ಗಣೇಶನಿಗೆ 20 ಕೆಜಿ ಚಿನ್ನದ ಕಿರೀಟ ಗಿಫ್ಟ್‌ ನೀಡಿದ ಅನಂತ್ ರಾಧಿಕಾ ಜೋಡಿ..! ಇದರ ಬೆಲೆ ಎಷ್ಟು ಗೊತ್ತಾ..?

Sat, 07 Sep 2024-10:25 pm,

ಮುಖೇಶ್ ಅಂಬಾನಿ ಅವರ ಎರಡನೇ ಪುತ್ರ ಅನಂತ್ ಅಂಬಾನಿ ಜುಲೈ 12 ರಂದು ರಾಧಿಕಾ ಮರ್ಚೆಂಟ್ ಜೊತೆ ಸಪ್ತಪದಿ ತುಳಿದರು.   

ಮುಂಬೈನ ಲಾಲ್ ಬಾಗ್ಚಾ ರಾಜ ಗಣೇಶ ದೇವಸ್ಥಾನಕ್ಕೆ ಮತ್ತು ಅಂಬಾನಿ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ.  

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿಗಳು ಮದುವೆಯ ನಂತರ ಮೊದಲ ಬಾರಿಗೆ ವಿನಾಯಕ ಚತುರ್ಥಿ ಆಚರಣೆ ಮಾಡಿದರು. ಲಾಲ್ ಬಾಗ್ಚಾ ರಾಜ ದೇವಸ್ಥಾನಕ್ಕೆ ಭೇಟಿ ನೀಡಿದರು.  

ಈ ಸಂದರ್ಭದಲ್ಲಿ ನವ ಜೋಡಿ 20 ಕೆಜಿ ತೂಕದ ಚಿನ್ನದಿಂದ ಮಾಡಿದ ಕಿರೀಟವನ್ನು ಗಣೇಶನಿಗೆ ಅರ್ಪಿಸಿದರು.  

ವಿಶೇಷ ಪೂಜೆಯ ನಂತರ ಸಂಘಟಕರು ಗಣೇಶನಿಗೆ ಚಿನ್ನದ ಕಿರೀಟವನ್ನು ಅಲಂಕರಿಸಿದರು.  

ಅನಂತ್ ಮತ್ತು ರಾಧಿಕಾ ಚಿನ್ನದ ಕಿರೀಟ ಉಡುಗೂರೆಯಾಗಿ ನೀಡಿದ್ದನ್ನು ಕೇಳಿ ನೆಟ್ಟಿಗರು ಬೆಚ್ಚಿ ಬೀದಿದ್ದಾರೆ.. ಇದರ ಬೆಲೆ ಸರಿ ಸುಮಾರು 15 ಕೋಟಿ ಎಂದು ಹೇಳಲಾಗುತ್ತಿದೆ.  

ವಿನಾಯಕ ಚತುರ್ಥಿಯಂದು ಅನಂತ್ ಅಂಬಾನಿ ಅರ್ಪಿಸಿದ ಚಿನ್ನದ ಕಿರೀಟದ ಬಗ್ಗೆ ಸದ್ಯ ಸೋಷಿಯಲ್‌ ಮೀಡಿಯಾಲದಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link