Ambareesh Birth Anniversary: ರೆಬೆಲ್ ಸ್ಟಾರ್ ಅಂಬರೀಷ್‌ ಬಗ್ಗೆ ನೀವರಿಯದ ಸಂಗತಿ ಇಲ್ಲಿವೆ ನೋಡಿ..

Sun, 29 May 2022-11:36 am,

ಅಂಬರೀಷ್ ಅವರ ಮಾತು ಸ್ವಲ್ಪ ಒರಟಾಗಿದ್ದರು, ಅವರ ಮನಸ್ಸು ಮಾತ್ರ ಮಗುವಿನಂತಿತ್ತು. ಗೆಳೆತನದ ಹಸ್ತಚಾಚುವ ಸ್ವಭಾವ ಅವರದ್ದಾಗಿತ್ತು. ಇದು ಅನೇಕಬಾರಿ ಸಾಬೀತಾಗಿದೆ. ಈ ಗುಣ ಅನೇಕರಿಗೆ ಇಷ್ಟ ಆಗಿತ್ತು. 

ಚಿತ್ರರಂಗದ ದೊಡ್ಡಣ್ಣನಂತೆ ಇದ್ದ ಅಂಬಿ ನಟರು,  ನಿರ್ಮಾಪಕರು, ಚಿತ್ರರಂಗದವರ ಜೊತೆ ಸದಾ ನಗುತ್ತಾ ಇರುತ್ತಿದ್ದರು. ಸಮಸ್ಯೆಗಳು ಬಂದಾಗ, ಭಿನ್ನಾಭಿಪ್ರಾಯ ಹುಟ್ಟಿಕೊಂಡಾಗ ಸಮಸ್ಯೆ ಬಗೆಹರಿಸುತ್ತಿದ್ದರು. 

ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಿ ಬಳಿಕ ಹೀರೋ ಆದವರು ನಟ ಅಂಬರೀಷ್. ನಾಗರಹಾವು ಚಿತ್ರದಲ್ಲಿ ಜಲೀಲನ ಪಾತ್ರ ಮಾಡಿದ್ದರು. ಬಳಿಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡರು.

ಚಿತ್ರರಂಗದ ಹಿನ್ನೆಲೆ ಇಲ್ಲದಿದ್ದರೂ, ಸಾಧನೆ ಮಾಡಿದ ಅಂಬರೀಷ್‌, ವಿಲನ್, ಹೀರೋ, ಪೊಲೀಸ್ ಸೇರಿದಂತೆ ಅನೇಕ ಪಾತ್ರಗಳಲ್ಲಿ ಮಿಂಚಿದವರು. 

ನಾನಾ ರೀತಿಯ ಪಾತ್ರಗಳ ಮೂಲಕ ಜನಮನಗೆದ್ದು, ರಾಜಕೀಯಕ್ಕೂ ಕಾಲಿಟ್ಟು ಯಶಸ್ಸು ಕಂಡರು. ಇಂದು ಮಂಡ್ಯದ ಗಂಡು ಅಂಬರೀಷ್‌ ನಮ್ಮ ಜೊತೆ ಇಲ್ಲದಿದ್ದರೂ, ಅವರ ನೆನಪು ಎಂದೆಂದಿಗೂ ಚಿರಸ್ಮರಣೀಯ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link