಓದಿ: ಚುಮು ಚುಮು ಚಳಿ ನಡುವೆ ರಾಜ್ಯದ ಜನತೆಗೆ ಮತ್ತೆ ವರುಣನ ಕಾಟ- ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ


ಸಂಜೆ ಸಮಯದಲ್ಲಿ ಮಲಗುವುದು.


ಸಂಜೆ ಮಲಗುವುದನ್ನು ತಪ್ಪಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಹೀಗೆ ಮಾಡುವವರ ಮೇಲೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಸಂಜೆ ವೇಳೆಗೆ ಲಕ್ಷ್ಮಿ ಮನೆ ಪ್ರವೇಶಿಸುತ್ತಾಳೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಸದಸ್ಯರು ಮಲಗಿರುವಾಗ ಮತ್ತು ಮನೆಯ ಬಾಗಿಲು ಮುಚ್ಚಿದಾಗ, ಲಕ್ಷ್ಮಿ ದೇವಿಯು ಮನೆಯಿಂದ ಹೊರಬರುತ್ತಾಳೆ. ಹಾಗಾಗಿ ಸಾಯಂಕಾಲ ಸಮಯದಲ್ಲಿ ಮಲಗಬಾರದು ಎಂದು ಹೇಳುತ್ತಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.