ನಟ ನಾಗಾರ್ಜುನ ವಿರುದ್ಧ ಕೇಸ್ ದಾಖಲು..! ಶಾಕ್‌ನಲ್ಲಿ ಫೀಲಿಂ ಇಂಡಸ್ಟ್ರಿ?

Sat, 05 Oct 2024-2:46 pm,

Case against nagarjuna: ನಟ ನಾಗಾರ್ಜುನ ಅವರ ಕುಟುಂಬ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಹೀಗಿರುವಾಗಲೇ ನಟ ಹಾಗೂ ನಾಯಕ ನಾಗಾರ್ಜುನ ಅವರ ಮೇಲೆ ಕೇಸ್‌ ದಾಖಲಾಗಿದ್ದು, ವಿಚಾರ ಕೇಳಿ ಇಡೀ ಫಿಲಿಂ ಇಂಡಸ್ಟ್ರಿ ಬೆಚ್ಚಿಬಿದ್ದಿದೆ.   

ಇತ್ತೀಚೆಗೆ ಸಮಂತಾ ಹಾಗೂ ನಾಗಚೈತನ್ಯ ಅವರ ವಿಚ್ಛೇಧನಕ್ಕೆ ಈ ಸಚಿವನೆ ಕಾರಣ ಹಾಗೂ ನಟ ನಾಗಾರ್ಜುನ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ನಟ ನಾಗಾರ್ಜುನ ತಮ್ಮ ಸೊಸೆಯಾದ ಸಮಂತಾರನ್ನು ಈ ಶಾಸಕನ ಬಳಿಗೆ ಕಳುಹಿಸಿದ್ದರು ಎಂದು ಸಚಿವೆ ಸುರೇಖಾ ಹೇಳಿಕೊಂಡಿದ್ದರು.  

ಸಚಿವೆ ನೀಡಿದ ಈ ಹೇಳಿಕೆಯ ನಂತರ ಇಡೀ ಟಾಲಿವುಡ್‌ ಗಣವೇ ಸಚಿವೆಯ ಹೇಳಿಕೆಗೆ ವಿರುದ್ಧವಾಗಿ ನಿಂತು ಆಕೆಯ ಮೇಲೆ ಕಿಡಿಕಾರಿತ್ತು.  

ಈಕೆ ನೀಡಿದ ಈ ಹೇಳಿಕೆಯ ಕಾರಣ ನಾಯಕ ನಾಗಾರ್ಜುನ ಆಕೆಯ ಮೇಲೆ ಮಾನ ನಷ್ಟ ಮೊಕದ್ದಮೆಯನ್ನು ಹೂಡಿದ್ದರು, ಇದರ ಬೆನ್ನಲ್ಲೆ ನಟನಿಗೆ ಶಾಕ್‌ ಸಿಕ್ಕಿದೆ.   

ನಾಯಕ ಅಕ್ಕಿನೇನಿ ನಾಗಾರ್ಜುನ ವಿರುದ್ಧ ಅಧ್ಯಕ್ಷ ಕಾಸಿರೆಡ್ಡಿ ಭಾಸ್ಕರ ರೆಡ್ಡಿ ಮಾದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ನಾಗಾರ್ಜುನ ಅವರು ತುಮ್ಮಿಡಿಕುಂಟಾ ಕೆರೆಯನ್ನು ಒತ್ತುವರಿ ಮಾಡಿ ಎನ್-ಕನ್ವೆನ್ಷನ್ ನಿರ್ಮಿಸಿದ್ದಾರೆ,ಎಂದು ಇವರು ನಟನ ವಿರುದ್ಧ ಕ್ರಿಮಿನಲ್ ಕೇಸ್‌ ಅನ್ನು ದಾಖಲು ಮಾಡುವಂತೆ ಕೋರಿದ್ದಾರೆ.   

ಭಾಸ್ಕರ ರೆಡ್ಡಿ ಅವರ ದೂರನ್ನು ಸ್ವೀಕರಿಸಿದ ಮಾದಾಪುರ ಪೊಲೀಸರು ಕಾನೂನಿನ ಅಭಿಪ್ರಾಯವನ್ನು ಕೋರಿ ನ್ಯಾಯಾಲಯಕ್ಕೆ ಈ ವಿಚಾರವನ್ನು ರವಾನಿಸಿದ್ದಾರೆ. ನಾಗಾರ್ಜುನ ಕೊಳವನ್ನು ಒತ್ತುವರಿ ಮಾಡಿ ಪರಿಸರ ನಾಶ ಮಾಡಿದ್ದಾರೆ ಹಾಗೂ ಕಾನೂನು ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.   

ಸದ್ಯ ಸಚಿವೆ ಸುರೇಖಾ ವಿರುದ್ಧ ನಾಂಪಲ್ಲಿ ನ್ಯಾಯಾಲಯದಲ್ಲಿ ನಟ ನಾಗಾರ್ಜುನ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದು, ನ್ಯಾಯಾಧೀಶರು ರಜೆಯಲ್ಲಿರುವ ಕಾರಣ ವಿಚಾರನೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.   

ಸದ್ಯ ಒಂದಾದ ಮೇಲೊಂದು ವಿವಾಧಕ್ಕೆ ನಟ ನಾಗಾರ್ಜುನ ಸಿಲುಕಿಕೊಂಡಿದ್ದು, ನಟನ ವಿರುದ್ಧ ದಾಕಲಾಗಿರುವ ದೂರಿನ ಕುರಿತ ವಿಚಾರ ತಿಳಿಯುತ್ತಿದ್ದಂತೆ ಇಂಡಸ್ಟ್ರಿ ಬೆಚ್ಚಿಬಿದ್ದಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link