Budh Uday2023: ಸಿಂಹ ರಾಶಿಯಲ್ಲಿ ಬುಧನ ಉದಯ, 4 ರಾಶಿಗಳ ಜನರ ಅಷ್ಟೈಶ್ವರ್ಯವನ್ನು ದುಪ್ಪಟ್ಟು ಮಾಡಲು ಬರಲಿದ್ದಾಳೆ ಅದೃಷ್ಟ ಲಕ್ಷ್ಮಿ!

Thu, 14 Sep 2023-4:28 pm,

ಮೇಷ ರಾಶಿ: ಬುಧ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಉದಯಿಸುತ್ತಿದ್ದಾನೆ. ಇದು ನಿಮ್ಮ ಪಾಲಿಗೆ ತುಂಬಾ ಶುಭ ಸಾಬೀತಾಗಲಿದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಯೋಗವಿದೆ. ವ್ಯಾಪಾರದಲ್ಲಿ ಹೊಸ ಐಡಿಯಾ ಮೇಲೆ ಕಾರ್ಯನಿರ್ವಹಿಸುವಿರಿ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಗಟ್ಟಿ ನಿರ್ಣಯ ಕೈಗೊಳ್ಳುವಲ್ಲಿ ನೀವು ಯಶಸ್ವಿಯಾಗುವಿರಿ. ಇನ್ನೊಂದೆಡೆ ಬುಧ ನಿಮ್ಮ ಗೋಚರ ಜಾರ್ತಕದ ತೃತೀಯ ಹಾಗೂ ಶಷ್ಟಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ.    

ವೃಷಭ ರಾಶಿ: ನಿಮ್ಮ ಜಾತಕದ ಪೂರ್ವ ದಿಕ್ಕಿನಲ್ಲಿ ಬುಧನ ಈ ಉದಯ ನೆರವೇರಿದೆ. ಹೀಗಾಗಿ ಇದು ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಇದಲ್ಲದೆ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಬುಧ ವಿರಾಜಮಾನನಾಗಿದ್ದಾನೆ. ಇದರಿಂದ ನಿಮ್ಮ ಉನ್ನತಿಯಾಗಲಿದೆ. ಇದಲ್ಲದೆ ಬುಧ ಇಲ್ಲಿ ಸೂರ್ಯನ ಜೊತೆಗೆ ವಿರಾಜಮಾನನಾಗಿದ್ದಾನೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಆಸ್ತಿಪಾಸ್ತಿ-ವಾಹನ ಸುಖ ಪ್ರಾಪ್ತಿಯಾಗಲಿದೆ. ಧಣಧಾನ್ಯದಲ್ಲಿ ವೃದ್ಧಿಯಾಗಲಿದೆ. ತಾಯಿಯ ಬೆಂಬಲ ನಿಮಗೆ ಸಿಗಲಿದೆ.  

ಮಿಥುನ ರಾಶಿ: ಬುಧನ ಉದಯ ಮಿಥುನ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಬುಧ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಉದಯಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಹಾಗೂ ಪರಾಕ್ರಮದಲ್ಲಿ ಹೆಚ್ಚಳ ಕಂಡುಬರಲಿದೆ. ಇದಲ್ಲದೆ ನಿಮಗೆ ಸಹೋದರ ಸಹೋದರಿಯರ ಬೆಂಬಲ ಕೂಡ ಸಿಗಲಿದೆ. ವಿದೇಶದಲ್ಲಿ ನೌಕರಿ ಪಡೆದುಕೊಳ್ಳಲು ಸಿದ್ಧತೆ ನಡೆಸುವ ಜನರಿಗೆ ಇದು ಲಾಭದ ಅವಕಾಶ ಸಾಬೀತಾಗಲಿದೆ. ನಿಮ್ಮ ಗೋಚರ ಜಾತಕದ ಲಗ್ನ ಹಾಗೂ ಚತುರ್ಥ ಭಾವಕ್ಕೆ ಬುಧ ಅಧಿಪತಿಯಾಗಿದ್ದಾನೆ. ಹೀಗಾಗಿ ನೀವು ಆಸ್ತಿಪಾಸ್ತಿ-ವಾಹನ ಖರೀದಿಸುವ ದಟ್ಟ ಸಾಧ್ಯತೆ ಇದೆ.     

ಕರ್ಕ ರಾಶಿ: ಬುಧನ ಈ ಉದಯ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲತೆಗಳನ್ನು ತರಲಿದೆ. ಏಕೆಂದರೆ ಸೂರ್ಯ ಹಾಗೂ ಬುಧನಿಂದ ನಿರ್ಮಾಣಗೊಂಡ ಬುದ್ಧಾದಿತ್ಯ ರಾಜಯೋಗ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ರೂಪುಗೊಂಡಿದೆ ಇದಲ್ಲದೆ ಬುಧನ ಉದಯ ಕೂಡ ನೆರವೇರಿದೆ. ಇದರಿಂದ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ಕುಟುಂಬದಲ್ಲಿ ಸುಖ-ಶಾಂತಿ ಇರಲಿದೆ. ನೌಕರಿಯಲ್ಲಿ ನಿಮಗೆ ಮುಂಚೂಣಿ ಸಿಗಲಿದೆ. ಆದರೆ, ಅಧಿಕ ಪರಿಶ್ರಮ ಪಾಡಬೇಕಾಗಲಿದೆ. ವಿತ್ತೀಯ ದೃಷ್ಟಿಯಿಂದ ಈ ಅವಧಿ ನಿಮಗೆ ಸಾಕಷ್ಟು ಅನುಕೂಲಕರವಾಗಿದ್ದು, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ದೀರ್ಘಾವಧಿಯಿಂದ ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link