Amruthadhaare serial: ಅಮೃತಧಾರೆ ಸೀರಿಯಲ್ ಪಾರ್ಥ್ ನಿಜಕ್ಕೂ ಯಾರು ಗೊತ್ತಾ? ನೆನಪಿದ್ದಾರ ಅರಸಿ ಸೀರಿಯಲ್ ಸಿದ್ಧಾಂತ್?!

Sun, 28 Apr 2024-9:14 pm,

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್‌ ತನ್ನದೇ ಆದ ಪ್ರೇಕ್ಷಕರನ್ನು ಹೊಂದಿದೆ.. ಹಿರಿಯ ಕಲಾವಿದರನ್ನು ಒಳಗೊಂಡ ಈ ಧಾರವಾಹಿ ಹೆಚ್ಚು ಹೆಚ್ಚು ಟ್ವಿಸ್ಟ್‌ಗಳೊಂದಿಗೆ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ..   

ಈ ಸಿರೀಯಲ್‌ನಲ್ಲಿ ಸ್ಯಾಂಡಲ್‌ವುಡ್ನ ನಟ ರಾಜೇಶ್‌ ನಟರಂಗ.. ಹಾಗೂ ಫೇಮಸ್‌ ನಟಿ ಛಾಯಾ ಸಿಂಗ್‌ ನಟಿಸಿದಾರೆ.. ಇಬ್ಬರ ಅಭಿನಯಕ್ಕೂ ಪ್ರೇಕ್ಷಕರು ಫಿದಾ ಆಗಿದ್ದಾರೆ..  

ಇನ್ನು ಈ ಅಮೃತಧಾರೆ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ.. ಅದರಲ್ಲಿ ಪಾರ್ಥ ಅವರ ಪಾತ್ರವೂ ಒಂದು.. ಹಾಗಾದ್ರೆ ಈ ಪಾತ್ರಕ್ಕೆ ಜೀವ ತುಂಬಿದವರ ನಿಜವಾದ ಹೆಸರೇನು? ಈ ಮೊದಲು ಯಾವ ಧಾರವಾಹಿಯಲ್ಲಿ ಅವರು ಕಾಣಿಸಿಕೊಂಡಿದ್ದರು? ಇದೆಲ್ಲವನ್ನೂ ಇದೀಗ ತಿಳಿಯೋಣ..  

ಈ ಹಿಂದೆ ಜೀ ಕನ್ನಡದಲ್ಲೇ ಪ್ರಸಾರವಾಗುತ್ತಿದ್ದಂತಹ ಅರಸಿ ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟವರು ಪಾರ್ಥ ಅಲಿಯಾಸ್‌ ಕರಣ್‌.. ಈ ಸಿರೀಯಲ್‌ನಲ್ಲಿ ಇವರು ಸಿದ್ಧಾಂತ್‌ ಪಾತ್ರದಲ್ಲಿ ಮಿಂಚಿದ್ದರು.. ವಿಶೇಷ ಏನಪ್ಪಾ ಅಂದ್ರೆ ಇದೇ ಧಾರವಾಹಿ ಮೂಲಕವೇ ರಚಿತಾರಾಮ್‌ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು..   

ಕರಣ್‌ ಅವರು ಸದ್ಯ ಅಮೃತಧಾರೆ ಸಿರೀಯಲ್‌ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ದೊಡ್ಡ ಮಟ್ಟದ ಯಶಸ್ಸು ಗಳಿಸುತ್ತಿರುವ ಈ ಧಾರವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥ ಜೋಡಿ ಕಿರುತೆರೆ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿದೆ.. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link