ದ್ವಾದಶ ಜ್ಯೋತಿರ್ಲಿಂಗಗಳು - ಒಂದು ನೋಟ

Mon, 12 Feb 2018-7:52 pm,

ಸೋಮನಾಥ ಜ್ಯೋತಿರ್ಲಿಂಗ : 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಗುಜರಾತ್ ನ ಕಾಥೆವಾಡ ಜಿಲ್ಲೆಯ ವೆರಾವಲ್ ನಲ್ಲಿರುವ ಸೋಮನಾಥ ದೇವಸ್ಥಾನ. ಇದು ದೇಶದ ಅತ್ಯಂತ ಪೂಜ್ಯ ಯಾತ್ರಾ ಸ್ಥಳ. 

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ : ಮಲ್ಲಿಕಾರ್ಜುನ ದೇವಾಲಯವು ಆಂಧ್ರಪ್ರದೇಶದ ದಕ್ಷಿಣ ಭಾಗದಲ್ಲಿರುವ ಶ್ರೀ ಶೈಲ ಪರ್ವತದ ಮೇಲಿರುವ ಕೃಷ್ಣ ನದಿಯ ದಡದಲ್ಲಿದೆ. ಇದನ್ನು 'ದಕ್ಷಿಣ ಕೈಲಾಸ' ಎಂದೂ ಕರೆಯುತ್ತಾರೆ. ಈ ದೇವಾಲಯದ ದೇವತೆಗಳೆಂದರೆ ಮಲ್ಲಿಕಾರ್ಜುನ (ಶಿವ) ಮತ್ತು ಭ್ರಾಮರಂಬ (ದೇವಿ). 

ಮಹಾಕಾಳೇಶ್ವರ ಜ್ಯೋತಿರ್ಲಿಂಗ : ಈ ಪ್ರಸಿದ್ಧ ದೇವಾಲಯವು ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿದೆ. ಜನರು ಇಲ್ಲಿ ತಮ್ಮ ಮರಣದ ಭಯವನ್ನು ತೊಡೆದುಹಾಕಲು ಪ್ರಾರ್ಥಿಸುತ್ತಾರೆ.

ಓಂಕಾರೇಶ್ವರ ಜ್ಯೋತಿರ್ಲಿಂಗ : ಓಂಕಾರೇಶ್ವರ ದೇವಸ್ಥಾನವು ಅತ್ಯಂತ ಪೂಜ್ಯ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದು ಮಧ್ಯಪ್ರದೇಶದ ನರ್ಮದಾ ನದಿಯ ಶಿವಪುರಿ ದ್ವಿಪದಲ್ಲಿದೆ. ಓಂಕರೇಶ್ವರ್ ಎಂಬ ಪದ ಓಂ ಪದದ ಪ್ರಭು ಎಂಬ ಅರ್ಥವನ್ನು ನೀಡುತ್ತದೆ. ಸಿವಾನ್ ಭಕ್ತರು ಈ ದೇವಾಲಯಕ್ಕೆ ಬಂದು ತಮ್ಮ ಜೀವನದ ಕಷ್ಟಗಳ ನಿವಾರಣೆಗಾಗಿ ಪ್ರಾರ್ಥಿಸುತ್ತಾರೆ. 

ವೈದ್ಯನಾಥ ಜ್ಯೋತಿರ್ಲಿಂಗ : ವೈದ್ಯನಾಥ ದೇವಾಲಯವು ವೈದ್ಯನಾಥ್ ಅಥವಾ ಬೈದ್ಯನಾಥ್ ಎಂದೂ ಕರೆಯಲ್ಪಡುತ್ತದೆ. ಇದು ಜಾರ್ಖಂಡ್ ನ ಸಂತಾಲ್ ಪರ್ಗಣಾಸ್ ಪ್ರದೇಶದಲ್ಲಿದೆ. ಇದು ಅತ್ಯಂತ ಪೂಜ್ಯ ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಅತ್ಯಂತ ಭಕ್ತಿ ಹಾಗೂ ಪ್ರಾಮಾಣಿಕವಾಗಿ ಪೂಜೆ ಸಲ್ಲಿಸುವರು ತಮ್ಮೆಲ್ಲ ಕಷ್ಟ ಕಾರ್ಪಣ್ಯಗಳಿಂದ ಹೊರಬರುತ್ತಾರೆ ಎಂಬ ನಂಬಿಕೆಯಿದೆ. 

ಭೀಮಾಶಂಕರ ಜ್ಯೋತಿರ್ಲಿಂಗ : ಭೀಮಾಶಂಕರ ದೇವಾಲಯವು ಮಹಾರಾಷ್ಟ್ರದ ಪುಣೆಯ ಸಹ್ಯಾದ್ರಿ ಪ್ರದೇಶದಲ್ಲಿದೆ. ಇದು ಭೀಮಾ ನದಿಯ ದಂಡೆ ಮೇಲಿದ್ದು, ಈ ನದಿಯ ಮೂಲವೆಂದು ಪರಿಗಣಿಸಲಾಗಿದೆ.

