ಮದುವೆಗೆ ಕಾರಣರಾದವರೇ ಗೈರು..! ಜೈಲಿಗೆ ಹೋಗಿ ದರ್ಶನ್‌ ಆಶೀರ್ವಾದ ಪಡೆಯುತ್ತಾರಾ ತರುಣ್‌-ಸೋನಲ್‌..?

Sun, 11 Aug 2024-1:23 pm,

ಸ್ಯಾಂಡಲ್‌ವುಡ್‌ನ ಸ್ಟಾರ್‌ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಇಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  

ಬೆಂಗಳೂರಿನ ಪೂರ್ಣಿಮಾ ಪಾಲೇಸ್‌ನಲ್ಲಿಯೇ ಗುರು-ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು.   

ಸ್ಯಾಂಡಲ್‌ವುಡ್‌ ತಾರೆಯರು, ಕುಟುಂಬದವರು, ಸೇರಿದಂತೆ ರಾಜಕಾರಣಿಗಳು ಈ ಅದ್ಧೂರಿ ಮದುವೆಗೆ ಸಾಕ್ಷಿಯಾಗಿದ್ದರು.  

ವಿಪರ್ಯಾಸ ಅಂದ್ರೆ, ಈ ಮದುವೆಗೆ ಕಾರಣವಾಗಿದ್ದ ನಟ ದರ್ಶನ್‌ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದು, ಮುಂದೆ ನಿಂತು ಮದುವೆ ಮಾಡಬೇಕಾದವರೇ ಇಲ್ಲದಂತಾಗಿದೆ..  

ತರುಣ್‌ ಅವರು ನಟ ದರ್ಶನ್‌ ಆಪ್ತ ಸ್ನೇಹಿತ ಕೂಡ. ಅಲ್ಲದೆ, ದಾಸ ತರುಣ್‌ ಹಾಗೂ ಸೋನಲ್ ಮದುವೆಯಾಗಲಿ ಅಂತ ತುಂಬಾ ಆಸೆ ಪಟ್ಟಿದ್ದರು.  

ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದ ಮೇಲೆ ನಟ ದರ್ಶನ್‌ ಜೈಲುಸೇರಿದ್ದಾರೆ. ಮದುವೆಗೂ ಮುನ್ನ ತರುಣ್‌ ಜೈಲಿನಲ್ಲಿ ನಟ ದರ್ಶನ್‌ ಅವರನ್ನು ಭೇಟಿಯಾಗಿ ವಿಚಾರ ತಿಳಿಸಿದ್ದರು.  

ಇನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೇರಿದಂತೆ ಹಲವು ರಾಜಕಾರಣಿಗಳು ತರುಣ್‌ ವಿವಾಹ ಮಹೋತ್ಸವಕ್ಕೆ ಹಾಜರಾಗಿದ್ದರು. ಸ್ಯಾಂಡಲ್‌ವುಡ್‌ ತಾರೆಯರು ಸಹ ಉಪಸ್ಥಿತರಿದ್ದರು.  

ಆದರೆ ನಟ ದರ್ಶನ್‌‌ ತನ್ನ ಆಪ್ತನ ಮದುವೆಯಲ್ಲಿ ಕಾಣಲಿಲ್ಲ ಅನ್ನೋದೆ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ..  

ಮುಂದಿನ ದಿನಗಳಲ್ಲಿ ಈ ಜೋಡಿ ಜೈಲಿಗೆ ಭೇಟಿ ನೀಡಿ ನಟ ದರ್ಶನ್‌ ಆರ್ಶೀವಾದ ಪಡೆಯುತ್ತಾರಾ ಅಂತ ಕಾಯ್ದು ನೋಡಬೇಕಿದೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link