BBK11 Elimination: ಅಚ್ಚರಿಯ ಎಲಿಮಿನೇಷನ್‌.. ಬಿಗ್‌ ಬಾಸ್‌ ನಿಂದ ಆಚೆ ಬಂದೇ ಬಿಟ್ರು ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದ ಈ ಸ್ಪರ್ಧಿ..!

Sun, 27 Oct 2024-10:41 am,

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಅಚ್ಚರಿಯ ಎಲಿಮಿನೇಷನ್‌ ನಡೆದಿದೆ. ಅನೇಕರು ಈ ಸ್ಪರ್ಧಿ ಫಿನಾಲೆ ತಲುಪಬಹುದು ಎಂದೇ ಭಾವಿಸಿದ್ದರು. ಆದರೆ ಈ ವಾರವೇ ಮನೆಯಿಂದ ಹೊರಬಂದಿದ್ದಾರೆ. 

ಕಿಚ್ಚ ಸುದೀಪ್ ತಾಯಿ ಅಗಲಿಕೆ ಹಿನ್ನೆಲೆ ಈ ವಾರ ವೀಕೆಂಡ್‌ ಎಪಿಸೋಡ್‌ ನಡೆಸಿಕೊಟ್ಟಿಲ್ಲ. ಕಿಚ್ಚನ ಅನುಪಸ್ಥಿತಿಯಲ್ಲಿ ಯೋಗರಾಜ್ ಭಟ್ ಶನಿವಾರದ ಪಂಚಾಯಿತಿ ನಡೆಸಿದರು.   

ಇಂದು ಭಾನುವಾರ. ಬಿಗ್‌ ಬಾಸ್‌ ಎಲಿಮಿನೇಷನ್‌ ಡೇ. ಕಳೆದ ವಾರ ಸುದೀಪ್‌ ತಾಯಿ ಅನಾರೋಗ್ಯದ ಹಿನ್ನೆಲೆ ರವಿವಾರದ ಎಪಿಸೋಡ್‌ ನಡೆಸಿಕೊಡಲಿಲ್ಲ. ಈ ಹಿನ್ನೆಲೆ ಎಲಿಮಿನೇಷನ್‌ ನಡೆಯಲಿಲ್ಲ.  

ಭಾನುವಾರ ಬಿಗ್‌ ಬಾಸ್‌ ಮನೆಗೆ ಸೃಜನ್ ಲೋಕೇಶ್ ಬಂದಿದ್ದಾರೆ. ಈ ದಿನ ಒಬ್ಬ ಸ್ಪರ್ಧಿಯನ್ನ ಮನೆಗೆ ಕಳಿಸಲು ಟಾಕಿಂಗ್‌ ಸ್ಟಾರ್‌ ಎಂಟ್ರಿ ಕೊಟ್ಟಿದ್ದಾರೆ. 

ಎರಡೂ ಕೈಗಳನ್ನ ಕಟ್ಟಿಕೊಂಡು ಕೇಸರಿ ಬಾತ್ ತಿನ್ನುವ ಟಾಸ್ಕ್‌ನ್ನು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ನೀಡಲಾಗಿದೆ. ಈ ಬಳಿಕ ಸ್ಪರ್ಧಿಗಳನ್ನು ಸೃಜನ್‌ ಲೋಕೇಶ್‌ ಮಾತನಾಡಿಸಿದ್ದಾರೆ. 

ಈ ವಾರ ಬಿಗ್‌ ಬಾಸ್‌ನಿಂದ ಹೊರ ಹೋಗುವ ಸ್ಪರ್ಧಿಯ ಹೆಸರು ಎಲ್ಲಿರಿಗೂ ಅಚ್ಚರಿ ಮೂಡಿಸಿದೆ. ಇವರ ಧ್ವನಿ ಬಗ್ಗೆ ಮನೆಯಲ್ಲಿ ಮಾತ್ರವಲ್ಲ ಹೊರಗಡೆಯೂ ಸಾಕಷ್ಟು ಚರ್ಚೆ ನಡೆದಿತ್ತು. 

ಏರು ಧ್ವನಿಯಿಂದಲೇ ಟ್ರೋಲ್‌ ಆಗಿದ್ದ ಈ ಸ್ಪರ್ಧಿ ಇದೀಗ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಈ ಸ್ಪರ್ಧಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಕೂಡ ಮಾಡಲಾಗಿತ್ತು.  

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಿಂದ ಮಾನಸ ತುಕಾಲಿ ಸಂತೋಷ್‌ ಎಲಿಮಿನೇಟ್‌ ಆಗಿದ್ದಾರೆ ಎನ್ನಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link