ನಿಮ್ಮ ಕೈಯಲ್ಲಿ ಹಣ ನೀರಿನಿಂತೆ ಹರಿದು ಹೋಗಲು ಈ ದೋಷಗಳೇ ಮುಖ್ಯ ಕಾರಣ!

Wed, 01 Jun 2022-4:01 pm,

ಗರುಡ ಪುರಾಣದ ಪ್ರಕಾರ, ಕೊಳಕು ಬಟ್ಟೆಯನ್ನು ಧರಿಸುವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಲಕ್ಷ್ಮಿ ಮಾತೆ ಸ್ವಚ್ಛತೆಯನ್ನು ತುಂಬಾ ಪ್ರೀತಿಸುತ್ತಾಳೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುವ ಮನೆಯಲ್ಲೇ ಲಕ್ಷ್ಮೀ ದೇವಿ ವಾಸವಾಗಿರುತ್ತಾಳಂತೆ.

ಗರುಡ ಪುರಾಣದ ಪ್ರಕಾರ, ಹಣ ಅಥವಾ ಹಣದ ಬಗ್ಗೆ ಹೆಮ್ಮೆಪಡುವವರ ಬುದ್ಧಿಯು ಭ್ರಷ್ಟಗೊಳ್ಳುತ್ತದೆ. ಇದರಿಂದಾಗಿ ಜನರು ಹಣವನ್ನು ವ್ಯರ್ಥ ಮಾಡುತ್ತಾರೆ. ಬಳಿಕ ಅದರಿಂದ ಅವರು ಬಡತನ ಎದುರಿಸುತ್ತಾರೆ. ಅಂತಹ ಸ್ವಭಾವ ಮತ್ತು ಗುಣವುಳ್ಳವರ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುವುದಿಲ್ಲ.

ಒಬ್ಬ ವ್ಯಕ್ತಿಯು ಶ್ರದ್ಧೆಯಿಂದ ಹಿಂದುಳಿದರೆ ಮತ್ತು ಕೊಟ್ಟ ಕೆಲಸವನ್ನು ಸರಿಯಾಗಿ ಮಾಡದಿದ್ದರೆ, ಮಾತೆ ಲಕ್ಷ್ಮಿ ಅದಕ್ಕೂ ಕೋಪಗೊಳ್ಳುತ್ತಾಳೆ. ಅಂತಹ ಸ್ವಭಾವವನ್ನು ತಪ್ಪಿಸಲು ಗರುಡ ಪುರಾಣದಲ್ಲಿ ಸೂಚಿಸಲಾಗಿದೆ. 

ಗರುಡ ಪುರಾಣದ ಪ್ರಕಾರ, ಆರಾಮವಾಗಿ ಸಮಯ ಕಳೆಯುವ ಜನರ ಮೇಲೆ ದೇವತೆಗಳು ಕೋಪಗೊಳ್ಳುತ್ತಾರೆ. ಇದುವೇ ಅವರ ಜೀವನದಲ್ಲಿ ಬಡತನ ಬರಲು ಮುಖ್ಯ ಕಾರಣವಾಗುತ್ತದೆಯಂತೆ.   

ಗರುಡ ಪುರಾಣದ ಪ್ರಕಾರ, ಇತರರ ನ್ಯೂನತೆಗಳನ್ನು ಮಾತ್ರ ಹೊರಹಾಕುವ ಅಥವಾ ಇತರರನ್ನು ಕೆಟ್ಟವರು ಎಂದು ಬಿಂಬಿಸುವ ಜನರ ಮೇಲೆ ತಾಯಿ ಲಕ್ಷ್ಮಿ ಸಿಟ್ಟಾಗುತ್ತಾಳೆ. ಇದಲ್ಲದೇ ಅನಾವಶ್ಯಕವಾಗಿ ಇತರರನ್ನು ಬೈಯುವುದು ಸಹ ಬಡತನ ಬರಲು ಮುಖ್ಯ ಕಾರಣವಾಗುತ್ತದೆಯಂತೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link