ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ.. ಬೇಲ್‌ ಸಿಗೋದು ಫಿಕ್ಸ್‌..!

Tue, 08 Oct 2024-2:59 pm,

Actor darshans bail: ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್‌ ಅಂಡ್‌ ಗ್ಯಾಂಗ್‌ ಜೈಲು ಸೇರಿದ್ದಾರೆ.  57 ನೇ ಸೆಷನ್ಸ್ ಕೋರ್ಟನ್‌ಲ್ಲಿ ಇಂದು ನಟ ದರ್ಶನ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.   

ಚಿತ್ರದುರ್ಗಾ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ದಾಸ ಸದ್ಯ ಸೆರೆವಾಸ ಅನುಭವಿಸುತ್ತಿದ್ದಾರೆ.   

ಇಂದು ದರ್ಶನ್‌ ಅವರ ಬೇಲ್‌ ಅರ್ಜಿ ವಿಚಾರಣೆ ನಡೆಯುತ್ತಿದ್ದು, ದಾಸನ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಹಾಜರ್‌ ಆಗಿದ್ದಾರೆ.   

57 ನೇ ಸೆಷನ್ಸ್ ಕೋರ್ಟ್‌ನಲ್ಲಿ ದರ್ಶನ್‌ ಅವರ ಬೇಲ್‌ ಅರ್ಜಿ ವಿಚಾರಣೆ ನಡೆಯುತ್ತಿದೆ. 2.30 ಕ್ಕೆ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ಶುರುವಾಗಿದೆ.   

ಸದ್ಯ ಮೊದಲಿಗೆ ಆರೋಪಿ ನಾಗರಾಜ್ ಹಾಗೂ ಲಕ್ಷ್ಮಣ್ ಅವರ ಜಾಮೀನು ವಿಚಾರಣೆ ಶುರುವಾಗಿದ್ದು, ದಾಸನ ಜಾಮೀನು ಅರ್ಜಿ ವಿಚಾರಣೆ ಕೂಡ ಇಂದೆ ನಡೆಯಲಿದೆ.   

ಇನ್ನೂ, ಒಂದು ಕಡೆ ದಾಸ ತೀವ್ರವಾದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ, ವೈದ್ಯರು ಎಮ್‌ಆರ್‌ಐ ಸ್ಕಾನಿಂಗ್‌ ಮಾಡಿಸಿ ಎಂದು ಹೇಳಿದರು ಸಹ ದಾಸ ಇದನ್ನು ಒಪ್ಪುತ್ತಿಲ್ಲ.   

ನಿನ್ನೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ 2 ಬ್ಯಾಗ್‌ನಲ್ಲಿ ದರ್ಶನ್‌ಗೆ ಅವಶ್ಯಕವಾದ ತಿನಿಸುಗಳನ್ನು ತಂದಿದ್ದರು.   

ಇನ್ನೂ, ಇಂದು ಮಧ್ಯಾಹ್ನ 2:30 ಕ್ಕೆ ಜಾಮೀನು ಅರ್ಜಿ ವಿಚಾರಣೆ ಶುರುವಾಗಿದೆ, ದಾಸನ ಪರ ಕೋರ್ಟ್‌ನಲ್ಲಿ ಹಾಜರ್‌ ಆಗಿತುವ ಹಿರಿಯ ವಕೀಲರು ಸದ್ಯ ಆರೋಪಿಗಳ ಪರ ವಾದ ನಡೆಸುತ್ತಿದ್ದು, ದಾಸನಿಗೆ ಇಂದಾದರೂ ಜಾಮೀನು ಸಿಗುತ್ತಾ ಅಥವಾ ಇಲ್ವಾ ಎನ್ನುವುದನ್ನು ಕಾದು ನೋಡ್ಬೇಕಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link