Vastu Tips: ಮನೆಯಲ್ಲಿ ಶುಕ್ರದೆಸೆ ವೃದ್ಧಿಸಿ ಹಣದ ಮಳೆಯನ್ನೇ ಹರಿಸುತ್ತದೆ ಕರ್ಪೂರ: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು

Sun, 30 Apr 2023-6:39 am,

ಜ್ಯೋತಿಷ್ಯ ಶಾಸ್ತ್ರದಲ್ಲಿ ಕರ್ಪೂರದ ಹಲವು ವಿಧದ ಉಪಾಯಗಳನ್ನು ಮತ್ತು ಪರಿಹಾರಗಳನ್ನು ಹೇಳಲಾಗಿದೆ. ಈ ಕ್ರಮಗಳು ಮಾನವ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ಜೊತೆಗೆ ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯುತ್ತವೆ.

ಕರ್ಪೂರದ ತುಂಡನ್ನು ತೆಗೆದುಕೊಂಡು ದೃಷ್ಟಿಗೆ ಒಳಗಾದ ವ್ಯಕ್ತಿಯ ತಲೆಯಿಂದ ಕಾಲಿನವರೆಗೆ ಕರ್ಪೂರ ಮೂಲಕ ಪ್ರದಕ್ಷಿಣಾಕಾರವಾಗಿ ತಿರುಗಿಸಿ. ನಂತರ ಆ ಕರ್ಪೂರವನ್ನು ನೆಲದ ಮೇಲೆ ಇಟ್ಟು ಸುಡಬೇಕು. ಇದು ವ್ಯಕ್ತಿಯ ಮೇಲಾಗಿರುವ ಕೆಟ್ಟ ದೃಷ್ಟಿಗಳನ್ನು ತೆಗೆದುಹಾಕುತ್ತದೆ.

ರಾತ್ರಿ ಅಡುಗೆ ಮನೆಯ ಕೆಲಸವೆಲ್ಲ ಮುಗಿದ ನಂತರ ಬೆಳ್ಳಿಯ ಬಟ್ಟಲಿನಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಟ್ಟು ಹಾಕಿ. ಇದನ್ನು ನಿಯಮಿತವಾಗಿ ಮಾಡುವುದರಿಂದ, ವ್ಯಕ್ತಿಯ ಸಂಪತ್ತು ವೃದ್ಧಿಸುತ್ತದೆ ಜೊತೆಗೆ ಧನಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಪೂರದ ಈ ಉಪಾಯವು ಪಿತ್ರ ದೋಷ ಮತ್ತು ಕಾಳಸರ್ಪ ದೋಷವನ್ನು ತೊಡೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಮೂರು ಬಾರಿ ಮನೆಯಲ್ಲಿ ಕರ್ಪೂರವನ್ನು ಉರಿಸುವುದರಿಂದ ಈ ದೋಷಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link