Astrology, Zodiac Sign: ಯಾವುದೇ ಸಂಬಂಧದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಮತ್ತು ಅದನ್ನು ಕಾಪಾಡಿಕೊಂಡು ಹೋಗುವುದು ಒಂದು ದೊಡ್ಡ ಜವಾಬ್ದಾರಿಯಾಗಿದೆ. ಸಂಬಂಧದಲ್ಲಿ ಪ್ರತಿ ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ತುಂಬಾ ಮುಖ್ಯವಾಗಿರುತ್ತವೆ. ಏಕೆಂದರೆ ಸಂಬಂಧಗಳ ನಡುವಿನ ಬಂಧ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಅವುಗಳನ್ನು ತುಂಬಾ ಗಟ್ಟಿಯಾಗಿ ಎಳೆದಾಡಿದರೆ ಅಥವಾ ನಿರ್ಲಕ್ಷ ಧೋರಣೆಯನ್ನು ತಳೆದರೆ, ಅವು ಕೈಯಿಂದ ಜಾರಿಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಿರುವಾಗ ಸಂಬಂಧಗಳನ್ನು ತುಂಬಾ ಜಾಗ್ರತೆಯಿಂದ ನಿಭಾಯಿಸಬೇಕು. ಇಂದು ನಾವು ನಿಮಗೆ ಕೆಲ ರಾಶಿಗಳ ಜನರ ಬಗ್ಗೆ ಮಾಹಿತಯನ್ನು ನೀಡುತ್ತಿದ್ದು, ಈ ಜನರು ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ತೀರಾ ದುರ್ಬಲರಾಗಿರುತ್ತಾರೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ಭಿನ್ನವಾಗಿರುತ್ತದೆ. ಹೀಗಿರುವಾಗ ಕೆಲವರು ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೆ. ಇನ್ನೂ ಕೆಲ ಜನರು ಸಂಬಂಧಗಳನ್ನು ಕಾಪಾಡಿಕೊಳ್ಳಲು ವಿಫಲರಾಗುತ್ತಾರೆ. ಇಂದು ನಾವು ಅಂತಹ ಕೆಲ ರಾಶಿಗಳ ಜನರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಈ ರಾಶಿಗಳ ಜನರು ಹೆಚ್ಚುಕಾಲ ಒಂದೇ ವ್ಯಕ್ತಿಯ ಜೊತೆಗೆ ಸಂಬಂಧದಲ್ಲಿ ಮುಂದುವರೆಯಲು ಬಯಸುವುದಿಲ್ಲ.


ಮೇಷ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಜನರು ಕೋಪದ ಸ್ವಭಾವದವಾಗಿರುತ್ತಾರೆ. ಪ್ರತಿಯೊಂದು ಸಣ್ಣ-ಪುಟ್ಟ ವಿಷಯವನ್ನು ಇವರು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ, ಇದರಿಂದಾಗಿ ಅವರು ದೀರ್ಘಕಾಲದವರೆಗೆ ಸಂಬಂಧದಲ್ಲಿ ಇರಲು ಸಾಧ್ಯವಾಗುವುದಿಲ್ಲ. ಇವರ ಇನ್ನೊಂದು ವಿಶೇಷತೆ ಎಂದರೆ, ಒಂದೊಮ್ಮೆ ಸಂಬಂಧದಲ್ಲಿ ಹುಳಿ ನಿರ್ಮಾಣವಾಗುತ್ತಿದೆ ಎಂಬುದನ್ನು ಇವರು ಮನಗಂಡರೆ, ನಿಧಾನವಾಗಿ ತಾವೇ ಸಂಬಂಧದಿಂದ ದೂರ ಸರಿಯುತ್ತಾರೆ.


ವೃಶ್ಚಿಕ ರಾಶಿ - ಈ ರಾಶಿಗಳ ಜನರಿಗೆ ಸಂಬಂಧಗಳ ಮಹತ್ವ ತಿಳಿದಿರುತ್ತದೆ. ಆದರೆ, ಕೆಲವೊಮ್ಮೆ ಅವರು ಅವುಗಳನ್ನು ನಿಭಾಯಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ವಿಷಯವು ತಮ್ಮ ಕೈಯಿಂದ ಜಾರುತ್ತಿದೆ ಎಂದು ಅವರು ಭಾವಿಸಲು ಪ್ರಾರಂಭಿಸಿದಾಗ, ಅವರು ಆ ಸಂಬಂಧವನ್ನು ಮುಂದುವರೆಸಲು ಬಯಸುವುದಿಲ್ಲ ಅಥವಾ ಸಂಬಂಧವನ್ನು ಹೆಚ್ಚು ಎಳೆದಾಡುವ ಗೋಜಿಗೆ ಹೋಗುವುದಿಲ್ಲ. ಆದರೆ ಈ ರಾಶಿಯ ಜನರ ವಿಶೇಷತೆ ಎಂದರೆ, ಈ ಜನರು ತಮ್ಮ ಸಂಗಾತಿಯ ಜೊತೆಗೆ ಕಳೆದ ಕ್ಷಣಗಳನ್ನು ಸುಲಭವಾಗಿ ಮರೆಯುವುದಿಲ್ಲ.


ಇದನ್ನೂ ಓದಿ-ಜುಲೈ 2 ರಿಂದ ಈ ನಾಲ್ಕು ರಾಶಿಯವರ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಲಿದ್ದಾರೆ ಬುಧ ಮತ್ತು ಆದಿತ್ಯ


ಕುಂಭ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯವರು ಚಂಚಲ ಸ್ವಭಾವದವರಾಗಿರುತ್ತಾರೆ. ಇದೇ ಕಾರಣದಿಂದ ಇವರು ಜೀವನದಲ್ಲಿ ಒಂದಲ್ಲ ಹಲವಾರು ಬಾರಿ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಜನರು ಯಾವುದೇ ಒಂದು ಸಂಬಂಧದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಈ ಸ್ವಭಾವದಿಂದಾಗಿ, ಸಂಗಾತಿಯೊಂದಿಗಿನ ವಿಚ್ಛೇದನೆ ತ್ವರಿತವಾಗಿ ಸಂಭವಿಸುತ್ತದೆ. ಈ ಜನರು ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ ಮತ್ತು ಈ ಕಾರಣದಿಂದಾಗಿ ಅವರು ಯಾರೊಂದಿಗೂ ದೀರ್ಘಕಾಲ ಉಳಿಯಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ-ದೇವರ ಮುಂದೆ ದೀಪ ಬೆಳಗುವ ವೇಳೆ ಆಗುವ ಈ ತಪ್ಪುಗಳಿಂದ ಆಗುತ್ತದೆ ಭಾರೀ ಧನ ಹಾನಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.