50 ವರ್ಷಗಳ ಬಳಿಕ 3 ರಾಶಿಗಳ ಗೋಚರ ಜಾತಕದಲ್ಲಿ ಡಬಲ್ ಅಖಂಡ ಸಾಮ್ರಾಜ್ಯ ಯೋಗ`, ವರಮಹಾಲಕ್ಷ್ಮಿಯ ಕೃಪೆಯಿಂದ ಸಿಗಲಿದೆ ಅಪಾರ ಸಿರಿಸಂಪತ್ತು!

Fri, 25 Aug 2023-4:13 pm,

ವೈದಿಕ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತನ್ನ ರಾಶಿಗಳನ್ನು ಪರಿವರ್ತಿಸುವ ಮೂಲಕ ಶುಭ ಹಾಗೂ ರಾಜಯೋಗಗಳನ್ನು ನಿರ್ಮಿಸುತ್ತವೆ. ಇದರ ಪ್ರಭಾವ ಮಾನವ ಜೀವನ ಹಾಗೂ ಭೂಮಿಯ ಮೇಲೆ ಕಂಡುಬರುತ್ತದೆ. ಇತ್ತೀಚೆಗಷ್ಟೇ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯದೇವ ತನ್ನ ಸ್ವರಾಶಿಯಾಗಿರುವ ಸಿಂಹರಾಶಿಯಲ್ಲಿ ಪ್ರವೇಶಿಸಿದ್ದಾನೆ. ಇದಲ್ಲದೆ ಆತ ನವಾಂಶ ಜಾತಕದ ಉಚ್ಚಾವಸ್ಥೆಯಲ್ಲಿ ಬಂದಿದ್ದಾನೆ. ಇದರಿಂದ ಡಬಲ್ ಅಖಂಡ ಸಾಮ್ರಾಜ್ಯ ರಾಜಯೋಗ ರೂಪುಗೊಂಡಿದೆ. ಈ ರಾಜಯೋಗದ ಪ್ರಭಾವದಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯದ ಯೋಗ ರೂಪುಗೊಂಡಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,   

ಮೇಷ ರಾಶಿ: ಮೇಷ ರಾಶಿಯ ಜಾತಕದವರ ಪಾಲಿಗೆ ಅಖಂಡ ಸಾಮ್ರಾಜ್ಯ ಯೋಗ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಎಕೆಂದರ ನಿಮ್ಮ ಲಗ್ನ ಭಾವದ ಅಧಿಪತಿ ಮಂಗಳ, ದ್ವಿತೀಯ ಭಾವದ ಅಧಿಪತಿ ಶುಕ್ರ ಹಾಗೂ ನವಮ ಭಾವದ ಅಧಿಪತಿ ಯಾರಾದರೊಬ್ಬರು ಕೇಂದ್ರ ಸ್ಥಾನದಲ್ಲಿದ್ದಾರೆ. ಇದರರ್ಥ ಗುರುಗ್ರಹ ನಿಮ್ಮ ಗೋಚರ ಜಾತಕದ ಕೇಂದ್ರ ಸ್ಥಾನದಲಿದ್ದಾನೆ ಎಂದರ್ಥ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅಪಾರ ಘನತೆ-ಗೌರವ-ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಸಿಲುಕಿ ಹಾಕಿಕೊಂಡ ನಿಮ್ಮ ಹಣ ನಿಮ್ಮತ್ತ ಮ್ರರಳಲಿದೆ. ಇದರ ಜೊತೆಗೆ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮದಲ್ಲಿ ಅಪಾರ ಹೆಚ್ಚಳವಾಗುವ ಸಾಧ್ಯತೆ ಇದೆ.   

ಕರ್ಕ ರಾಶಿ: ಡಬಲ್ ಅಖಂಡ ಸಾಮ್ರಾಜ್ಯ ಯೋಗ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ದ್ವಿತೀಯ ಭಾವದ ಅಧಿಪತಿ ಕರ್ಕ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇನ್ನೊಂದೆಡೆ ನಿಮ್ಮ ಅದೃಷ್ಟ ಭಾವದ ಅಧಿಪತಿ ದಶಮ ಭಾವಕ್ಕೆ ಸಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಹಳೆ ಹೂಡಿಕೆಗಳಿಂದ ಸಾಕಷ್ಟು ಧನಲಾಭ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳಿಗೆ ಈ ಅವಧಿ ಸಾಕಷ್ಟು ಅದ್ಭುತವಾಗಿರಲಿದೆ. ಉತ್ತಮ ಆರ್ಡರ್ ಲಾಭ ನಿಮಗೆ ಸಿಗಲಿದೆ. ಈ ಅವಧಿಯಲ್ಲಿ ನೀವು ವಾಹನ-ಆಸ್ತಿಪಾಸ್ತಿ ಖರೀದಿಸುವಲ್ಲಿ ಯಶಸ್ವಿಯಾಗುವಿರಿ. ಯಾತ್ರೆಯ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.   

ತುಲಾ ರಾಶಿ: ಡಬಲ್ ಅಖಂಡ ಸಾಮ್ರಾಜ್ಯ ಯೋಗ ರೂಪುಗೊಳ್ಳುವುದು ತುಲಾ ರಾಶಿಯ ಜಾತಕದವರಿಗೆ ಅತ್ಯಂತ ಲಾಭದಾಯಕ ಸಾಬೀತಾಗುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ ನಿಮ್ಮ ಗೋಚರ ಜಾತಕದ ದ್ವಿತೀಯ ಭಾವದ ಅಧಿಪತಿ ಮಂಗಳ ಲಾಭ ಸ್ಥಾನದಲ್ಲಿದ್ದಾನೆ. ಭಾಗ್ಯದ ಅಧಿಪತಿ ಬುಧ ಕೂಡ ಲಾಭ ಸ್ಥಾನದಲ್ಲಿದ್ದಾನೆ. ಜೊತೆಗೆ ಚಂದ್ರ ಲಗ್ನ ಭಾವದಿಂದ ಕೇಂದ್ರ ಸ್ಥಾನಕ್ಕೆ ಬಂದಿದ್ದಾನೆ. ಲಗ್ನ ಭಾವದಿಂದ ಗುರು ಕೂಡ ಕೇಂದ್ರದಲ್ಲಿ ಬಂದಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಅಪಾರ ಹೆಚ್ಚಾಗಲಿದೆ. ಜೊತೆಗೆ ಕೆಲವರಿಗೆ ಸಂತಾನ ಭಾಗ್ಯ ಪ್ರಾಪ್ತಿಯ ಸಂದೇಶ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಘನತೆ-ಗೌರವ-ಪ್ರತಿಷ್ಠೆಯಲ್ಲಿ ಅಪಾರ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ನಿಮ್ಮ ಆದಾಯ ಕೂಡ ಹೆಚ್ಚಾಗಲಿದೆ, ನಿರುದ್ಯೋಗಿಗಳಿಗೆ ನೌಕರಿ ಸಿಗುವ ಸಾಧ್ಯತೆ ಇದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link