ಮದುವೆಗೆ ರೆಡಿ, ರೆಡಿ ಎನ್ನುತ್ತಲೇ ಸದ್ದಿಲ್ಲದೇ ವಿವಾಹವಾಗಿಯೇ ಬಿಟ್ಟ ಅನುಶ್ರೀ!ಯಾರಿಗೂ ಸುಳಿವು ಬಿಟ್ಟು ಕೊಡದೆ ಹಸೆಮಣೆ ಏರಿದ ಬೆಡಗಿ !
ಅನುಶ್ರೀ ಮದುವೆಯ ವಿಚಾರ ಮತ್ತೆ ಸುದ್ದಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಅನುಶ್ರೀ ಬಳಿ ಯಾರೇ ಮದುವೆ ಬಗ್ಗೆ ಮಾತನಾಡಿದರೂ ಮದುವೆಗೆ ನಾನು ಮಾನಸಿಕವಾಗಿ ರೆಡಿ ಎನ್ನುವ ಉತ್ತರ ನೀಡುತ್ತಾರೆ.
ಇದಕ್ಕಿಂತ ಮುನ್ನ ಅನುಶ್ರೀ ಬಳಿ ಮದುವೆ ಯಾವಾಗ ಎಂದು ಕೇಳಿದ ಕೂಡಲೇ ನನಗೆ ಮತ್ತು ನನ್ನ ಮನೆಯವರಿಗೆ ಇಲ್ಲದ ಚಿಂತೆ ನಿಮಗೆ ಯಾಕೆ ಎಂದು ಅನೇಕ ಬಾರಿ ಪ್ರಶ್ನಿಸಿದ್ದೂ ಇದೆ.
ಆದರೆ ಇತ್ತೀಚೆಗೆ ಮದುವೆ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ನಗು ಮುಖದಿಂದಲೇ ಉತ್ತರ ಕೊಡುತ್ತಾರೆ. ಹಾಗಾಗಿ ಈ ಬಾರಿ ಅನುಶ್ರೀ ಕಲ್ಯಾಣ ಗ್ಯಾರಂಟಿ ಎಂದು ಸಂತಸ ಪಟ್ಟಿದ್ದರು ಅಭಿಮಾನಿಗಳು.
ಇದರ ಮಧ್ಯೆ, ಈಗ ಹೊಸ ಮಾತು ಕೇಳಿ ಬರುತ್ತಿದೆ. ಮದುವೆಗೆ ರೆಡಿ ರೆಡಿ ಎನ್ನುತ್ತಲೇ ಅನುಶ್ರೀ ಮದುವೆ ಆಗಿಯೇ ಬಿಟ್ಟಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಯಾರಿಗೂ ಯಾವ ಸುಳಿವನ್ನು ಕೂಡಾ ನೀಡದೆ ಈ ಮುದ್ದು ಬೆಡಗಿ ಹಸೆಮಣೆ ಏರಿದ್ದಾರೆ. ಒಂಟಿ ಜೀವನಕ್ಕೆ ಕೊನೆಗೂ ಗುಡ್ ಬೈ ಹೇಳಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.
ಈ ರೀತಿ ಮಾತು ಹರಿದಾದುವುದಕ್ಕೆ ಕಾರಣ ಖುದ್ದು ಅನುಶ್ರೀಯೇ. ಅವರ ಬೆರಳಿಗೆ ತೊಟ್ಟಿರುವ ಉಂಗುರವೇ ಇದಕ್ಕೆ ಕಾರಣ.
ಹೌದು, ಅನುಶ್ರೀ ಮಂಗಳೂರಿನಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಮಾತ್ರ ಧರಿಸುವ ಒಡ್ಡುಂಗುರ ಧರಿಸಿರುವುದೇ ಎಲ್ಲರ ಮನದಲ್ಲಿ ಈ ಪ್ರಶ್ನೆ ಮೂಡಲು ಕಾರಣ.
ಈ ಉಂಗುರವನ್ನು ಇಷ್ಟ ಎನ್ನುವ ಕಾರಣಕ್ಕೆ ಅನುಶ್ರೀ ಧರಿಸಿದ್ದಾರೆ ಎಂದು ಕೂಡಾ ಹೇಳಲಾಗುತ್ತಿದೆ. ಆದರೆ ಅನುಶ್ರೀ ಆ ಉಂಗುರವನ್ನು ಯಾವ ಕಾರಣಕ್ಕೆ ಧರಿಸಿದ್ದಾರೆ ಎನ್ನುವುದನ್ನು ಅವರಷ್ಟೇ ಹೇಳಬಲ್ಲರು.