“ಈತನ ಫ್ರೆಂಡ್ಶಿಪ್ ನನಗೆ ಬೇಡ, ಅದು ಮುಗಿದ ಅಧ್ಯಾಯ”- ಕಿಚ್ಚನ ಮುಂದೆಯೇ ಸಂಗೀತ ಹೀಗಂದಿದ್ದು ಯಾರಿಗೆ ಗೊತ್ತಾ?

Sun, 14 Jan 2024-5:22 pm,

ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸಂಗೀತಾ ಮತ್ತು ಕಾರ್ತಿಕ್ ನಡುವೆ ಪ್ರಾರಂಭದಲ್ಲಿ ಉತ್ತಮ ಬಾಂಧವ್ಯವಿತ್ತು. ಆದರೆ ಇತ್ತೀಚಿನ ಕೆಲ ಎಪಿಸೋಡ್’ಗಳನ್ನು ಗಮನಿಸುವುದಾದರೆ, ಇವರಿಬ್ಬರ ಮಧ್ಯೆ ಮನಸ್ತಾಪ ಮೂಡಿದಂತಿದೆ.

ಕಳೆದ ಕೆಲ ವಾರಗಳ ಹಿಂದೆ ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾನೆ ಎಂದು ಹೇಳಿದ್ದರು ಸಂಗೀತಾ, ಇದಾದ ಬಳಿಕ ಇಬರಿಬ್ಬರ ಮಧ್ಯೆ ಮುನಿಸು ಕಾಣಿಸಿಕೊಂಡಿತ್ತು. ಇದೀಗ ಕಾರ್ತಿಕ್ ಸಂಗೀತಾ ಅವರನ್ನು ಶನಿ ಎಂದು ಹೇಳಿದ್ದಾರೆ.

ಈ ವಿಚಾರ ವೀಕೆಂಡ್ ಎಪಿಸೋಡ್’ನಲ್ಲಿ ಮುನ್ನೆಲೆಗೆ ಬಂದಿದೆ. ಅಷ್ಟೇ ಅಲ್ಲದೆ, ಅದಾದ ಬಳಿಕ ಸಂಗೀತಾ ಶೃಂಗೇರಿ ಬಹಳಷ್ಟು ನೋವನ್ನು ಅನುಭವಿಸಿದ್ದರು.

ಇಂದಿನ ಎಪಿಸೋಡ್’ನಲ್ಲಿ ಇವರಿಬ್ಬರ ಸ್ನೇಹ ಕೊನೆಯಾದಂತೆ ತೋರುತ್ತಿದೆ. ಸೀಸನ್ ಮುಗಿದ ಬಳಿಕ ಯಾರ ಸ್ನೇಹ ಮುಂದುವರೆಸಲು ಇಷ್ಟಪಡುತ್ತೀರಿ ಎಂದು ಕಿಚ್ಚ ಕೇಳಿದ್ದರು. ಇದಕ್ಕೆ ಎಲ್ಲಾ ಸ್ಪರ್ಧಿಗಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸಂಗೀತಾ, “ನನ್ನ ಮನಸ್ಸಿಗೆ ಕೆಲ ವಿಷಯಗಳು ನೋವಾಗುತ್ತೆ ಎಂದು ಗೊತ್ತಿದ್ದರೂ ಸಹ ಕಾರ್ತಿಕ್ ಅದನ್ನೇ ಮಾಡ್ತಾರೆ. ಫ್ರೆಂಡ್ಶಿಪ್ ನನಗೆ ಬೇಡ, ಹೊರಗಡೆ ಹೋದ ಬಳಿಕವೂ ಸರಿಪಡಿಸಿಕೊಳ್ಳಲು ಇಷ್ಟಪಡಲ್ಲ” ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link