ಸೂರ್ಯಾಸ್ತದ ವೇಳೆ ಮಾಡುವ ಈ ತಪ್ಪುಗಳು ಸೌಭಾಗ್ಯವನ್ನು ದೌರ್ಭಾಗ್ಯವಾಗಿ ಬದಲಿಸಿಬಿಡುತ್ತದೆ

Thu, 23 Jun 2022-3:14 pm,

ಸೂರ್ಯಾಸ್ತದ ಸಮಯದಲ್ಲಿ ಮಲಗಬೇಡಿ: ಸಾಮಾನ್ಯವಾಗಿ ಸಂಜೆಯ ಹೊತ್ತು  ಮಲಗಬಾರದು ಎಂದು ಹಿರಿಯರೂ ಹೇಳುತ್ತಿರುತ್ತಾರೆ. ಲಕ್ಷ್ಮೀ ದೇವಿಯು ಸಂಜೆ ಮನೆಗೆ ಪ್ರವೇಶಿಸುತ್ತಾಳೆ ಎನ್ನುವುದು ನಂಬಿಕೆ. ಆದ್ದರಿಂದ, ಈ ಸಮಯದಲ್ಲಿ ಮಲಗುವ ತಪ್ಪನ್ನು ಎಂದಿಗೂ ಮಾಡಬೇಡಿ.   

ಮರಗಳು ಮತ್ತು ಸಸ್ಯಗಳನ್ನು ಮುಟ್ಟಬೇಡಿ: ಸೂರ್ಯಾಸ್ತದ ನಂತರ ಮರಗಳು ಮತ್ತು ಸಸ್ಯಗಳನ್ನು ಮುಟ್ಟಬಾರದು ಅಥವಾ ಹಣ್ಣುಗಳು ಮತ್ತು ಎಲೆಗಳನ್ನು ಕೀಳಬಾರದು. ಸೂರ್ಯಾಸ್ತದ ನಂತರ, ಮರಗಳು ಮತ್ತು ಸಸ್ಯಗಳು ನಿದ್ರೆಗೆ ಜಾರುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಅವುಗಳನ್ನು ಸ್ಪರ್ಶಿಸುವುದು ಅಪರಾಧ ಎನ್ನಲಾಗಿದೆ.  

ಸೂರ್ಯಾಸ್ತದ ನಂತರ ಗುಡಿಸಿ ಮತ್ತು ಒರೆಸಬೇಡಿ: ಸೂರ್ಯಾಸ್ತದ ನಂತರ ಮನೆಯನ್ನು ಸ್ವಚ್ಛಗೊಳಿಸಬೇಡಿ. ಸೂರ್ಯಾಸ್ತದ ನಂತರ ಗುಡಿಸುವುದು, ಬಲೆ ತೆಗೆಯುವುದು ಇತ್ಯಾದಿ ಕೆಲಸಗಳನ್ನು ಮಾಡುವುದು ಸರಿಯಲ್ಲ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.   

ಮೊಸರು ದಾನ ಮಾಡಬೇಡಿ: ದಾನ ಮಾಡುವುದು ಒಳ್ಳೆಯದು ಆದರೆ ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ನಂತರ ತಪ್ಪಾಗಿಯೂ ಮೊಸರು, ಉಪ್ಪಿನಕಾಯಿ ಮತ್ತು ಉಪ್ಪಿನಂತಹ ಪದಾರ್ಥಗಳನ್ನು ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಲಕ್ಷ್ಮೀ ಬೇರೆಯವರ ಪಾಲಾಗುತ್ತದೆ. 

ಉಗುರುಗಳು ಮತ್ತು ಕೂದಲನ್ನು ಕತ್ತರಿಸಬೇಡಿ: ಸೂರ್ಯಾಸ್ತದ ಸಮಯದಲ್ಲಿ ಮತ್ತು ಸೂರ್ಯಾಸ್ತದ ನಂತರ ಉಗುರುಗಳು ಮತ್ತು ಕೂದಲನ್ನು ಎಂದಿಗೂ ಕತ್ತರಿಸಬೇಡಿ. ಶೇವಿಂಗ್ ಮಾಡುವುಡು ಕೂಡಾ ಸರಿಯಲ್ಲ. ಹೀಗೆ ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ಅದರೊಂದಿಗೆ ಬಡತನವೂ ಬರುತ್ತದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link