Astro Tips: ಬೆಳಗ್ಗೆ ಬೇಗ ಎದ್ದು ಈ 5 ಕೆಲಸ ಮಾಡಿದ್ರೆ ಎಂದಿಗೂ ಬಡತನ ಕಾಡುವುದಿಲ್ಲ!

Sun, 22 Oct 2023-6:15 am,

ಬೆಳಗ್ಗೆ ಎದ್ದು ದೇವರನ್ನು ನೆನೆದು ಮನೆಯ ಮುಖ್ಯದ್ವಾರವನ್ನು ನೀರಿನಿಂದ ಸ್ವಚ್ಛಗೊಳಿಸಿ. ನಂತರ ಬಾಗಿಲನ್ನು ರಂಗೋಲಿ ಮತ್ತು ಕಮಾನುಗಳಿಂದ ಅಲಂಕರಿಸಿ. ಇದರಿಂದ ತಾಯಿ ಲಕ್ಷ್ಮಿದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತುಂಬುತ್ತಾಳೆ.

ಬೆಳಿಗ್ಗೆ ಮತ್ತು ಸಂಜೆ ಮನೆಯ ಹೊರಗೆ ದೀಪವನ್ನು ಹಚ್ಚಿ. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಯು ಬೇಗನೆ ಪ್ರಸನ್ನಳಾಗುತ್ತಾಳೆ ಮತ್ತು ಭಕ್ತರ ಆಸೆ ಈಡೇರಿಸುವ ಮೂಲಕ, ತಿಜೋರಿಯಲ್ಲಿ ಹಣವನ್ನು ಸಂತೋಷದಿಂದ ತುಂಬುತ್ತಾಳೆ.

ತುಳಸಿಯನ್ನು ನಿತ್ಯವೂ ಬೆಳಗ್ಗೆ ಪೂಜಿಸಬೇಕು ಮತ್ತು ನೀರನ್ನು ಸಹ ಅರ್ಪಿಸಬೇಕು. ಇದಲ್ಲದೆ ಪ್ರತಿದಿನ ಸಂಜೆ ಈ ಪವಿತ್ರ ಸಸ್ಯದ ಮುಂದೆ ತುಪ್ಪದ ದೀಪವನ್ನು ಬೆಳಗಿಸಬೇಕು. ಇದನ್ನು ಮಾಡುವುದರಿಂದ ಸಂತೋಷ ಮತ್ತು ಸಮೃದ್ಧಿಯ ಬಾಗಿಲು ತೆರೆಯುತ್ತದೆ.

ಪ್ರತಿದಿನ ಬೆಳಗ್ಗೆ ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಆಳುವ ಗ್ರಹಗಳು ಬಲಿಷ್ಠರಾಗಿ ಮಾನವನ ಬದುಕಿಗೆ ಹಿರಿಮೆ ತುಂಬುತ್ತವೆ.

ಬೆಳಗಿನ ಪೂಜೆಯ ನಂತರ ಹಣೆಗೆ ಶ್ರೀಗಂಧವನ್ನು ಹಚ್ಚಿ. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಯು ಪ್ರಸನ್ನಳಾಗಿ ಮನೆಯಲ್ಲಿ ನೆಲೆಸುತ್ತಾಳೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link