ರಾಮೇಶ್ವರ ಜ್ಯೋತಿರ್ಲಿಂಗ : ದಕ್ಷಿಣದ ರಾಮೇಶ್ವರ ದೇವಸ್ಥಾನವು ತಮಿಳುನಾಡಿನ ಸೇತು ದ್ವೀಪದಲ್ಲಿದೆ. ಈ ದೇವಾಲಯವು ತನ್ನ ವಾಸ್ತುಶಿಲ್ಪ, ಹೆಚ್ಚು ಪ್ರಮುಖವಾಗಿ ದೀರ್ಘ ಅಲಂಕೃತ ಪ್ರಾಂಗಣ, ಗೋಪುರಗಳು ಮತ್ತು 36 ತೀರ್ಥಂಗಲಿಂದ ಪ್ರಸಿದ್ಧಿ ಹೊಂದಿದೆ. 

ನಾಗೇಶ್ವರ ಜ್ಯೋತಿರ್ಲಿಂಗ : ನಾಗೇಶ್ವರ ದೇವಸ್ಥಾನವು ನಾಗನಾಥ ದೇವಸ್ಥಾನ ಎಂದೂ ಕರೆಯಲ್ಪಡುತ್ತದೆ. ಇದು ಗುಜರಾತ್ನ ಸೌರಾಷ್ಟ್ರದ ಕರಾವಳಿ ತೀರದ ಗೋಮತಿ ದ್ವಾರಕ ಮತ್ತು ಬೀಟ್ ದ್ವಾರಕ ದ್ವೀಪಗಳ ನಡುವೆ ಇದೆ. ಈ ದೇವಾಲಯದಲ್ಲಿ ಪ್ರಾರ್ಥಿಸಿದರೆ ಎಲ್ಲ ವಿಷಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. 

ಕಾಶಿ ವಿಶ್ವನಾಥ ದೇವಾಲಯ : ಕಾಶಿ ವಿಶ್ವನಾಥ ದೇವಾಲಯವು ಪ್ರಪಂಚದ ಅತ್ಯಂತ ಪೂಜ್ಯ ಸ್ಥಳವಾದ ಕಾಶಿಯಲ್ಲಿದೆ. ಇದು ಪವಿತ್ರ ಗಂಗಾ ನದಿಯ ತಟದಲ್ಲಿರುವ ವಾರಣಾಸಿ ನಗರದಲ್ಲಿದೆ. ಪ್ರಪಂಚದ ಜನರು ಈ ದೇವಾಲಯಕ್ಕೆ ಬಂದು 'ಮೋಕ್ಷ'ಕ್ಕಾಗಿ ಪ್ರಾರ್ಥಿಸುತ್ತಾರೆ. 

 

ತ್ರಿಯಂಬಕೇಶ್ವರ ಜ್ಯೋತಿರ್ಲಿಂಗ : ಮಹಾರಾಷ್ಟ್ರದ ನಾಸಿಕ್ನಿಂದ 30 ಕಿ.ಮೀ ದೂರದ, ಗೋದಾವರಿ ನದಿ ಹರಿಯುವ ಬ್ರಹ್ಮಗಿರಿ ಪರ್ವತದ ಬಳಿ ತ್ರಿಯಂಬಕೇಶ್ವರ ದೇವಾಲಯವಿದೆ. ಈ ದೇವಾಲಯವು 'ಗೌತಮಿ ಗಂಗಾ' ಎಂದು ಕರೆಯಲ್ಪಡುವ ಗೋದಾವರಿ ನದಿಯಾ ಮೂಲವೆಂದು ಪರಿಗಣಿಸಲ್ಪಟ್ಟಿದ್ದು, ದಕ್ಷಿಣ ಭಾರತದ ಅತ್ಯಂತ ಪವಿತ್ರ ನದಿಯಾಗಿದೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರಿಂದ ಜನರು ತಮ್ಮ ಎಲ್ಲಾ ಪಾಪಗಳನ್ನೂ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. 

ಕೇದಾರನಾಥ ಜ್ಯೋತಿರ್ಲಿಂಗ : ಭಾರತದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ದೇವಾಲಯವು ರುದ್ರ ಹಿಮಾಲಯ ವಲಯದಲ್ಲಿ, 12000 ಅಡಿ ಎತ್ತರದಲ್ಲಿರುವ ಕೇದಾರ್ ಪರ್ವತದ ಮೇಲಿದೆ. ಹರಿದ್ವಾರದಿಂದ ಸುಮಾರು 150 ಕಿ.ಮೀ. ದೂರದಲ್ಲಿದೆ. ಈ ದೇವಾಲಯವು ವರ್ಷದಲ್ಲಿ ಒಂದು ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ತೆರೆಯುತ್ತದೆ. 

ಘೃಷ್ಣೇಶ್ವರ ಜ್ಯೋತಿರ್ಲಿಂಗ : ಘೃಷ್ಣೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಔರಂಗಾಬಾದ್ ಬಳಿಯ ದೌಲತಾಬಾದ್ ಇಂದ 20 ಕಿ.ಮೀ. ದೂರದಲ್ಲಿರುವ ವೆರುಲ್ ಎಂಬ ಗ್ರಾಮದಲ್ಲಿದೆ. ಈ ದೇವಾಲಯದ ಬಲಿ ಪ್ರಸಿದ್ಧ ಯಾತ್ರಾ ಸ್ಥಳವಾದ ಅಜಂತಾ ಮತ್ತು ಎಲ್ಲೋರಾ ಗುಹೆಗಳೂ ಇವೆ. ಈ ದೇವಾಲಯವು ಕುಸುಮೇಶ್ವರ, ಘುಶ್ಮೇಶ್ವರ, ಗ್ರುಷ್ಮೆಶ್ವರ ಮತ್ತು ಘೃಷ್ಣೇಶ್ವರ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link