ಸಿನಿಮಾ ಗೆಲ್ಲಿಸಿದ ಕರುನಾಡ ಸೆಲೆಬ್ರಿಟಿಗಳಿಗೆ ಧನ್ಯವಾದ ಅರ್ಪಿಸಿದ ʼಕಾಟೇರʼ ಡಿಬಾಸ್‌..!

Sat, 30 Dec 2023-7:55 pm,

ಕರುನಾಡಿನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳ ನಡುವೆ ಕಾಟೇರ ಘರ್ಜಿಸಿದ್ದಾನೆ. ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.  

ನಟ ದರ್ಶನ್‌ ಅಭಿನಯದ ಕಾಟೇರ ನಿಗೆ ಕರುನಾಡ ಪ್ರೇಕ್ಷಕರು ಫಿದಾ ಆಗಿದ್ದು, ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ.   

ಕಾಟೇರನಿಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದ್ದು, ಈ ಮಟ್ಟಕ್ಕೆ ಸಿನಿಮಾ ಹಿಟ್ ಆಗೋಕೆ ಪ್ರಮುಖ ಕಾರಣ ಅಂದ್ರೆ ಚಾಲೆಂಜಿಗ್ ಸ್ಟಾರ್‌ ದರ್ಶನ ಅವರ ನಟನೆ ಅಂದ್ರೆ ತಪ್ಪಾಗಲ್ಲ  

ಕಾಟೇರ ಸಿನಿಮಾದಲ್ಲಿ ದರ್ಶನ್‌ ಒನ್‌ಮ್ಯಾನ್‌ ಶೋನಂತೆ ಮಿಂಚುತ್ತಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಒಂಟಿ ಸಲಗದಂತೆ ಅಬ್ಬರಿಸುತ್ತಿದ್ದಾರೆ.  

ನಮ್ಮ ಮಣ್ಣಿನ ರೈತರ ಕಥಾ ಹಂದರ ಹೊಂದಿರುವ ಸಿನಿಮಾ ನಿರ್ದೇಶನ ಮಾಡಿದ ತರುಣ್ ಸುಧೀರ್‌ ಅವರಿಗೆ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಆಕ್ಷನ್‌, ಸೆಂಟಿಮೆಂಟ್‌, ಲವ್‌ ದೃಶ್ಯಗಳು ಅದ್ಭುತವಾಗಿದ್ದು, ದರ್ಶನ್‌ ಅವರು ಕಥೆಗೆ ತಕ್ಕಂತೆ ಪರಿಪೂರ್ಣವಾಗಿ ನಟಿಸಿದ್ದಾರೆ.   

ಇದುವರೆಗೂ ದಚ್ಚು ಹಲವು ಸಿನಿಮಾಗಳಲ್ಲಿ ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರೆ, ಕಾಟೇರ ಸಿನಿಮಾದಲ್ಲಿ ದಚ್ಚು ದ್ವಿಪಾತ್ರ ವಿಭಿನ್ನ ಅನುಭವ ನೀಡುತ್ತದೆ.   

ಆರಾಧಾನ, ಶೃತಿ, ಜಗಪತಿಬಾಬು, ಅವಿನಾಶ್‌, ಕುಮಾರ್‌ ಗೋವಿಂದ,0 ಸೇರಿದಂತೆ ಸಿನಿಮಾದಲ್ಲಿ ಎಲ್ಲರೂ ಅದ್ಭುತವಾಗಿ ಅಭಿನಯಿಸಿದ್ದಾರೆ. 

ಸಧ್ಯ ಚಿತ್ರದ ಗೆಲುವಿಗೆ ಕಾರಣರಾದ ಕನ್ನಡ ಸಿನಿ ಅಭಿಮಾನಿಗಳಿಗೆ ದರ್ಶನ್‌ ಅವರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link