`ಅವನೆಂದರೆ ನನಗಿಷ್ಟ`: ಡಿವೋರ್ಸ್ ಬೆನ್ನಲ್ಲೇ ಅಣ್ಣನ ಗೆಳೆಯನ ಮೇಲೆಯೇ ಖ್ಯಾತ ನಟಿಗೆ ಪ್ರೀತಿ! ಸೆನ್ಸೇಷನಲ್‌ ಹೇಳಿಕೆ ವೈರಲ್

Sat, 03 Aug 2024-7:19 pm,

ಹಿರಿತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದ್ದ ಈ ನಟಿ ʼಮುದ್ದಪ್ಪು ಆವಕಾಯʼ ಎಂಬ ವೆಬ್ ಸಿರೀಸ್ ಮಾಡಿ ಒಳ್ಳೆಯ ಕ್ರೇಜ್ ಗಳಿಸಿದ್ದರು.

 

2016ರಲ್ಲಿ ಜಿವಿ ರಾಮರಾಜು ನಿರ್ದೇಶನದ ‘ಒಕ ಮನಸು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು ಈ ನಟಿ. ನಾಗ ಶೌರ್ಯ ನಾಯಕನಾಗಿ ನಟಿಸಿದ್ದ ಈ ಚಿತ್ರ ಪ್ಲಾಪ್‌ ಆಗಿತ್ತು.

 

ಆ ನಂತರ ಎರಡು ವರ್ಷಗಳ ಕಾಲ ಬಿಡುವು ಮಾಡಿಕೊಂಡು ತೆಲುಗಿನ ‘ಹ್ಯಾಪಿ ವೆಡ್ಡಿಂಗ್’ ಮತ್ತು ತಮಿಳಿನಲ್ಲಿ ‘ಒರು ನಲ್ಲ ನಾಲ್ ಪಾತು ಸೊಲ್ರೆನ್’ ಚಿತ್ರಗಳನ್ನು ಮಾಡಿದರು. ಇವೆರಡೂ ಅಟ್ಟರ್ ಫ್ಲಾಪ್ ಆಗಿದ್ದವು.

 

ಆ ಬಳಿಕ ನಿರ್ಮಾಪಕರಾಗಿ ಮಿಂಚಿದರು. ಸದ್ಯ ನಿಹಾರಿಕಾ ನಿರ್ಮಾಣದ ʼಕಮಿಟಿ ಕುರ್ರಾಲುʼ  ಬಿಡುಗಡೆಗೆ ಸಿದ್ಧವಾಗಿದೆ.

 

ಈ ಸಿನಿಮಾದ ಪ್ರಚಾರದ ಭಾಗವಾಗಿ ಸಂದರ್ಶನಕ್ಕೆ ಆಗಮಿಸಿದ್ದ ನಿಹಾರಿಕಾಗೆ ಆ್ಯಂಕರ್ ಪ್ರಶ್ನೆಯೊಂದನ್ನು ಕೇಳಿದ್ದರು.  "ಮಹೇಶ್ ಬಾಬು, ಎನ್ ಟಿ ಆರ್ ಹಾಗೂ ಪ್ರಭಾಸ್ ಇವರಲ್ಲಿ ಯಾರನ್ನು ಇಷ್ಟಪಡುತ್ತೀರಿ?" ಎಂದು.  ಅದಕ್ಕೆ ಕೊಂಚವೂ ಯೋಚಿಸದೆ ʼಪ್ರಭಾಸ್ʼ ಎಂದು ಹೇಳಿದರು. "ನಾನು ಪ್ರಭಾಸ್‌ʼನನ್ನು ತುಂಬಾ ಇಷ್ಟಪಡುತ್ತೇನೆ. ಅವರ ಹಾಸ್ಯವನ್ನು ಇಷ್ಟಪಡುತ್ತೇನೆ" ಎಂದು ಹೇಳಿದ್ದರು.

 

ರಾಮ್ ಚರಣ್ ಅವರ ಆತ್ಮೀಯ ಸ್ನೇಹಿತರಲ್ಲಿ ಪ್ರಭಾಸ್ ಕೂಡ ಒಬ್ಬರು. ಅದಲ್ಲದೇ ವರುಣ್ ತೇಜ್ ಕೂಡ ಪ್ರಭಾಸ್ ಅವರಿಗೆ ತುಂಬಾ ಇಷ್ಟ ಎಂದು ಕೆಲವು ಸಂದರ್ಭಗಳಲ್ಲಿ ಹೇಳಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link