`ಎಲ್ಲವೂ ಮುಗಿದು ಹೋಯ್ತು` ಅಭಿಷೇಕ್-ಐಶ್ವರ್ಯಾ ವಿಚ್ಛೇದನದ ವದಂತಿಗಳ ನಡುವೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಅಮಿತಾಬ್ ಬಚ್ಚನ್ ಪೋಸ್ಟ್

Tue, 10 Sep 2024-11:51 am,

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವಿನ ವಿಚ್ಛೇದನದ ವದಂತಿಗಳು ಬಹಳ ದಿನಗಳಿಂದ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಅಮಿತಾಭ್ ಬಚ್ಚನ್ ಮಾಡಿರುವ ಗೂಢಾರ್ಥದ ಪೋಸ್ಟ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ದಂಪತಿಗಳು ಏಪ್ರಿಲ್ 2007 ರಲ್ಲಿ ವಿವಾಹವಾದರು ಮತ್ತು ಆರಾಧ್ಯ ಬಚ್ಚನ್ ಎಂಬ ಮಗಳನ್ನು ಹೊಂದಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ವದಂತಿಗಳಿಂದಾಗಿ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ.

ಅಭಿಷೇಕ್ ಆಗಲಿ, ಐಶ್ವರ್ಯಾ ಆಗಲಿ ತಮ್ಮ ದಾಂಪತ್ಯದಲ್ಲಿ ಹುಳಿ ಹಿಂಡಿರುವ ಬಗ್ಗೆ ಬಹಿರಂಗವಾಗಿ ಮಾತನಾಡದಿದ್ದರೂ ಅಂಬಾನಿ ಮದುವೆಗೆ ಪ್ರತ್ಯೇಕವಾಗಿ ಆಗಮಿಸಿದ ಬಳಿಕ ಈ ವದಂತಿಗಳು ಮತ್ತಷ್ಟು ಜೋರಾಗಿದೆ. 

ಆದರೆ, ಇತ್ತೀಚೆಗೆ ಐಶ್ವರ್ಯಾ ಮಗಳು ಆರಾಧ್ಯ ಜೊತೆ ಜಲ್ಸಾ ಹೊರಗೆ ಕಾಣಿಸಿಕೊಂಡಿದ್ದರು. ಇದೆಲ್ಲದರ ನಡುವೆ ಅಮಿತಾಬ್ ಬಚ್ಚನ್ ಈಗ ಇಂಥದ್ದೊಂದು ಪೋಸ್ಟ್ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

"ನಾನು ನನ್ನ ಕಿಟಕಿಯ ಕೆಳಗಿನಿಂದ ಹರ್ಷೋದ್ಗಾರವನ್ನು ಕೇಳುತ್ತೇನೆ ಮತ್ತು ಭರವಸೆಯಿಂದ ನನ್ನನ್ನು ಸಮಾಧಾನಪಡಿಸುತ್ತೇನೆ ... ಆದರೆ ಜೀವನ ಮತ್ತು ಗಮನವು ಅಲ್ಪಕಾಲಿಕವಾಗಿದೆ ... ಜೀವನವು ಒಣಗುತ್ತದೆ ಮತ್ತು ಕೊನೆಗೊಳ್ಳುತ್ತದೆ, ಗಮನವು ಒಣಗುತ್ತದೆ ಮತ್ತು ಅದು ಅಂತಿಮವಾಗಿ ಕೊನೆಗೊಳ್ಳುತ್ತದೆ ... ಆದರೆ ಒಂದು ಇದೆ. ಹೋಲಿಕೆ - ಇದು ಕೊನೆಗೊಳ್ಳುತ್ತದೆ!" ಎಂದು ಅಮಿತಾಭ್‌ ಬಚ್ಚನ್‌ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಅಮಿತಾಬ್‌ ಅವರ ಈ ನಿಗೂಢ ಪೋಸ್ಟ್‌ ಸಾಮಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಬಿಗ್ ಬಿ ಅವರ ರಹಸ್ಯ ಪೋಸ್ಟ್ ಮೂಲಕ ಅಮಿತಾಭ್‌ ಏನನ್ನು ಹೇಳಲು ಹೊರಟಿದ್ದಾರೆ ಎಂದು ಅಭಿಮಾನಿಗಳು ಕನ್ಫ್ಯೂಸ್‌ ಆಗಿದ್ದಾರೆ.

ಈ ಸಂದರ್ಭದಲ್ಲಿ, ನಡೆಯುತ್ತಿರುವ ಗಣೇಶ ಚತುರ್ಥಿಯ ಹಬ್ಬದ ಬಗ್ಗೆ ಮಾತನಾಡಿದ ಅಮಿತಾಬ್ ಬಚ್ಚನ್, ಸರ್ವಶಕ್ತನು ಎಲ್ಲರಿಗೂ ತನ್ನ ಆಶೀರ್ವಾದವನ್ನು ನೀಡಲಿ ಮತ್ತು ನಮಗೆಲ್ಲರಿಗೂ ಶಾಂತಿ ಮತ್ತು ಸಾಧನೆಯ ಹಾದಿಯಲ್ಲಿ ಮಾರ್ಗದರ್ಶನ ನೀಡಲಿ ಎಂದು ಪ್ರಾರ್ಥನೆ ಎಂದು ಬರೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link