Bigg Boss Kannada 11ಕ್ಕೆ ಮುಹೂರ್ತ ಫಿಕ್ಸ್: ಇವರೇ ಆ್ಯಂಕರ್, ಕುತೂಹಲ ಹೆಚ್ಚಿಸಿದ ಕಿಚ್ಚ ಸುದೀಪ್ ಡೈಲಾಗ್..!

Mon, 16 Sep 2024-7:20 am,

ವೀಕ್ಷಕರ ಅಚ್ಚುಮೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಯಾವಾಗ ಆರಂಭವಾಗಲಿದೆ, ಈ ಬಾರಿ ಶೋ ನಡೆಸಿಕೊಡುವವರ್ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಬಿಗ್ ಬಾಸ್ ಹೊಸ ಪ್ರೋಮೊದಿಂದ ಉತ್ತರ ಸಿಕ್ಕಿದೆ. 

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸ ಅಪ್ಡೇಟ್ ಹೊರ ಬೀಳಲಿದೆ ಎನ್ನಲಾಗುತ್ತಿತ್ತು. ಅದರಂತೆ ಇದೀಗ ಬಿ‌ಬಿ‌ಕೆ 11ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. 

ನೂತನವಾಗಿ ಬಿಡುಗಡೆಯಾಗಿರುವ ಈ ಪ್ರೋಮೋದಲ್ಲಿ ಶೋ ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿಯ ಜೊತೆಗೆ  ಆ್ಯಂಕರ್ ಫೇಸ್ ಕೂಡ ರಿವೀಲ್ ಆಗಿದೆ. ಇದರಲ್ಲಿ, ಕಿಚ್ಚ ಸುದೀಪ್ ಹೇಳುವ ಡೈಲಾಗ್ ವೀಕ್ಷಕರ ಕುತೂಹಲ ಹೆಚ್ಚಿಸಿದೆ. 

'ಬಿಗ್ ಬಾಸ್ ಕನ್ನಡ ಸೀಸನ್ 11'ಕಾರ್ಯಕ್ರಮವನ್ನು ಕಿಚ್ಚನ ಬದಲಿಗೆ ಬೇರೆಯವರು ನಡೆಸಿಕೊಡಲಿದ್ದಾರೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಆದರೀಗ ಆದ್ರೆ ಇವರ ವಿಚಾರದಲ್ಲಿ ಬದಲಾವಣೆ 'ನೋ ವೇ, ಛಾನ್ಸೇ ಇಲ್ಲ'! ಎಂದಿರುವ ಕಲರ್ಸ್ ವಾಹಿನಿ ಕಿಚ್ಚ ಸುದೀಪ್ ಅವರನ್ನೇ ಆ್ಯಂಕರ್ ಆಗಿ ಆಯ್ಕೆ ಮಾಡಿದೆ. 

ಈ ಪ್ರೋಮೋದಲ್ಲಿ 'ಮಾತಿಗೆ ಮಾತು, ಸೇಡಿಗೆ ಸೇಡು, ವರ್ಷ ವರ್ಷ ಯುದ್ಧ ಮಾಡೋರು ಬದಲಾಗ್ತಾರೆ. ಆದ್ರೆ ಎಲ್ರನ್ನೂ ನಿಯಂತ್ರಿಸುವ ಸೂತ್ರಧಾರ...' ಎಂಬ ಡೈಲಾಗ್ ನಿಲ್ಲುತ್ತಿದ್ದಂತೆ ಕಿಚ್ಚ ಸುದೀಪ್ ಎಂಟ್ರಿ ಕೊಡ್ತಾರೆ. 

ರಾಜನ ಕಾಸ್ಟ್ಯೂಮ್​ನಲ್ಲಿ  ಕಿಚ್ಚ ಎಂಟ್ರಿ ಆಗ್ತಿದ್ದಂತೆ "10 ವರ್ಷದಿಂದ ಒಂದು ಲೆಕ್ಕ, ಈಗಿಂದ  ಬೇರೆನೇ ಲೆಕ್ಕ, ಇದು ಹೊಸ ಅಧ್ಯಾಯ" ಎಂಬ ಖಡಕ್ ಡೈಲಾಗ್ ಹೊಡೆದಿದ್ದಾರೆ. 

ಈ ಪ್ರೋಮೊದಲ್ಲಿ ಹಿಂದೆಂದಿಗಿಂತ ಬಿಗ್ ಬಾಸ್ ಸೆಟ್ ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡಿದ್ದು  ಇದರಲ್ಲಿ ರಾಜನ ಕಾಸ್ಟ್ಯೂಮ್​ನಲ್ಲಿ ಬರುವ ಕಿಚ್ಚ, ಈಗಿಂದ ಬೇರೆದೇ ಲೆಕ್ಕ ಎಂದು ಹೇಳಿರುವುದು ವೀಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ.  

ರಿಲೀಸ್ ಆಗಿರುವ ಪ್ರೋಮೋ ಪ್ರಕಾರ, ಇದೇ ಸೆಪ್ಟೆಂಬರ್ 29ರಿಂದ 'ಬಿಗ್ ಬಾಸ್ ಕನ್ನಡ ಸೀಸನ್ 11' ಕಾರ್ಯಕ್ರಮ ಆರಂಭವಾಗಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link