ಈ ಖ್ಯಾತ ನಟಿ ಜೊತೆ ಹೆಚ್ಚಾಯ್ತಾ ಆಪ್ತತೆ? ಯುವರಾಜ್-ಶ್ರೀದೇವಿ ಡಿವೋರ್ಸ್’ಗೆ ಇದೇ ಕಾರಣವಾಯ್ತಾ?

Mon, 10 Jun 2024-4:12 pm,

ಸದ್ಯ ಸ್ಯಾಂಡಲ್ವುಡ್’ನಲ್ಲಿ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇದುವರೆಗೆ ಲಭಿಸಿರುವ ಮಾಹಿತಿ ಪ್ರಕಾರ, ಡಿವೋರ್ಸ್ ನೀಡಲು ಶ್ರೀದೇವಿ ಒಪ್ಪಿಗೆಯಿಲ್ಲ, ಆದರೆ ಯುವ ನೋಟೀಸ್ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವರ್ಷದ ಹಿಂದೆ ಶ್ರೀದೇವಿ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳಿದ್ದರು. ಇದೇ ತಿಂಗಳು ವಿದೇಶದಿಂದ ಶ್ರೀದೇವಿ ವಾಪಸ್ ಬರಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಇದು ಒಪ್ಪಿಗೆ ಮೇರೆಗೆ ಮ್ಯೂಚುವಲ್ ಡಿವೋರ್ಸ್ ಅಲ್ಲವೆಂಬ ಮಾಹಿತಿ ಸದ್ಯ ಲಭಿಸಿದೆ.  

ಇನ್ನೊಂದೆಡೆ ಯುವ ಮತ್ತು ಶ್ರೀದೇವಿ ಡಿವೋರ್ಸ್ ಪಡೆಯುತ್ತಿರುವುದು ದೊಡ್ಮೆನಯಲ್ಲಿ ಯಾರಿಗೂ ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳಮ್ಮ ಮಾತ್ರ ಒಪ್ಪಿಗೆ ನೀಡಿದ್ದು, ಅಶ್ವಿನಿ ಪುನೀತ್ ರಾಜ್ಕ ಕುಮಾರ್, ಶಿವರಾಜ್ ಕುಮಾರ್, ಗೀತಾ ಸೇರಿದಂತೆ ಯಾರಿಗೂ ಇಷ್ಟವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಇವೆಲ್ಲದರ ಮಧ್ಯೆ ಶಾಕಿಂಗ್ ವದಂತಿ ಹಬ್ಬುತ್ತಿದ್ದು, ಮೂಲಗಳ ಪ್ರಕಾರ, ಖ್ಯಾತ ನಟಿಯೊಬ್ಬಳ ಜೊತೆ ಯುವ ರಾಜ್​ಕುಮಾರ್​ ಆಪ್ತತೆ ಹೆಚ್ಚಿಸಿಕೊಂಡಿದ್ದೇ ಈ ವಿಚ್ಛೇದನಕ್ಕೆ ಕಾರಣ ಎನ್ನಲಾಗುತ್ತಿದೆ. ಆ ಕಾರಣದಿಂದಲೇ ಯುವ-ಶ್ರೀದೇವಿ ಸಂಸಾರದಲ್ಲಿ ಸಮಸ್ಯೆ ಶುರುವಾಗಿರುವ ಸಾಧ್ಯತೆ ಇದೆ. ಸದ್ಯ ಶ್ರೀದೇವಿ ವಿಚ್ಛೇದನದ ಕುರಿತಂತೆ ಪ್ರತಿಕ್ರಿಯೆ ನೀಡುವುದು ಬಾಕಿಯಿದೆ.

ಇನ್ನೊಂದೆಡೆ ರಾಜ್ ಕುಟುಂಬದಲ್ಲಿ ವಿಚ್ಛೇದನವೆಂಬ ಬಿರುಗಾಳಿ ಇದೇ ಮೊದಲ ಬಾರಿ ಎದ್ದಿದೆ. ಈ ಬಗ್ಗೆ ಕುಟುಂಬದ ಹಿರಿಯರಾದ ಶಿವರಾಜ್​ ಕುಮಾರ್​, ರಾಘವೇಂದ್ರ ರಾಜ್ ​ಕುಮಾರ್​, ಅಶ್ವಿನಿ ಪುನೀತ್​ ರಾಜ್ ​ಕುಮಾರ್, ಗೀತಾ ಶಿವರಾಜ್​ಕುಮಾರ್​​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link