ಜೈಲಿನಲ್ಲಿದ್ದರೂ ತರುಣ್ ಸುಧೀರ್ ಮದುವೆಗೆ ಬಂದು ನವ ಜೋಡಿ ಹರಸಿದ ದರ್ಶನ್ ? ವಾರದ ನಂತರ ವೈರಲ್ ಆಯಿತು ಫೋಟೋ

Fri, 16 Aug 2024-10:26 am,

ಆಗಸ್ಟ್ 11ರ ಭಾನುವಾರ ಸ್ಯಾಂಡಲ್ ವುಡ್ ಕಿರಿಯ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಾಲ್ ಮೊಂಥೆರೋ ವಿವಾಹ ಅದ್ದುರಿಯಾಗಿಯೇ ನಡೆಯಿತು.   

ಪೂರ್ಣಿಮಾ ಪ್ಯಾಲೇಸ್‌ನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಚಂದನವನದ ಬಹುತೇಕ ನಟ ನಟಿಯರು ಸಾಕ್ಷಿಯಾಗಿದ್ದರು. 

ತರುಣ್ ಸುಧೀರ್ ಮತ್ತು ನಟ ದರ್ಶನ್ ಬಹಳ ಆಪ್ತರು.ಮದುವೆಗೂ ಮುನ್ನ ತರುಣ್  ಪರಪ್ಪನ ಅಗ್ರಹಾರಕ್ಕೆ ಭೇಟಿಯಾಗಿದ್ದರು. ದರ್ಶನ್ ಜೈಲಿನಲ್ಲಿ ಇರುವಾಗ ತಾನು ಮದುವೆಯಾಗುವುದಿಲ್ಲ ಎಂದು ತರುಣ್ ಹೇಳಿದ್ದರು ಎನ್ನುವ ಮಾತು ಕೂಡಾ ಆಗ ಹರಿದಾಡಿತ್ತು. 

ಆದರೆ ಯಾವುದೇ ಕಾರಣಕ್ಕೂ ಮದುವೆಯ ದಿನ ಬದಲಿಸುವಂತಿಲ್ಲ.ಮದುವೆ  ಮುಂದೂಡುವಂತಿಲ್ಲ ಎಂದು ದರ್ಶನ್ ಖಡಾ ಖಂಡಿತವಾಗಿ ಹೇಳಿದ್ದರು ಎಂದು ಕೂಡಾ ಹೇಳಲಾಗುತ್ತದೆ.

ಮದುವೆ ಆಗಿ ಒಂದು ವಾರದ ಬಳಿಕ ತರುಣ್ ಸುಧೀರ್ ಮದುವೆಯಲ್ಲಿ ದರ್ಶನ್ ಭಾಗಿಯಾಗಿದ್ದರು ಎನ್ನುವ ಫೋಟೋ ವೈರಲ್ ಆಗುತ್ತಿದೆ. 

ಅಸಲಿಗೆ ಇದು ಎಡಿಟೆಡ್ ಫೋಟೋ.ಈ ಫೋಟೋವನ್ನು ಬಹಳ ಸುಂದರವಾಗಿಯೇ ಎಡಿಟ್ ಮಾಡಿದ್ದಾರೆ. ಬಹುಶಃ  ತರುಣ್ ಮದುವೆಯಲ್ಲಿ ದರ್ಶನ್ ಭಾಗಿಯಾಗಿಲ್ಲ ಎನ್ನುವ ಕೊರಗು  ನೀಗಿಸುವ ಯತ್ನವನ್ನು ಈ ಫೋಟೋ ಮೂಲಕ ಅಭಿಮಾನಿಗಳು ಮಾಡಿದ್ದಾರೋ  ಏನೋ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link