Astrology:ನಿಮಗೂ ಎಲ್ಲಾದರು ಈ ಬೀಜ ಸಿಕ್ಕರೆ, ನಿಮ್ಮ ಅದೃಷ್ಟ ಖುಲಾಯಿಸಲಿದೆ, ಹಣಕಾಸಿನ ಮುಗ್ಗಟ್ಟು ಎದುರಾಗಲ್ಲ

Sat, 24 Jul 2021-6:58 pm,

1. ಕಮಾಲ್ ಮಾಡಲಿದೆ ನಾಗಕೆಷರ ಬೀಜ - ಹಣಕಾಸಿನ ಮುಗ್ಗಟ್ಟನ್ನು ದೂರಗೊಳಿಸುವ ಈ ಬೀಜದ ಹೆಸರು ನಾಗಕೆಸರ. ಇದು ನಿಮ್ಮ ಮನೆಯ ಹಣಕಾಸಿನ ಮುಗ್ಗಟ್ಟಿನಿಂದ ಹಿಡಿದು ಇತರ ಎಲ್ಲಾ ಸಮಸ್ಯೆಗಳ ನಿವಾರಣೆ ಮಾಡುವ ಕ್ಷಮತೆ ಹೊಂದಿದೆ. ಸಾಮಾನ್ಯವಾಗಿ ಈ ಬೀಜ ಅಷ್ಟೊಂದು ಸುಲಭವಾಗಿ ಸಿಗುವುದಿಲ್ಲ. ಆದರೆ, ಅದೃಷ್ಟದಿಂದ ಒಂದು ವೇಳೆ ನಿಮಗೆ ಈ ಬೀಜ ದೊರೆತರೆ ನಿಮ್ಮ ಭಾಗ್ಯದ (Fortune) ಬಾಗಿಲು ತೆರೆದುಕೊಳ್ಳಲಿದೆ.

2. ಪೂಜೆ-ಪುನಸ್ಕಾರದಲ್ಲಿ ಬಳಕೆಯಾಗುತ್ತದೆ ನಾಗಕೆಷರ - ನಾಗಕೆಷರ ಒಂದು ಸಾಮಾನ್ಯ ವನಸ್ಪತಿಯಾಗಿದೆ. ನೋಡಲು ಇದು ಕರಿ ಮೆಣಸಿನ ರೀತಿಯೇ ಇರುತ್ತದೆ. ಈ ಬೀಜವನ್ನು ಹೆಚ್ಚಾಗಿ ಪೂಜೆ-ಪುನಸ್ಕಾರಗಳಲ್ಲಿ ಬಳಸುತ್ತಾರೆ.

3. ಬೀಜದ ತಿಲಕ ಮಾಡಿ ಹಣೆಗೆ ಹಚ್ಚಿಕೊಳ್ಳಿ - ಮನೆಯಲ್ಲಿ ಯಾವುದೇ ರೀತಿಯ ಕಲಹವಿರಲಿ ಅಥವಾ ದಿನನಿತ್ಯ ಜಗಳಗಳೇ ನಡೆಯುತ್ತಿರಲಿ, ಈ ಬೀಜದ ಲೇಪ ತಯಾರಿಸಿ ಅದರ ತಿಲಕವನ್ನು ಹಣೆಗೆ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿನ ಎಲ್ಲಾ ರೀತಿಯ ವ್ಯಾಜ್ಯಗಳು ಕೆಲವೇ ದಿನಗಳಲ್ಲಿ ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ.  

4. ಬಟ್ಟೆಯಲ್ಲಿ ಸುದ್ದಿ ತಿಜೋರಿಯಲ್ಲಿಡಿ - ಒಂದು ವೇಳೆ ಸಾಕಷ್ಟು ಕಷ್ಟಪಟ್ಟರೂ ಕೂಡ ಆರ್ಥಿಕ ಸಮಸ್ಯೆಗಳು ನಿಮ್ಮ ಬೆನ್ನು ಬಿಡುತ್ತಿಲ್ಲ ಎಂದಾದರೆ, ಮನೆಯಲ್ಲಿ ಹಣಕಾಸಿನ ಹರಿವು ಹೆಚ್ಚಿಸಲು ಈ ಬೀಜ ತುಂಬಾ ಶುಭಕರ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಯಾವುದಾದರೊಂದು ಶುಭ ಮುಹೂರ್ತ ನೋಡಿ, ನಾಗಕೆಷರ ಹಾಗೂ ಐದು ನಾಣ್ಯಗಳನ್ನು ಸೇರಿಸಿ ಅವುಗಳಿಗೆ ಪೂಜೆ ಸಲ್ಲಿಸಬೇಕು. ನಂತರ ಅವುಗಳನ್ನು ಬಟ್ಟೆಯೊಂದರಲ್ಲಿ ಸುತ್ತಿ ನಿಮ್ಮ ಅಂಗಡಿಯ ಗಲ್ಲಾ ಪೆಟ್ಟಿಗೆ ಅಥವಾ ಆಫಿಸ್ ನ ಕ್ಯಾಶ್ ಬಾಕ್ಸ್ ನಲ್ಲಿಡಿ. 

5. ಕೆಲವೇ ದಿನಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳಲಿದೆ - ಇದಲ್ಲದೆ ಒಂದು ಹೊಸ ಹಳದಿ ಬಣ್ಣದ ಬತ್ತಿಯಲ್ಲಿ ನಾಗಕೆಷರ, ಅರಿಶಿನ, ಅಡಿಕೆ , ತಾಮ್ರದ ಲೋಹದ ತುಣುಕು ಅಥವಾ ನಾಣ್ಯ, ಅಕ್ಷತೆ ಹಾಗೂ ಒಂದು ನಾಣ್ಯವನ್ನು ಇರಿಸಿ, ಅದಕ್ಕೆ ಧೂಪ-ದೀಪದಿಂದ ಪೂಜೆ ಸಲ್ಲಿಸಿ ಸಿದ್ಧಿ ಪ್ರಾಪ್ತಿ ಮಾಡಿ. ಬಳಿಕ ಅದನ್ನು ನಿಮ್ಮ ಮನೆಯ ಬೀರುವಿನಲ್ಲಿ ಅಥವಾ ತಿಜೋರಿಯಲ್ಲಿರಿಸಿ. ಹೀಗೆ ಮಾಡುವುದರಿಂದ ಬದಲಾವಣೆ ಖಂಡಿತ ನಿಮ್ಮ ಗಮನಕ್ಕೆ ಬರಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link