Diabetes Diet: ನಿತ್ಯ ನೀರಿನಲ್ಲಿ ಇದನ್ನು ಬೆರೆಸಿ ಸವಿದರೆ ಹೆಚ್ಚಾಗಲ್ಲ ಶುಗರ್ ಲೆವೆಲ್
ನೀವು ಮಧುಮೇಹಿ ಆಗಿದ್ದರೆ ಒಂದೇ ಒಂದು ಮಸಾಲೆಯಿಂದ ತಯಾರಿಸಿದ ಆಯುರ್ವೇದ ಪಾನೀಯ ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.
ದಾಲ್ಚಿನ್ನಿಯಿಂದ ತಯಾರಿಸಿದ ಪಾನೀಯ ಕುಡಿಯುವುದರಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು.
ದಾಲ್ಚಿನ್ನಿ ಸಿನ್ನಾಮಾಲ್ಡಿಹೈಡ್ ಮತ್ತು ಸಿನಾಮಿಕ್ ಆಮ್ಲದಂತಹ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ. ಇದು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ.
ಆಯುರ್ವೇದದ ಪ್ರಕಾರ, ನಿಯಮಿತವಾಗಿ ದಾಲ್ಚಿನ್ನಿಯ ಪಾನೀಯವನ್ನು ಕುಡಿಯುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗದಂತೆ ತಡೆಯುತ್ತದೆ.
ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ದಾಲ್ಚಿನ್ನಿ ಪುಡಿ, ಇಲ್ಲವೇ ಒಂದೆರಡು ದಾಲ್ಚಿನ್ನಿಯನ್ನು ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಮಧುಮೇಹ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.