ಅಂದು `ನೀನ್ಯಾವ ಸೀಮೆ ನಟ` ಅಂದ್ರು... 1000 ರೂ.ಗೆ ನಿರ್ಮಾಪಕನಿಂದ ಹೊರದಬ್ಬಿಸಿಕೊಂಡ ಆತ ಇಂದು 100 ಕೋಟಿ ಸಂಭಾವನೆ ಪಡೆಯುವ ಖ್ಯಾತ ನಟ!

Sat, 03 Aug 2024-4:31 pm,

ಭಾರತೀಯ ಸಿನಿರಂಗದಲ್ಲಿ ಸ್ಟಾರ್‌ ನಟರಿಗೇನು ಕೊರತೆಯಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ದಕ್ಷಿಣ ಭಾರತದಲ್ಲಿ ತನ್ನದೇ ಪ್ರತಿಭೆಯಿಂದ ಸಿನಿರಂಗದಲ್ಲಿ ಸ್ಥಾನ ಗಟ್ಟಿಯಾಗಿಸಿಕೊಂಡ ಅನೇಕ ನಟರಿದ್ದಾರೆ. ಅದರಲ್ಲಿ ಒಬ್ಬರು ಸೂಪರ್‌ ಸ್ಟಾರ್‌ ರಜನಿಕಾಂತ್.‌ ಬಸ್‌ ಕಂಡಕ್ಟರ್‌ ಆಗಿದ್ದ ರಜನಿ, ಇಂದು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ.

ಅಂದಹಾಗೆ ರಜನಿ ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಅವರ ಬದುಕೇನು ಹೂವಿನ ಹಾಸಿಗೆಯಾಗಿರಲಿಲ್ಲ. ಇಂದು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ರಜನಿ, ನಡೆದು ಬಂದದ್ದು ಮುಳ್ಳಿನ ದಾರಿಯಲ್ಲಿ.

 

ರಜನಿಕಾಂತ್‌ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರು. ಅದರಲ್ಲಿ ಒಂದು ಘಟನೆಯನ್ನು ಈ ಹಿಂದೆ ಸ್ವತಃ ಅವರೇ ನೆನಪಿಸಿಕೊಂಡು ಹೇಳಿದ್ದರು.

 

1970ರ ಸಮಯ. ಸಿನಿಮಾವೊಂದರಲ್ಲಿ ನಟಿಸಲು ರಜನಿಕಾಂತ್ ಅವರಿಗೆ ಅವಕಾಶ ಸಿಕ್ಕಿತ್ತು. ಸಂಭಾವನೆ ಆಗಿನ ಕಾಲದಲ್ಲಿಯೇ 6 ಸಾವಿರ. ಅದರಲ್ಲಿ ಒಂದಷ್ಟು ಅಡ್ವಾನ್ಸ್‌ ಕೊಡುವಂತೆ ರಜನಿ ಮನವಿ ಮಾಡಿದ್ದರು. ಅದಕ್ಕೆ ನಿರ್ಮಾಪಕರು ಸಹ ಒಪ್ಪಿಗೆ ನೀಡಿದ್ದರು.

 

ಸಿನಿಮಾ ಶೂಟಿಂಗ್‌ ದಿನ ಬಂದೇ ಬಿಡ್ತು. ಆದರೆ ರಜನಿಗೆ ಅಡ್ವಾನ್ಸ್‌ ಹಣ ಸಿಗಲೇ ಇಲ್ಲ. ಈ ಕಾರಣದಿಂದ ನಿರ್ಮಾಪಕರಿಗೆ ಫೋನ್‌ ಮಾಡಿ, ಅಡ್ವಾನ್ಸ್‌ ಬಗ್ಗೆ ಮಾತನಾಡಿದ್ದರು. ಅದಕ್ಕೆ ಶೀಘ್ರದಲ್ಲಿ ಕೊಡುವೆ ಎಂದು ನಿರ್ಮಾಪಕರು ಹೇಳಿದ್ದರು. ಆದರೆ ನನಗೆ ಮುಂಗಡ ಹಣ ಸಿಗುವವರೆಗೂ ನಾನು ಮೇಕಪ್‌ ಮಾಡಿಕೊಳ್ಳಲ್ಲ ಎಂದು ರಜನಿ ಪಟ್ಟು ಹಿಡಿದಿದ್ದರು.

 

ರಜನಿಕಾಂತ್‌ ವರ್ತನೆಗೆ ಕೋಪಗೊಂಡ ನಿರ್ಮಾಪಕ, ನೇರವಾಗಿ ಅಂಬಾಸಿಡರ್‌ ಕಾರಿನಲ್ಲಿ, ಸೆಟ್‌ʼಗೆ ಬಂದು ಎಲ್ಲರ ಮುಂದೆ ಅವಮಾನ ಮಾಡುತ್ತಾರೆ. ನೀನೇನು ದೊಡ್ಡ ಸ್ಟಾರ್‌ ನಟನಾ? ನೀನ್ಯಾವ ಸೀಮೆ ನಟ? ಅಡ್ವಾನ್ಸ್‌ ಕೊಟ್ಟಿಲ್ಲಂದ್ರೆ ಮೇಕಪ್‌ ಮಾಡಿಸಿಕೊಳ್ಳುವುದಿಲ್ಲವೇ? ಹಾಗಾದರೆ ಈ ಸಿನಿಮಾದಲ್ಲಿ ನಿನಗೆ ಪಾತ್ರವಿಲ್ಲ. ನಡೀ ಇಲ್ಲಿಂದ ಎಂದು ಹೊರಕಳಿಸಿದ್ದರು.

ಅಲ್ಲಿಂದ ಕಾಲ್ನಡಿಗೆಯಲ್ಲಿಯೇ ಹೊರಬಂದ ರಜನಿಕಾಂತ್‌ ಇಂದು ಒಂದು ಸಿನಿಮಾಗೆ 100 ಕೋಟಿ ಸಂಭಾವನೆ ಪಡೆಯುವ ಹಂತಕ್ಕೆ ತಲುಪಿದ್ದಾರೆ. ಇನ್ನು ಈ ಘಟನೆಯನ್ನು ದರ್ಬಾರ್‌ ಸಿನಿಮಾದ ಆಡಿಯೋ ಲಾಂಚ್‌ ವೇಳೆ ನೆನಪಿಸಿಕೊಂಡಿದ್ದರು ರಜನಿಕಾಂತ್‌.

ZEENEWS TRENDING STORIES

By continuing to use the site, you agree to the use of cookies. You can find out more by Tapping this link