ಬಿಗ್‌ ಬಾಸ್‌ ಮನೆಯಲ್ಲಿ ಸರ್‌ಪ್ರೈಸ್‌ ಎಲಿಮಿನೇಷನ್!‌ ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಈ ಸ್ಪರ್ಧಿಯೇ ಔಟ್?

Sun, 06 Oct 2024-7:42 am,

Bigg Boss Kannada 11 Elimination: ಕನ್ನಡ ಬಿಗ್ ಬಾಸ್ ಮೊದಲ ಎಲಿಮಿನೇಷನ್‌ ನಡೆದಿದೆ. ಬಿಗ್‌ ಬಾಸ್‌ ಮನೆಯಲ್ಲಿಸರ್‌ಪ್ರೈಸ್‌ ಎಲಿಮಿನೇಷನ್ ನಡೆದಿದ್ದು, ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಸ್ಪರ್ಧಿಯೇ ಮನೆಯಿಂದ ಹೊರ ನಡೆದಿದ್ದಾರೆ. 

ಕಿಚ್ಚ ಸುದೀಪ್ ಈ ಸೀಸನ್‌ನ ಮೊದಲ ಪಂಚಾಯಿತಿ ಯನ್ನು ನಡೆಸಿದ್ದಾರೆ. ಈ ವೇಳೆ ಮೊದಲು ಮೂವರನ್ನು ಸುದೀಪ್‌ ಸೇವ್‌ ಮಾಡಿದ್ದು, ಇನ್ನೂ 6 ಜನರು ಬಾಕಿ ಉಳಿದಿದ್ದರು.  

ಬಿಗ್‌ ಬಾಸ್‌ ಮೊದಲ ವಾರದಲ್ಲಿ ಭವ್ಯಾ ಗೌಡ, ಚೈತ್ರ ಕುಂದಾಪುರ, ಗೌತಮಿ ಜಾಧವ್‌, ಹಂಸ, ಜಗದೀಶ್, ಮಾನಸ, ಮೋಕ್ಷಿತಾ, ಶಿಶಿರ್, ಯಮುನಾ ನಾಮಿನೇಟ್ ಆಗಿದ್ದರು. 

ಬಿಗ್ ಬಾಸ್ ಕನ್ನಡ 11 ಶನಿವಾರದ ಎಪಿಸೋಡ್‌ನಲ್ಲಿ ಭವ್ಯಾ ಗೌಡ, ಗೌತಮಿ ಜಾಧವ್‌ ಹಾಗೂ ಮಾನಸ ಸೇವ್‌ ಆಗಿದ್ದಾರೆ. ಸುದೀಪ್‌ ಮೊದಲು ಭವ್ಯಾ ಗೌಡ, ನಂತರ ಗೌತಮಿ ಜಾಧವ್‌, ಆ ಬಳಿಕ ಮಾನಸ ಅವರನ್ನು ಸೇವ್‌ ಮಾಡಿದರು. 

ಕೆಲ ವರದಿಗಳ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಅಚ್ಚರಿಯ ಎಲಿಮಿನೇಷನ್‌ ನಡೆಯಲಿದೆ. ಮೊದಲ ದಿನದಿಂದಲೇ ಬಿಗ್‌ ಬಾಸ್‌ ಮನೆಯಲ್ಲಿ ಸದ್ದು ಮಾಡಿದ್ದ ಈ ಸ್ಪರ್ಧಿ ಇಂದು ಮನೆಯಿಂದ ಹೊರ ನಡೆಯಲಿದ್ದಾರೆ. 

ಯಮುನಾ ಶ್ರೀನಿಧಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಎಲಿಮಿನೇಟ್ ಆಗಲಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ. ಅತಿ ಕಡಿಮೆ ವೋಟ್‌ ಪಡೆದ ಕಾರಣ ಯಮುನಾ ಶ್ರೀನಿಧಿ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗಿದೆ. 

ಇಂದು ರಾತ್ರಿ ನಡೆಯಲಿರುವ ಬಿಗ್ ಬಾಸ್ ಕನ್ನಡ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮನೆಯಿಂದ ಎಲಿಮಿನೇಟ್‌ ಆಗುವ ಸ್ಪರ್ಧಿಯ ಹೆಸರನ್ನು ಪ್ರಕಟಿಸಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link