ಆ ಸ್ಟಾರ್‌ ಹೀರೋ ನನಗೆ ತಡರಾತ್ರಿ ಕರೆ ಮಾಡಿ... ಚಿತ್ರಹಿಂಸೆ ನೀಡಿದ್ದ..! ಖ್ಯಾತ ನಟನ ಮುಖವಾಡ ಕಳಚಿದ ಕೃತಿ ಶೆಟ್ಟಿ

Fri, 25 Oct 2024-12:59 pm,

ಚಿತ್ರರಂಗದಲ್ಲಿ ಕೃತಿ ಶೆಟ್ಟಿ ಜಾಹೀರಾತುಗಳ ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ನಂತರ ಸುಕುಮಾರ್ ಅವರ ಶಿಷ್ಯ ಬುಚ್ಚಿಬಾಬು ಸಾನಾ ನಿರ್ದೇಶನದ ಉಪ್ಪೇನಾ ಚಿತ್ರದ ಮೂಲಕ ತೆಲುಗು ಪರದೆಯ ಮೇಲೆ ಪಾದಾರ್ಪಣೆ ಮಾಡಿದರು.. ಈ ಸಿನಿಮಾ ಉತ್ತಮ ಯಶಸ್ಸು ಕಂಡಿತು.     

ಮೆಗಾ ಸೋದರಳಿಯ ವೈಷ್ಣವ್ ತೇಜ್ ಈ ಸಿನಿಮಾದ ನಾಯಕ ಎನ್ನುವ ವಿಚಾರ ಎಲ್ಲಿರಿಗೂ ಗೊತ್ತಿದೆ. ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಮನಗೆದ್ದ ಕೃತಿ ಶೆಟ್ಟಿ ಅತಿ ಕಡಿಮೆ ಸಮಯದಲ್ಲಿ ನಿರೀಕ್ಷೆಗೂ ಮೀರಿದ ಇಮೇಜ್ ಗಳಿಸಿದರು ಎನ್ನಬಹುದು.     

ಮೇಲಾಗಿ ಈ ಸಿನಿಮಾದ ಮೂಲಕ ರೂ.100 ಕೋಟಿ ಕಲೆಕ್ಷನ್ ಮಾಡಿ ಚೊಚ್ಚಲ ನಾಯಕಿಯಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಗೆದ್ದರು. ಇದರೊಂದಿಗೆ ಇನ್ನೂ ಹಲವು ಪ್ರಶಸ್ತಿಗಳು ಬಂದಿವೆ. ಈ ಒಂದು ಸಿನಿಮಾ ಆಕೆಗೆ ದೊಡ್ಡ ಇಮೇಜ್ ತಂದುಕೊಟ್ಟಿತ್ತು.   

ಇದಲ್ಲದೇ ಕೃತಿ ಶೆಟ್ಟಿ ಶ್ಯಾಮ್ ಸಿಂಹರಾಯ್, ಬಂಗಾರರಾಜು ಚಿತ್ರಗಳಲ್ಲೂ ನಟಿಸಿ ಹ್ಯಾಟ್ರಿಕ್ ಪಡೆದಿದ್ದಾರೆ. ಆದರೆ ಆಮೇಲೆ ಏನಾಯಿತೋ ಗೊತ್ತಿಲ್ಲ, ಆಯ್ಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದ ಕೃತಿ ಶೆಟ್ಟಿ ಅವರ ಸಾಲು ಸಾಲು ಸಿನಿಮಾಗಳು ಸೋಲು ಕಂಡವು. ಇದರೊಂದಿಗೆ ಟಾಲಿವುಡ್ ನಲ್ಲಿ ಫೇಡ್ ಔಟ್ ಹೀರೋಯಿನ್ ಎಂದೇ ಗುರುತಿಸಿಕೊಂಡರು.   

ಅಂದಹಾಗೆ ಈಗ ಕೃತಿಗೆ ಕಾಲಿವುಡ್‌ನಲ್ಲಿ ಅವಕಾಶ ಸಿಕ್ಕಿದೆ ಎಂಬ ಸುದ್ದಿ.. ಮತ್ತೊಂದೆಡೆ ಮತ್ತೊಬ್ಬ ಟಾಲಿವುಡ್ ಯಂಗ್ ಹೀರೋ ಜೊತೆ ನಟಿಸಲು ಒಪ್ಪಿಗೆ ನೀಡಿರುವುದಾಗಿ ಮಾಹಿತಿ ಇದೆ. ಈ ನಡುವೆ ಟಾಲಿವುಡ್ ಚಿತ್ರರಂಗದಲ್ಲಿ ಕಾಸ್ಟಿಂಗ್ ಅಬ್ಬರ ನಡೆಯುತ್ತಿರುವುದು ಗೊತ್ತೇ ಇದೆ.    

ಇದೀಗ ಕಾಸ್ಟಿಂಗ್‌ ಕೌಚ್‌ಗೆ ಕೃತಿ ಸಹ ಬಲಿಯಾಗಿದ್ದಾರೆ.. ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ನಟಿ, ಟಾಲಿವುಡ್ ಸ್ಟಾರ್ ಹೀರೋ ಒಬ್ಬರು ತಡರಾತ್ರಿ ಕೃತಿ ಶೆಟ್ಟಿಗೆ ಕರೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.. ಅಲ್ಲದೆ, ಫೋನ್ ಎತ್ತದಿದ್ದರೆ ಪದೇ ಪದೇ ಮಾಡುತ್ತೇನೆ ಎಂದು ಹಿಂಸೆ ನೀಡಿದ್ದಾಗಿ ಕೃತಿ ತಿಳಿಸಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link